
ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ದೇವೇಂದ್ರ ಬುನ್ನಾನ್ ಅವರ ಮುಂದಾಳತ್ವದಲ್ಲಿ, ಯುವ ವಿಭಾಗದ ಕಾರ್ಯಧ್ಯಕ್ಷ ರಿತೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಬ್ಯಾಡ್ಮಿಂಟನ್ ಪಂದ್ಯಾಟ ಜೂನ್ 22 ರಂದು ರವಿವಾರ ನಾಯಿಗಾಂವ್ ಪಶ್ಚಿಮ ಎಸ್ಎಫ್ಎಕ್ಸ್ ಟರ್ಫ್ ಮೈದಾನದಲ್ಲಿ, ಸಾಯಂಕಾಲ 4ರಿಂದ ರಾತ್ರಿ ಹತ್ತು ಗಂಟೆ ತನಕ ನಡೆಯಿತು.

ಸುಮಾರು 130ಕ್ಕೂ ಹೆಚ್ಚು ವಿಭಾಗದ ಸದಸ್ಯರು ಮತ್ತು ಮಹಿಳಾ ವಿಭಾಗದ ಸದಸ್ಯರು ಮತ್ತು ವಸಾಯಿ ಕರ್ನಾಟಕ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಪಾಲ್ಗೊಂಡ ಎಲ್ಲ ಸದಸ್ಯರಿಗೂ ಕಾಂಪ್ಲಿಮೆಂಟರಿ ಬಹುಮಾನ ನೀಡಲಾಯಿತು.ಪಂದ್ಯಾಟದ ಮಧ್ಯಂತರದಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಂದ್ಯಾಟವನ್ನು ಯಶಸ್ವಿಗೊಳಿಸಿದ ಎಲ್ಲ ಸದಸ್ಯರಿಗೂ ಯುವ ವಿಭಾಗದ ಕಾರ್ಯಧ್ಯಕ್ಷ ರಿತೇಶ್ ಶೆಟ್ಟಿ, ಕಾರ್ಯದರ್ಶಿ ರಿತಿನ್ ಶೆಟ್ಟಿ ಮತ್ತು ಕೋಶಾಧಿಕಾರಿ ಸರಣ್ಯ ಪೂಜಾರಿ ಹಾಗೂ ಎಲ್ಲಾ ಸದಸ್ಯರು ಕೃತಜ್ಞತೆಯನ್ನು ಸಲ್ಲಿಸಿದರು.s
B. Dinesh Kulal
Mob.: 9821868674




