September 6, 2026
Mumbai News Kannada
ಮುಂಬಯಿ

ರೇ ರೋಡ್ ಶ್ರೀ ಅಯ್ಯಪ್ಪ  ಭಕ್ತ ವೃಂದದ ಮಂದಿರದ ವರ್ಧಂತ್ಯೋತ್ಸವ.





ಬದುಕಿನಲ್ಲಿ ಯಾವುದೇ ಕಷ್ಟಗಳು ಎದುರಾದರೂ  ಆಧರ್ಮದಲ್ಲಿ ನಡೆಯಬಾರದು: ಸತೀಶ್ ಗುರುಸ್ವಾಮಿ

ಚಿತ್ರ ವರದಿ ದಿನೇಶ್ ಕುಲಾಲ್ 

ಮುಂಬಯಿ, ಜು. 18  ; ರೇ ರೋಡ್.

ದಾರುಖಾನ ಹೊಟೇಲ್ ಉಡುಪಿಯಲ್ಲಿ ಸತೀಶ್ ಗುರುಸ್ವಾಮಿಯವರು ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡಿರುವಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ

 ಮಂದಿರದ ವರ್ಧಂತ್ಯೋತ್ಸವನ್ನು ಸತೀಶ್ ಗುರುಸ್ವಾಮಿಯವರ ಮಹಾಪೂಜೆಯನ್ನು ನಡೆಸಿದರು..

ಬೆಳಗ್ಗೆ ಮಹಾಪೂಜೆ ನಡೆದ ನಂತರ ಅಪ್ಪಾಜಿ ಬೀಡು ವರ್ಲಿಯ ಮಹಿಳಾ ಮಂಡಳಿ ಹಾಗೂ ರೇ  ರೋಡ್ ಭಕ್ಕ ವೃಂದ ಇವರಿಂದ ಭಜನ ಸಂಕೀರ್ತನೆ ನಂತರ ಮಹಾ ಮಂಗಳಾರತಿ ಜರುಗಿತು. ದಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ  ಅಪ್ಪಾಜಿ ಬೀಡು ಗುರುಸ್ವಾಮಿ ರಮೇಶ್ ಗುರುಸ್ವಾಮಿ ಸಹಕರಿಸಿದರು.

ಮಹಾ ಪೂಜೆಯನ್ನು ನಡೆಸಿದ ಸತೀಶ್ ಗುರುಸ್ವಾಮಿಯವರು ಬಳಿಕ   ಮಾರ್ಗದರ್ಶನದ ಮಾತನಾಡುತ್ತಾ  ಬದುಕಿನಲ್ಲಿ ಯಾವುದೇ ಕಷ್ಟಗಳು ಎದುರಾದರೂ ಕೂಡ ಆಧರ್ಮದಲ್ಲಿ ನಡೆಯಬಾರದು. ಭಗವಂತನ ಮೇಲೆ ವಿಶ್ವಾಸವನ್ನಿಟ್ಟು ಬದುಕು ಮುನ್ನಡೆಸಬೇಕು ಎಂದು ನುಡಿದರು.

ಅನ್ನದಾನ ಸೇವೆ ನೀಡಿದ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಶೆಟ್ಟಿ , ಮತ್ತು ಹರೀಶ್ ಶೆಟ್ಟಿ ಯವರಿಗೆ, ಹೂವಿನ ಸೇವೆ ನೀಡಿದ ವಿಶ್ವನಾಥ್ ಶೆಟ್ಟಿ , ಮಂದಿರಕ್ಕೆ ಸ್ಥಳಾವಕಾಶ ನೀಡಿದ ರೇ ರೋಡ್ ಹೋಟೆಲ್ ಉಡುಪಿ ಮಾಲಿಕರಾದ ಶುಭನಂದ ಶೆಟ್ಟಿಯವರನ್ನು ಹಾಗೂ ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಸಿದ ಸರ್ವ ಭಕ್ತರಿಗೆ ರೇ ರೋಡ್ ಸ್ವಾಮಿ ಅಯ್ಯಪ್ಪ ಭಕ್ತ ವೃಂದದ ಸತೀಶ್ ಗುರುಸ್ವಾಮಿ , ಗೌರವ ಅಧ್ಯಕ್ಷ ಮಂಜುನಾಥ ಶೆಟ್ಟಿ , ಅಧ್ಯಕ್ಷ ಕಿಶೋರ್ ಶೆಟ್ಟಿ ಕಟಪಾಡಿ, ಸಂಚಾಲಕ ಜಗನ್ನಾಥ ಶೆಟ್ಟಿ,  ಉಪಾಧ್ಯಕ್ಷ ಬೆಳಪು ಪ್ರದೀಪ್ ಶೆಟ್ಟಿ,  ಕಾರ್ಯದರ್ಶಿ ಶಿಬರೂರು ಗುತ್ತು ಸುರೇಶ್ ಶೆಟ್ಟಿ ,  ಕೋಶಾಧಿಕಾರಿ ರವಿ ಮೂಳೂರು , ಜೊತೆ ಕಾರ್ಯದರ್ಶಿ ಸುಕೇಶ್ ಸ್ವಾಮಿ, ಜೊತೆ ಕೋಶಾಧಿಕಾರಿ  ರೂಪೇಶ್ ಸಾಣೂರು  ಹಾಗೂ ಮಂಜುನಾಥ ಗುರುಸ್ವಾಮಿ ಸೋಮೇಶ್ವರ, ಜಯ ಗುರುಸ್ವಾಮಿ ಅಡ್ವೆ  ಹಾಗೂ ಕಮಿಟಿ ಸದಸ್ಯರು ಉಪಸ್ಥಿತರಿದ್ದ ಎಲ್ಲಾ ಭಕ್ತರಿಗೆ  ಕೃತಜ್ಞತೆ ಸಲ್ಲಿಸಿದರು.

B. Dinesh Kulal

Mob.: 9821868674



Related posts

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ-ಭಾಯಂದರ್ ವತಿಯಿಂದ ಬಿ.ಎಸ್. ಕುರ್ಕಾಲ್ ದತ್ತಿನಿಧಿ ಪ್ರಶಸ್ತಿ ಪ್ರಧಾನ

Mumbai News Desk

ಜೀರ್ಣೋದ್ಧಾರಗೊಂಡ ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕುಂಭಾಭಿಷೇಕ.

Mumbai News Desk

ತುಳುವೆಲ್‌ಫೇರ ಎಸೋಸಿಯೇಶನ್ ಡೊಂಬಿವಲಿ : ದಾಸರ ಭಜನಾ ಸ್ಪರ್ಧೆ.

Mumbai News Desk

ಎಸ್ ಎಸ್ ಸಿ ಪರೀಕ್ಷೆ: ರಕ್ಷ್ಮಾ ಜಯಂತ್ ಕುಳಾಯಿಗೆ ಶೇ. 99.20 ಅಂಕ

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ –  35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk