ಮಂಗಳೂರು; ವಿಶ್ವ ಭಾರತಿ ಫ್ರೆಂಡ್ ಸರ್ಕಲ್
(ರಿ)ಕೋಡಿಕಲ್ಇವರ ವತಿಯಿಂದ ವಿಟಿ ರೋಡ್ ನಲ್ಲಿರುವ ಶ್ರೀನಿವಾಸ
ಓರಿಯಂಟಲ್ ಶಾಲಾ ಮಕ್ಕಳಿಗೆ 25.000 ರೂಪಾಯಿ ಮೊತ್ತದ ಸಮವಸ್ತ್ರ ವನ್ನು ಮುಖ್ಯೋಪಾಧ್ಯಾಯರ ಸಮಕ್ಷಮದಲ್ಲಿ ವಿತರಿಸಲಾಯಿತು .
ವಿಶ್ವ ಭಾರತಿ ಫ್ರೆಂಡ್ ಸರ್ಕಲ್ ನ ಅಧ್ಯಕ್ಷರಾದ ಶೀನ ನಾಯ್ಕ್ ಪೆರ್ಪುಲಾಡಿ ಮಾತನಾಡಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡಿ ಮಾತಪಿತರಿಗೆ ಮತ್ತು ಶಾಲೆಗೆ ಕೀರ್ತಿ ತರುವ ಕಾರ್ಯವನ್ನು ಮಾಡಬೇಕು. ದೇಶದ ಪ್ರಜ್ಞಾವಂತ ನಾಗರಿಕರಾಗಿ ಬಾಳಬೇಕು ಎಂದು ನುಡಿದರು.
ಶಾಲೆಯಮುಖ್ಯೋಪಾಧ್ಯಾಯರು ಶಶಿಕಲ .ಬಿ . ವಿಶ್ವ ಭಾರತಿ ಫ್ರೆಂಡ್ ಸರ್ಕಲ್ ನ ಅಧ್ಯಕ್ಷರಾದ ಶೀನ ನಾಯ್ಕ್ ಪೆರ್ಪುಲಾಡಿ,ಕಾರ್ಯದರ್ಶಿ ಪುರುಷೋತ್ತಮ್ ನಾಯ್ಕ್ ಜೊತೆ ಕಾರ್ಯದರ್ಶಿ ದಿನೇಶ್ ಕೋಡಿಕಲ್ ಮಾಜಿ ಅಧ್ಯಕ್ಷರಾಗಳುದ ರಾಮಕೃಷ್ಣ ಜೋಗಟ್ಟೆ ಮತ್ತು ರಾಜೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಶಾಲೆಯ ಸಂಸ್ಕೃತ ಶಿಕ್ಷಕರಾದ ಅನಂತ ರಾಮ ಭಟ್ ನಿರೂಪಿಸಿದರು ಹಾಗೂ ಶಾಲೆ ಯ ಶಿಕ್ಷಕರೆಲ್ಲರೂ ಸಹಕರಿಸಿದರು.




