July 23, 2026
Mumbai News Kannada
ಮುಂಬಯಿ

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ –  ತನ್ನನ್ನು ತಾನು ಅರಿತುಕೊಳ್ಳುವುದೇಅಧ್ಯಾತ್ಮಿಕ :ಒಡಿಯೂರು ಶ್ರೀ 







ಚಿತ್ರ ವರದಿ : ದಿನೇಶ್ ಕುಲಾಲ್

ಬದುಕು ಎಚ್ಚರಿಕೆಯಿಂದ ಮುನ್ನಡೆಯಬೇಕು ತಾಂತ್ರಿಕ ಯುಗದಲ್ಲಿ ಮೊಬೈಲ್ ಎಂಬ ಅಸ್ತ್ರ ನಮಗೆ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಮಾಡುತ್ತದೆ, ಬಳಕೆ ಮಾಡುವಾಗ ಜಾಗರೂಕತೆ ವಹಿಸಬೇಕು. ಮಾನವನು ಮಾಧವನಾಗಬೇಕು ನಮ್ಮ ಬದುಕು ಭಗವಂತನಿಗೆ ಸಂಬಂಧವಾಗಿರಬೇಕು. ತನ್ನನ್ನು ತಾನು ಅರಿತುಕೊಳ್ಳುವುದೇ ಆಧ್ಯಾತ್ಮಿಕ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

    ಶ್ರೀ ಗುರುದೇವ ಸೇವಾ ಬಳಗ ಥಾಣೆಯ ಸದಸ್ಯರ ಆಯೋಜನೆಯಲ್ಲಿ ಪರಮಪೂಜ್ಯ ಶ್ರೀಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ ಮತ್ತು ಸತ್ಸಂಗ ಕಾರ್ಯಕ್ರಮ ಜು 22 ,  ಥಾಣ ಪಶ್ಚಿಮದ  ಎಲ್.ಬಿ.ಎಸ್. ಮಾರ್ಗ,ರಹೇಜಾ ಗಾರ್ಡನ್ ಎದುರುಗಡೆಯ ಉದಯ್ ಶೆಟ್ಟಿ ಅವರ ಮಾಲಕತ್ತದ ಹೊಟೇಲ್ ವುಡ್‌ಲ್ಯಾಂಡ್ ರಿಟ್ರೇಟ್ ಸಭಾಗೃಹದಲ್ಲಿ, ನಡೆಯಿತು., 

  ಪ್ರತಿಯೊಬ್ಬನು ಭಗವಂತನನ್ನು ಸಾಕ್ಷಾತ್ಕರಿಸುವುದಕ್ಕಾಗಿ ಭಜನೆಯನ್ನು ಮಾಡಬೇಕು ಅದರಿಂದ ಸಂತೋಷವೂ ಇದೆ ಮತ್ತು ಆತ್ಮಜ್ಞಾನ ಹಾಗೂ ಶಾರೀರಿಕ  ಹಸಿವು ನೀಗುತ್ತದೆ. ಈ ಪರಿಸರದಲ್ಲಿ ಬಹಳ ವರ್ಷಗಳಿಂದ ಗುರು ಭಕ್ತರು ಗುರುವಿಗಾಗಿ ಅಮೂಲ್ಯ ಸಮಯವನ್ನು ನೀಡುತ್ತಾರೆ ಅಲ್ಲದೆ ಮನೆ ಮನೆಯಲ್ಲಿ ಭಜನೆಯನ್ನು ಪ್ರಾರಂಭಿಸಿ ಸೇವಾ ಬಳಗದ ಸೇವೆಗಳನ್ನು ಜನಮಾನಸ್ಸದಲ್ಲಿ ಉಳಿಯುವಂತೆ ಸೇವೆ ಮಾಡುತ್ತಿದ್ದಾರೆ ಎಂದು ಒಡಿಯೂರು ಶ್ರೀ ಗಳು ನುಡಿದರು.

ಪ್ರಾರಂಭದಲ್ಲಿ ಉದಯ ಶೆಟ್ಟಿ ಮತ್ತು ಶುಭಲಕ್ಷ್ಮಿ ಉದಯ ಶೆಟ್ಟಿ ದಂಪತಿಗಳು ಪಾದಪೂಜೆಯನ್ನು ನಡೆಸಿದರು. ನವೋದಯ ಭಜನಾ ಮಂಡಳಿಯವರಿಂದ  ಭಜನೆ ನಡೆದರೆ ಶ್ರೀ ಒಡಿಯೂರು ಸಂಸ್ಥಾನದ ಸಾದ್ವಿ, ಮಾತಾನಂದಮಯಿ ಮಂತ್ರಪಟಿಸಿದರು.
ಕಾರ್ಯಕ್ರಮವನ್ನು ಸ್ವಾಮೀಜಿಯೊಂದಿಗೆ ಉದಯ ಶೆಟ್ಟಿ ದಂಪತಿ ಮತ್ತು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ದಾಮೋದರ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಉಪಾಧ್ಯಕ್ಷ ಮೋಹನ್ ಹೆಗ್ಡೆ,  ,  ಚಂದ್ರಾಹಾಸ್  ರೈ,. ಮನೋಜ್ ಹೆಗ್ಡೆ, ಮಹಿಳಾ ಸದಸ್ಯರು. ಭಜನಾ ತಂಡದವರು ಸೇರಿ
ದೀಪ ಬೆಳಗಿಸಿ ಉದ್ಘಾಟಿಸಿದರು

ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡಿದ್ದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಮೀಜಿಯವರ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವಾಕಾರ್ಯಗಳನ್ನು ಭಕ್ತರಿಗೆ ತಿಳಿಸಿದರು.



Related posts

ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ಮುಂಬಯಿ 2ನೇ ವೈಜ್ಞಾನಿಕ ಸಭೆ, ಉಪನ್ಯಾಸ.

Mumbai News Desk

ಬಿಲ್ಲವರ ಅಸೋಸಿಯೇಷನ್, ಮುಂಬೈಡೊಂಬಿವಲಿ ಸ್ಥಳೀಯ ಕಚೇರಿ, ಸಾಮೂಹಿಕ ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ಬೋರಿವಲಿ ಪಶ್ಚಿಮದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk

ಭಾರತ್ ಬ್ಯಾಂಕ್ ಈ ವರ್ಷದ 2024 ಕ್ಯಾಲೆಂಡರ್ ಬಿಡುಗಡೆ.

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಆಚರಣೆ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ನಾಡಹಬ್ಬದ ನಿಮಿತ್ತ ‘ಕವಿಗೋಷ್ಠಿ’ಯ ವೈಭವ

Mumbai News Desk