
ಪಲಿಮಾರು ಸಾಲಿಯಾನ್ ಆದಿ ಮೂಲಸ್ಥಾನದಲ್ಲಿ ಇತ್ತೀಚೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡವು.
ಏಪ್ರಿಲ್ 26ರ ಭಾನುವಾರ ಬೆಳಿಗ್ಗೆ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ನಾಗತಂಬಿಲ ಹಾಗೂ ನಾಗದರ್ಶನ ಸೇವೆಗಳು ವಿಜೃಂಭಣೆಯಿಂದ ನಡೆದವು. ಮಧ್ಯಾಹ್ನ ಕುಟುಂಬದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಪ್ರಸಾದ ಸ್ವೀಕರಿಸಿ ಧನ್ಯತೆ ಅನುಭವಿಸಿದರು. ಬಳಿಕ ಏಪ್ರಿಲ್ 28ರ ಮಂಗಳವಾರದಂದು ಬೆಳಿಗ್ಗೆ ವಾರ್ಷಿಕ ಚೌತಿ ಪೂಜೆ ಸಾಂಗವಾಗಿ ನೆರವೇರಿತು. ಅಂದು ರಾತ್ರಿ ಗಂಟೆ 7:00 ರಿಂದ ದೈವದ ತಂಬಿಲ ಹಾಗೂ ಪಂಜುರ್ಲಿ ದರ್ಶನ ಸೇವೆಗಳು ನಡೆದವು. ದೈವದ ಅಭಯ ನುಡಿಗಳೊಂದಿಗೆ ಸಮಾಜದ ಹಾಗೂ ಕುಟುಂಬದ ಸಕಲರಿಗೂ ಒಳಿತಾಗಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಮಕ್ತಾಯವಾಯಿತು.




ಅನ್ನದಾನ ಸೇವೆ ಹಾಗೂ ಇತರ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸದಾಶಿವ ಪಡುಬಿದ್ರಿ, ಗೌರವಾಧ್ಯಕ್ಷರಾದ ಪಿ. ಆರ್. ಸಾಲಿಯಾನ್, ಪ್ರಭಾಕರ ಸಾಲ್ಯಾನ್, ಮುಂಬಯಿ ಶಾಖೆಯ ಅಧ್ಯಕ್ಷರಾದ ಮುಂಡ್ಕೂರು ಸುರೇಂದ್ರ ಸಾಲಿಯಾನ್ ಮತ್ತು ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಎಸ್. ಪುತ್ರನ್ ಸೇರಿದಂತೆ ಊರ ಪರವೂರ ನೂರಾರು ಕುಟುಂಬಿಕರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.




