ಮುಂಬಯಿ ಜು23. ಶ್ರೀ ರಜಕ ಸಂಘ ಮುಂಬಯಿ(ರಿ) ಇದರ 86ನೇ ವಾರ್ಷಿಕ ಮಹಾ ಸಭೆಯು ಜುಲೈ 27ರಂದು ರವಿವಾರ ಬೆಳಿಗ್ಗೆ ಗಂಟೆ 9-30ಕ್ಕೆ
ಸರಿಯಾಗಿ ಸ್ವಾಮಿ ನಿತ್ಯಾನಂದ ಹಾಲ್, ಮುಖ್ಯ ಅಧ್ಯಾಪಕ ಭವನ, ಪ್ಲಾಟ್ ನಂ. 6ಬಿ, ಸಾಯನ್ ಸರ್ಕಲ್ ಎದುರುಗಡೆ, ಸಾಯನ್ (ಪ), ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷರಾದ ಸಿ ಎ ವಿಜಯ್ ಕುಂದರ್ ಅಧ್ಯಕ್ಷತೆಯಲ್ಲಿ ಜರಗಲಿರುವುದು.
ಎಚ್ ಎಸ್ ಸಿ ಮತ್ತು ಎಸ್ ಎಸ್ ಸಿ ಯಲ್ಲಿ ಉತ್ತಮ ಶ್ರೇಣಿಯಲ್ಲಿ ಅಂಕ ಗಳಿಸಿ ಉತ್ತೀರ್ಣರಾದ ಸಮಾಜ ಬಾಂಧವರ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಜಕ ಬಾಂಧವರೆಲ್ಲರೂ ಈ ಮಹಾಸಭೆಯಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಕೊಡಬೇಕಾಗಿ ಆಡಳಿತ ಮಂಡಳಿಯ ಪರವಾಗಿ, ಕಾರ್ಯದರ್ಶಿ ಸುಮಿತ್ರ ಪಲಿಮಾರ್ ರವರು ವಿನಂತಿಸಿರುವರು.
———-




