32 C
Mumbai
March 7, 2026
Mumbai News Kannada
ಮುಂಬಯಿ

ಮುಂಬೈ ‘ಎನ್ಕೌಂಟರ್ ಸ್ಪೆಶಲಿಸ್ಟ್’ ದಯಾ ನಾಯಕ್ ನಿವೃತ್ತಿಗೆ ಎರಡು ದಿನಗಳ ಮೊದಲು ಎಸಿಪಿ ಹುದ್ದೆಗೆ ಬಡ್ತಿ





ಮುಂಬೈ ಪೋಲಿಸರ ಅಪರಾಧ ವಿಭಾಗದಲ್ಲಿ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಎನ್ಕೌಂಟರ್ ಸ್ಪೆಷಲಿಸ್ಟ್ ಮಂಗಳವಾರ ಸಹಾಯಕ ಅಯುಕ್ತ (ಎಸಿಪಿ )ಹುದ್ದೆಗೆ ಬಡ್ತಿ ನೀಡಲಾಗಿದ್ದು, ಅವರು ಗುರುವಾರ (ಜುಲೈ 31ರಂದು) ನಿವೃತ್ತರಾಗಲಿದ್ದಾರೆ.
ಮುಂಬೈ ಪೋಲಿಸರ ಗಣ್ಯ ಅಪರಾಧ ಪತ್ತೆ ವಿಭಾಗದ ನಿರ್ಣಾಯಕ ಘಟಕ -9ರ ಮುಖ್ಯಸ್ಥರಾಗಿ ನಾಯಕ್ ಅವರ ಕೊಡುಗೆಗಳು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವರು ಇತ್ತೀಚಿನ ದಿನಗಳಲ್ಲಿ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಲಾರೆನ್ಸ್ ಬಿಷ್ಣಾಯ್ ಗ್ಯಾಂಗ್ ಸದಸ್ಯರು ನಡೆಸಿದ ಗುಂಡಿನ ದಾಳಿ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿ ಪಿ )ನಾಯಕ ಬಾಬಾ ಸಿದ್ದಿಕ್ ಮತ್ತು ನಟ ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಸೇರಿದಂತೆ ಕೆಲವು ಸಂವೇದನಾಶೀಲ ಮತ್ತು ಉನ್ನತ ಮಟ್ಟದ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ದಯಾ ನಾಯಕ್ 1995 ರಲ್ಲಿ ಮುಂಬೈ ಪೊಲೀಸ್ ಪಡೆಗೆ ಸೇರಿ, ಮೊದಲು ಜೂಹು ಠಾಣೆಯಲ್ಲಿ ನಿಯುಕ್ತಿಗೊಂಡರು. 1990 ಮತ್ತು 2000 ದಶಕದ ಆರಂಭದಲ್ಲಿ ದರೋಡೆಕೋರರನ್ನು ನಿರ್ಮೂಲನೆ ಮಾಡುವಲ್ಲಿ ತೊಡಗಿದ್ದ ತಂಡದ ಪ್ರಮುಖ ಸದಸ್ಯರಾದ ನಂತರ ಅವರು ಖ್ಯಾತಿಗಳಿಸಿದರು. ಅವರು ಮೊದಲ ಎನ್ಕೌಂಟರ್ 1996, ಡಿಸೆಂಬರ್ ನಲ್ಲಿ, ಛೋಟಾ ರಾಜನ್ ಗ್ಯಾಂಗ್ ನ ಇಬ್ಬರು ಸದಸ್ಯರನ್ನು ಹೊಡೆದುರುಳಿಸುವ ಮೂಲಕ ನಡೆಯಿತು.
ಅವರು 84 ಎನ್ಕೌಂಟರ್ ಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
2006ರಲ್ಲಿ ಅವರ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಕ್ಕಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು. ಆದರೆ 2011ರಲ್ಲಿ ಅವರನ್ನು ಮತ್ತೆ ನೇಮಿಸಲಾಯಿತು, ನಂತರ ಅವರನ್ನು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಯಿತು. ಅಲ್ಲಿ ಅವರು ಹಲವಾರು ಮಾದಕ ವಸ್ತು ಪೂರೈಸಿದಾರರನ್ನು ಬಂಧಿಸಿದರು. ನಂತರ ನಾಯಕ್ ಅವರನ್ನು ಮುಂಬೈ ಅಪರಾಧ ಶಾಖೆಗೆ ವರ್ಗಾಯಿಸಲಾಯಿತು.
ನಾನಾ ಪಾಟೇಕರ್ ಅಭಿನಯದ ‘ಅಬ್ ತಕ್ ಛಪ್ಪನ್’ ಖ್ಯಾತಿಯ ನಾಯಕ್ 1990 ದಶಕದಲ್ಲಿ ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಜೊತೆ ಸಂಬಂಧ ಹೊಂದಿದ್ದ ಹಲವಾರು ದರೋಡೆಕೋರರನ್ನು ಗುಂಡಿಕ್ಕಿ ಕೊಂದ ಪೊಲೀಸ್ ಪಡೆಯಲ್ಲಿ ಚಿರಪರಿಚತರಾಗಿರುವ ಬೆರಳಣಿಕೆಯಷ್ಟು ಎನ್ಕೌಂಟರ್ ಸ್ಪೆಶಲಿಸ್ಟ್ ಗಳಲ್ಲಿ ಒಬ್ಬರು.
ಈ ಬಗ್ಗೆ ‘X’ ನಲ್ಲಿ ಮಾಹಿತಿ ನೀಡಿದ ದಯಾ ನಾಯಕ್ “ನನಗೆ ಸಹಾಯಕ ಪೊಲೀಸ್ ಆಯುಕ್ತ ಆಗಿ ಬಡ್ತಿ ನೀಡಲಾಗಿದೆ ಎಂದು ಹೆಮ್ಮೆ ಮತ್ತು ಕೃತಜ್ಞತೆಯಿಂದ ತಿಳಿಸಲು ಬಯಸುತ್ತೇನೆ, ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲು ನನಗೆ ಹೆಚ್ಚಿನ ಸಮಯ ಸಿಗಲಿ ಎಂದು ನಾನು ಇಚ್ಚಿಸುತ್ತೇನೆ. ಆದರೆ ನಾನು ನನ್ನ ರಾಜ್ಯ ಮತ್ತು ದೇಶಕ್ಕೆ ಪೂರ್ಣ ನಿಷ್ಠೆ ಮತ್ತು ಸಾಮರ್ಥ್ಯದಿಂದ ಸೇವೆ ಸಲ್ಲಿಸಿದ್ದೇನೆ ಎಂದು ನಾನು ಪೂರ್ಣ ತೃಪ್ತಿಯಿಂದ ಹೇಳಬಲ್ಲೆ, ಇದು ಗೌರವಾನ್ವಿತ ಮೈಲಿಗಲ್ಲು ಮತ್ತು ಅದನ್ನು ತಲುಪುವ ಪ್ರಯಾಣವು ನನಗೆ ಹೆಮ್ಮೆಯ ವಿಷಯವಾಗಿದೆ, ಜೈ ಹಿಂದ್ ಜೈ ಮಹಾರಾಷ್ಟ್ರ “.



Related posts

ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಗ್ರಹಣ

Mumbai News Desk

ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಮೋಕ್ಷಿತ್ ಶ್ರೀಧರ್ ಮೂಲ್ಯ ಗೆ ಶೇ. 96 ಅಂಕ.

Mumbai News Desk

ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ದಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಮೀರಾ-ಭಾಯಂದರ್ ನಲ್ಲಿ ಸಾವಿರಾರು ಸಂಖ್ಯೆಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್ ಗೆ ತುಳುನಾಡ ಶೈಲಿಯಲ್ಲಿ ಸನ್ಮಾನ.

Mumbai News Desk

ಜೀರ್ಣೋದ್ಧಾರಗೊಂಡ ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕುಂಭಾಭಿಷೇಕ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮೀರಾ – ಬಾಯಂದರ್ ಶಾಖೆಯಲ್ಲಿ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ

Mumbai News Desk