32 C
Mumbai
March 7, 2026
Mumbai News Kannada
ಮುಂಬಯಿ

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಬಂಟ್ಸ್ ಸೆಂಟರ್ ನಲ್ಲಿ ಗುರುಪೂರ್ಣಿಮೆ.





ಅಕ್ಷರ ಅಭ್ಯಾಸವ ಕಲಿಸಿ , ಶಿಸ್ತು, ಸ್ನೇಹವ ಬೆಳೆಸಿ, ಜ್ಞಾನ ಸುಧೆಯ ನಮಗೆಲ್ಲ ಹರಸಿದವರೇ ಗುರುವರ್ಯರು – ಅಡ್ವೋಕೇಟ್ ಡಿ. ಕೆ. ಶೆಟ್ಟಿ.

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ವತಿಯಿಂದ      ಗುರುವಾರ10 . ರಂದು ಗುರುಪೂರ್ಣಿಮೆಯ ನಿಮಿತ್ತ ಜುಹೀ ನಗರದ ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಬಂಟ್ಸ್ ಸೆಂಟರ್ ನಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ  ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವದಲ್ಲಿ 
ನಡೆದ ಗುರು ವಂದನಾ ಕಾರ್ಯಕ್ರಮ ದಲ್ಲಿ ಸುಮಾರು 50 ಕಿಂತಲೂ ಹೆಚ್ಚು ಮಹಿಳೆಯರು ಭಾಗವಹಿಸಿ ಶ್ರೀ ಗುರು ನಿತ್ಯಾನಂದ ಸ್ವಾಮೀಜಿಯವರ ಭಾವಚಿತ್ರಕ್ಕೆ ಫಲ- ಪುಷ್ಪಾದಿಗಳನ್ನು ಅರ್ಪಿಸಿದರು.

ಬಳಿಕ  ಭಜನೆ ಹಾಗೂ ಕುಣಿತ ಭಜನೆಯೊಂದಿಗೆ ಬಹು ವಿಜೃಂಭಣೆಯಿಂದ ಗುರುಪೂರ್ಣಿಮೆಯನ್ನು  ಆಚರಿಸಲಾಯಿತು .

    ಬಾಂಬೆ ಬಂಟ್ಸ್ ಅಸೋಸಿಯೇಶನ್ ನ   ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ.ಶೆಟ್ಟಿ ಯವರು ಮಾತನಾಡುತ್ತಾ 
ಅಕ್ಷರ ಅಭ್ಯಾಸವ ಕಲಿಸಿ ,
ಶಿಸ್ತು ಸ್ನೇಹವ ಬೆಳೆಸಿ, ಜ್ಞಾನ ಸುಧೆಯ ನಮಗೆಲ್ಲ ಹರಸಿದವರೇ ಗುರುವರ್ಯರು ಸದಾ ನಾವು ಸ್ಮರಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ  ಉಪಾಧ್ಯಕ್ಷರಾದ  ಐಕಳ ಕಿಶೋರ್ ಶೆಟ್ಟಿ, ಗೌ ಪ್ರ ಕಾರ್ಯ ದರ್ಶಿ ನ್ಯಾಯವಾದಿ ಶೇಖರ ಶೆಟ್ಟಿ, ಖಜಾಂಚಿ ಸಿ ಎ ವಿಶ್ವನಾಥ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶಾಮ ಎನ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆಯರಾದ ಶಾರದಾ ಶೆಟ್ಟಿ, ಲತಾ ಜಿ. ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರಲ್ಲದೆ ಮಹಿಳಾ ವಿಭಾಗದ ಸಮಿತಿ ಸದಸ್ಯೆ ಗೀತಾ ಶೆಟ್ಟಿಯವರ ಪತಿ ಪನ್ವೇಲ್ ಕಾಂದಾ ಕಾಲೊನಿ  ದಿವಾಕರ ಕೆ. ಶೆಟ್ಟಿಯವರು ತುಂಬು ಸಹಕಾರ ನೀಡಿ ಉಪಸ್ಥಿತರಿದ್ದರು. 

ಕೊನೆಗೆ ಗುರು ದೇವರ ಭಾವಚಿತ್ರಕ್ಕೆ ಆರತಿ ಬೆಳಗಿಸಿ, ತೀರ್ಥ ಪ್ರಸಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು.



Related posts

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಕಾಲೇಜಿನ ದಶಮಾನೋತ್ಸವ ಸಂಭ್ರಮ

Mumbai News Desk

ನಮೋ ರಾಮೋ ರಾಮಜತ್ ಶರದ್ ಪೂರ್ಣಿಮಾ ಗರ್ಬಾ ಉತ್ಸವದಲ್ಲಿ ಜಗದಂಬಾ ಗ್ರೂಪ್ ದ್ವಿತೀಯ ಸ್ಥಾನ

Mumbai News Desk

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ.

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಸ್ಥಳಾಂತರ ಕಾರ್ಯಕ್ರಮ

Mumbai News Desk

ಒಕ್ಕಲಿಗರ ಸಂಘದ ಮಹಾರಾಷ್ಟ್ರ ಪದಾಧಿಕಾರಿಗಳು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ, ಮುಂಬೈಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಭರವಸೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ: ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಮಹಿಳೆಯರಿಗೆ ಫರ್‌ಘಂಟಿ ವಿತರಣೆ

Mumbai News Desk