30.9 C
Mumbai
June 8, 2026
Mumbai News Kannada
ಮುಂಬಯಿ

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ –  ತನ್ನನ್ನು ತಾನು ಅರಿತುಕೊಳ್ಳುವುದೇಅಧ್ಯಾತ್ಮಿಕ :ಒಡಿಯೂರು ಶ್ರೀ 





ಚಿತ್ರ ವರದಿ : ದಿನೇಶ್ ಕುಲಾಲ್

ಬದುಕು ಎಚ್ಚರಿಕೆಯಿಂದ ಮುನ್ನಡೆಯಬೇಕು ತಾಂತ್ರಿಕ ಯುಗದಲ್ಲಿ ಮೊಬೈಲ್ ಎಂಬ ಅಸ್ತ್ರ ನಮಗೆ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಮಾಡುತ್ತದೆ, ಬಳಕೆ ಮಾಡುವಾಗ ಜಾಗರೂಕತೆ ವಹಿಸಬೇಕು. ಮಾನವನು ಮಾಧವನಾಗಬೇಕು ನಮ್ಮ ಬದುಕು ಭಗವಂತನಿಗೆ ಸಂಬಂಧವಾಗಿರಬೇಕು. ತನ್ನನ್ನು ತಾನು ಅರಿತುಕೊಳ್ಳುವುದೇ ಆಧ್ಯಾತ್ಮಿಕ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

    ಶ್ರೀ ಗುರುದೇವ ಸೇವಾ ಬಳಗ ಥಾಣೆಯ ಸದಸ್ಯರ ಆಯೋಜನೆಯಲ್ಲಿ ಪರಮಪೂಜ್ಯ ಶ್ರೀಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ ಮತ್ತು ಸತ್ಸಂಗ ಕಾರ್ಯಕ್ರಮ ಜು 22 ,  ಥಾಣ ಪಶ್ಚಿಮದ  ಎಲ್.ಬಿ.ಎಸ್. ಮಾರ್ಗ,ರಹೇಜಾ ಗಾರ್ಡನ್ ಎದುರುಗಡೆಯ ಉದಯ್ ಶೆಟ್ಟಿ ಅವರ ಮಾಲಕತ್ತದ ಹೊಟೇಲ್ ವುಡ್‌ಲ್ಯಾಂಡ್ ರಿಟ್ರೇಟ್ ಸಭಾಗೃಹದಲ್ಲಿ, ನಡೆಯಿತು., 

  ಪ್ರತಿಯೊಬ್ಬನು ಭಗವಂತನನ್ನು ಸಾಕ್ಷಾತ್ಕರಿಸುವುದಕ್ಕಾಗಿ ಭಜನೆಯನ್ನು ಮಾಡಬೇಕು ಅದರಿಂದ ಸಂತೋಷವೂ ಇದೆ ಮತ್ತು ಆತ್ಮಜ್ಞಾನ ಹಾಗೂ ಶಾರೀರಿಕ  ಹಸಿವು ನೀಗುತ್ತದೆ. ಈ ಪರಿಸರದಲ್ಲಿ ಬಹಳ ವರ್ಷಗಳಿಂದ ಗುರು ಭಕ್ತರು ಗುರುವಿಗಾಗಿ ಅಮೂಲ್ಯ ಸಮಯವನ್ನು ನೀಡುತ್ತಾರೆ ಅಲ್ಲದೆ ಮನೆ ಮನೆಯಲ್ಲಿ ಭಜನೆಯನ್ನು ಪ್ರಾರಂಭಿಸಿ ಸೇವಾ ಬಳಗದ ಸೇವೆಗಳನ್ನು ಜನಮಾನಸ್ಸದಲ್ಲಿ ಉಳಿಯುವಂತೆ ಸೇವೆ ಮಾಡುತ್ತಿದ್ದಾರೆ ಎಂದು ಒಡಿಯೂರು ಶ್ರೀ ಗಳು ನುಡಿದರು.

ಪ್ರಾರಂಭದಲ್ಲಿ ಉದಯ ಶೆಟ್ಟಿ ಮತ್ತು ಶುಭಲಕ್ಷ್ಮಿ ಉದಯ ಶೆಟ್ಟಿ ದಂಪತಿಗಳು ಪಾದಪೂಜೆಯನ್ನು ನಡೆಸಿದರು. ನವೋದಯ ಭಜನಾ ಮಂಡಳಿಯವರಿಂದ  ಭಜನೆ ನಡೆದರೆ ಶ್ರೀ ಒಡಿಯೂರು ಸಂಸ್ಥಾನದ ಸಾದ್ವಿ, ಮಾತಾನಂದಮಯಿ ಮಂತ್ರಪಟಿಸಿದರು.
ಕಾರ್ಯಕ್ರಮವನ್ನು ಸ್ವಾಮೀಜಿಯೊಂದಿಗೆ ಉದಯ ಶೆಟ್ಟಿ ದಂಪತಿ ಮತ್ತು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ದಾಮೋದರ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಉಪಾಧ್ಯಕ್ಷ ಮೋಹನ್ ಹೆಗ್ಡೆ,  ,  ಚಂದ್ರಾಹಾಸ್  ರೈ,. ಮನೋಜ್ ಹೆಗ್ಡೆ, ಮಹಿಳಾ ಸದಸ್ಯರು. ಭಜನಾ ತಂಡದವರು ಸೇರಿ
ದೀಪ ಬೆಳಗಿಸಿ ಉದ್ಘಾಟಿಸಿದರು

ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡಿದ್ದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಮೀಜಿಯವರ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವಾಕಾರ್ಯಗಳನ್ನು ಭಕ್ತರಿಗೆ ತಿಳಿಸಿದರು.



Related posts

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವೈಭವಮಯ ನವರಾತ್ರಿ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಇಂಟರ್ನ್ಯಾಷನಲ್ ಶಾಲೆಯ ಆಯೋಜನೆಯಲ್ಲಿ ರಾಷ್ಟ್ರಮಟ್ಟದ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿಗಳಿಗೆ  ವಾಲಿಬಾಲ್‌ ಪಂದ್ಯಾಟದ ಉದ್ಘಾಟನೆ. 

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ :

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ,

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ಗ್ರಂಥಾಯನ ವಿಭಾಗ’:ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಮತ್ತು ‘ಮುಂಬೈ ಕನ್ನಡ ಗದ್ಯ ವಾಹಿನಿ’ ಕೃತಿಗಳ ಬಿಡುಗಡೆ

Mumbai News Desk