32 C
Mumbai
April 24, 2026
Mumbai News Kannada
ಮುಂಬಯಿ

ಮುಂಬೈ ‘ಎನ್ಕೌಂಟರ್ ಸ್ಪೆಶಲಿಸ್ಟ್’ ದಯಾ ನಾಯಕ್ ನಿವೃತ್ತಿಗೆ ಎರಡು ದಿನಗಳ ಮೊದಲು ಎಸಿಪಿ ಹುದ್ದೆಗೆ ಬಡ್ತಿ





ಮುಂಬೈ ಪೋಲಿಸರ ಅಪರಾಧ ವಿಭಾಗದಲ್ಲಿ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಎನ್ಕೌಂಟರ್ ಸ್ಪೆಷಲಿಸ್ಟ್ ಮಂಗಳವಾರ ಸಹಾಯಕ ಅಯುಕ್ತ (ಎಸಿಪಿ )ಹುದ್ದೆಗೆ ಬಡ್ತಿ ನೀಡಲಾಗಿದ್ದು, ಅವರು ಗುರುವಾರ (ಜುಲೈ 31ರಂದು) ನಿವೃತ್ತರಾಗಲಿದ್ದಾರೆ.
ಮುಂಬೈ ಪೋಲಿಸರ ಗಣ್ಯ ಅಪರಾಧ ಪತ್ತೆ ವಿಭಾಗದ ನಿರ್ಣಾಯಕ ಘಟಕ -9ರ ಮುಖ್ಯಸ್ಥರಾಗಿ ನಾಯಕ್ ಅವರ ಕೊಡುಗೆಗಳು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವರು ಇತ್ತೀಚಿನ ದಿನಗಳಲ್ಲಿ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಲಾರೆನ್ಸ್ ಬಿಷ್ಣಾಯ್ ಗ್ಯಾಂಗ್ ಸದಸ್ಯರು ನಡೆಸಿದ ಗುಂಡಿನ ದಾಳಿ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿ ಪಿ )ನಾಯಕ ಬಾಬಾ ಸಿದ್ದಿಕ್ ಮತ್ತು ನಟ ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಸೇರಿದಂತೆ ಕೆಲವು ಸಂವೇದನಾಶೀಲ ಮತ್ತು ಉನ್ನತ ಮಟ್ಟದ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ದಯಾ ನಾಯಕ್ 1995 ರಲ್ಲಿ ಮುಂಬೈ ಪೊಲೀಸ್ ಪಡೆಗೆ ಸೇರಿ, ಮೊದಲು ಜೂಹು ಠಾಣೆಯಲ್ಲಿ ನಿಯುಕ್ತಿಗೊಂಡರು. 1990 ಮತ್ತು 2000 ದಶಕದ ಆರಂಭದಲ್ಲಿ ದರೋಡೆಕೋರರನ್ನು ನಿರ್ಮೂಲನೆ ಮಾಡುವಲ್ಲಿ ತೊಡಗಿದ್ದ ತಂಡದ ಪ್ರಮುಖ ಸದಸ್ಯರಾದ ನಂತರ ಅವರು ಖ್ಯಾತಿಗಳಿಸಿದರು. ಅವರು ಮೊದಲ ಎನ್ಕೌಂಟರ್ 1996, ಡಿಸೆಂಬರ್ ನಲ್ಲಿ, ಛೋಟಾ ರಾಜನ್ ಗ್ಯಾಂಗ್ ನ ಇಬ್ಬರು ಸದಸ್ಯರನ್ನು ಹೊಡೆದುರುಳಿಸುವ ಮೂಲಕ ನಡೆಯಿತು.
ಅವರು 84 ಎನ್ಕೌಂಟರ್ ಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
2006ರಲ್ಲಿ ಅವರ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಕ್ಕಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು. ಆದರೆ 2011ರಲ್ಲಿ ಅವರನ್ನು ಮತ್ತೆ ನೇಮಿಸಲಾಯಿತು, ನಂತರ ಅವರನ್ನು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಯಿತು. ಅಲ್ಲಿ ಅವರು ಹಲವಾರು ಮಾದಕ ವಸ್ತು ಪೂರೈಸಿದಾರರನ್ನು ಬಂಧಿಸಿದರು. ನಂತರ ನಾಯಕ್ ಅವರನ್ನು ಮುಂಬೈ ಅಪರಾಧ ಶಾಖೆಗೆ ವರ್ಗಾಯಿಸಲಾಯಿತು.
ನಾನಾ ಪಾಟೇಕರ್ ಅಭಿನಯದ ‘ಅಬ್ ತಕ್ ಛಪ್ಪನ್’ ಖ್ಯಾತಿಯ ನಾಯಕ್ 1990 ದಶಕದಲ್ಲಿ ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಜೊತೆ ಸಂಬಂಧ ಹೊಂದಿದ್ದ ಹಲವಾರು ದರೋಡೆಕೋರರನ್ನು ಗುಂಡಿಕ್ಕಿ ಕೊಂದ ಪೊಲೀಸ್ ಪಡೆಯಲ್ಲಿ ಚಿರಪರಿಚತರಾಗಿರುವ ಬೆರಳಣಿಕೆಯಷ್ಟು ಎನ್ಕೌಂಟರ್ ಸ್ಪೆಶಲಿಸ್ಟ್ ಗಳಲ್ಲಿ ಒಬ್ಬರು.
ಈ ಬಗ್ಗೆ ‘X’ ನಲ್ಲಿ ಮಾಹಿತಿ ನೀಡಿದ ದಯಾ ನಾಯಕ್ “ನನಗೆ ಸಹಾಯಕ ಪೊಲೀಸ್ ಆಯುಕ್ತ ಆಗಿ ಬಡ್ತಿ ನೀಡಲಾಗಿದೆ ಎಂದು ಹೆಮ್ಮೆ ಮತ್ತು ಕೃತಜ್ಞತೆಯಿಂದ ತಿಳಿಸಲು ಬಯಸುತ್ತೇನೆ, ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲು ನನಗೆ ಹೆಚ್ಚಿನ ಸಮಯ ಸಿಗಲಿ ಎಂದು ನಾನು ಇಚ್ಚಿಸುತ್ತೇನೆ. ಆದರೆ ನಾನು ನನ್ನ ರಾಜ್ಯ ಮತ್ತು ದೇಶಕ್ಕೆ ಪೂರ್ಣ ನಿಷ್ಠೆ ಮತ್ತು ಸಾಮರ್ಥ್ಯದಿಂದ ಸೇವೆ ಸಲ್ಲಿಸಿದ್ದೇನೆ ಎಂದು ನಾನು ಪೂರ್ಣ ತೃಪ್ತಿಯಿಂದ ಹೇಳಬಲ್ಲೆ, ಇದು ಗೌರವಾನ್ವಿತ ಮೈಲಿಗಲ್ಲು ಮತ್ತು ಅದನ್ನು ತಲುಪುವ ಪ್ರಯಾಣವು ನನಗೆ ಹೆಮ್ಮೆಯ ವಿಷಯವಾಗಿದೆ, ಜೈ ಹಿಂದ್ ಜೈ ಮಹಾರಾಷ್ಟ್ರ “.



Related posts

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಗ್ರೀಷ್ಮ ಪ್ರಕಾಶ್ ಕರ್ಕೇರ ಗೆ ಶೇ 82 ಅಂಕ.

Mumbai News Desk

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ದಿವ್ಯ ಮೂರ್ತಿಯ ವಿಸರ್ಜನಾ ಮೆರವಣಿಗೆ

Mumbai News Desk

ಶ್ರೀನಿವಾಸ ಜೋಕಟ್ಟೆ ಮತ್ತು ಅನಿತಾ ತಾಕೊಡೆ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ: ಜಯಲಕ್ಷ್ಮಿ ಜೋಕಟ್ಟೆಯವರ ನೆನಪಿನಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ-ಭಾಯಂದರ್ ವತಿಯಿಂದ ಬಿ.ಎಸ್. ಕುರ್ಕಾಲ್ ದತ್ತಿನಿಧಿ ಪ್ರಶಸ್ತಿ ಪ್ರಧಾನ

Mumbai News Desk