April 30, 2026
Mumbai News Kannada
ತುಳುನಾಡು

ಸಾಲಿಯಾನ್ ಆದಿ ಮೂಲಸ್ಥಾನ ಪಲಿಮಾರು : ವಾರ್ಷಿಕ ನಾಗದರ್ಶನ ಹಾಗೂ ದೈವದ ತಂಬಿಲ ಸೇವೆ ಸಂಪನ್ನ





ಪಲಿಮಾರು ಸಾಲಿಯಾನ್ ಆದಿ ಮೂಲಸ್ಥಾನದಲ್ಲಿ ಇತ್ತೀಚೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡವು.

ಏಪ್ರಿಲ್ 26ರ ಭಾನುವಾರ ಬೆಳಿಗ್ಗೆ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ನಾಗತಂಬಿಲ ಹಾಗೂ ನಾಗದರ್ಶನ ಸೇವೆಗಳು ವಿಜೃಂಭಣೆಯಿಂದ ನಡೆದವು. ಮಧ್ಯಾಹ್ನ ಕುಟುಂಬದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಪ್ರಸಾದ ಸ್ವೀಕರಿಸಿ ಧನ್ಯತೆ ಅನುಭವಿಸಿದರು. ಬಳಿಕ ಏಪ್ರಿಲ್ 28ರ ಮಂಗಳವಾರದಂದು ಬೆಳಿಗ್ಗೆ ವಾರ್ಷಿಕ ಚೌತಿ ಪೂಜೆ ಸಾಂಗವಾಗಿ ನೆರವೇರಿತು. ಅಂದು ರಾತ್ರಿ ಗಂಟೆ 7:00 ರಿಂದ ದೈವದ ತಂಬಿಲ ಹಾಗೂ ಪಂಜುರ್ಲಿ ದರ್ಶನ ಸೇವೆಗಳು ನಡೆದವು. ದೈವದ ಅಭಯ ನುಡಿಗಳೊಂದಿಗೆ ಸಮಾಜದ ಹಾಗೂ ಕುಟುಂಬದ ಸಕಲರಿಗೂ ಒಳಿತಾಗಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಮಕ್ತಾಯವಾಯಿತು.

ಅನ್ನದಾನ ಸೇವೆ ಹಾಗೂ ಇತರ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸದಾಶಿವ ಪಡುಬಿದ್ರಿ, ಗೌರವಾಧ್ಯಕ್ಷರಾದ ಪಿ. ಆರ್. ಸಾಲಿಯಾನ್, ಪ್ರಭಾಕರ ಸಾಲ್ಯಾನ್, ಮುಂಬಯಿ ಶಾಖೆಯ ಅಧ್ಯಕ್ಷರಾದ ಮುಂಡ್ಕೂರು ಸುರೇಂದ್ರ ಸಾಲಿಯಾನ್ ಮತ್ತು ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಎಸ್. ಪುತ್ರನ್ ಸೇರಿದಂತೆ ಊರ ಪರವೂರ ನೂರಾರು ಕುಟುಂಬಿಕರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.



Related posts

ಕಾಪು ನವದುರ್ಗಾ ಲೇಖನ ಯಜ್ಞ ಸಮಿತಿ ಉದ್ಘಾಟನಾ ಕಾರ್ಯಕ್ರಮದ ತುಣುಕುಗಳು.

Mumbai News Desk

ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ, ಸಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರ ಅವರಿಗೆ ಸನ್ಮಾನ

Mumbai News Desk

ಮುಲ್ಕಿ : ಕೊಳಚಿಕಂಬಳ ದೈವಸ್ಥಾನದಲ್ಲಿ ವೈಭವದ ನೇಮೋತ್ಸವ ಸಂಪನ್ನ

Mumbai News Desk

ದೊಡ್ಡಣಗುಡ್ಡೆ: ಕೋಟಿ ಲಲಿತಾ ಸಹಸ್ರನಾಮ ಪಾರಾಯಣ ಮಹಾಯಜ್ಞದ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆ

Mumbai News Desk

ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: 2027ರ ಫೆಬ್ರವರಿ 18 ರಿಂದ 28ರ ವರೆಗೆ ದಿನಾಂಕ ನಿಗದಿ; ಸಮಿತಿ ಕಚೇರಿ ಉದ್ಘಾಟನೆ

Mumbai News Desk

ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮ ಶ್ರೀ ಗುರು ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk