30.5 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಕಲಂಬೋಲಿ, ಆಟಿಡೋಂಜಿ ದಿನ





 

  ನವಿ ಮುಂಬಯಿ ಆ3.  ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಕಲಂಬೋಲಿ ಇದರ ವತಿಯಿಂದ  ಆಟಿಡೋಂಜಿ ದಿನ ಕಾರ್ಯಕ್ರಮ ಜು27 ರಂದು ಕಲಂಬೋಲಿಯ  ಸನ್ ರೈಸ್ ಹೊಟೆಲ್ ನ ಹಾಲ್ ನಲ್ಲಿ   ಜರುಗಿತು.       ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಅಧ್ಯಕ್ಷರು ರವಿಶ್ ಜಿ ಶೆಟ್ಟಿಯವರು ವಹಿಸಿ ದರು ಆಟಿ ಕಡಂಜ ನನ್ನು ಸ್ವಾಗತಿಸುವ ಮೂಲಕ ದೀಪ ಪ್ರಜ್ವಲಿಸಿ ಕಲಸೆಯ ಸಿರಿ ಸಿಂಗಾರವನ್ನು ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು,

 ವೇದಿಕೆಯಲ್ಲಿ ಗುರುಸ್ವಾಮಿಗಳು ವಿಟ್ಟಲ್ ಬಂಗೇರ ಗೌರವಾಧ್ಯಕ್ಷರು ಸದಾನಂದ ಡಿ ಶೆಟ್ಟಿ ಕಾಂದೇಶ್ ಭಾಸ್ಕರ್ ವೈಶೆಟ್ಟಿ ಉಪಾಧ್ಯಕ್ಷರು ಶಿವರಾಮ ಕೋಟ್ಯಾನ್ ,ಕೋಶಾಧಿಕಾರಿ ಗಂಗಾಧರ್ ರೈ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ರೇವತಿ ಬಿ ಪೂಜಾರಿ, ಕಾಂದ ಕಾಲೋನಿ ಅಯ್ಯಪ್ಪ ಸಂಸ್ಥೆಯ ಅಧ್ಯಕ್ಷರು ಸೀತಾರಾಮ್ ಶೆಟ್ಟಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು ,

   ವೇದಿಕೆ ಗಣ್ಯರಿಗೆ ಶ್ರೀ ಫಲ ಸಿಂಗಾರ ನೀಡಿ ಗೌರವಿಸಲಾಯಿತು,ಗಣ್ಯರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು 

  ಸಂಸ್ಥೆಯ ಅಧ್ಯಕ್ಷರಾದರವಿಶ್ ಜಿ ಶೆಟ್ಟಿಯವರು   ಆಟಿ ಕಡಂಜ ನನ್ನು  ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಾವು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರಬೇಕು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಗಟ್ಟಿಯಾಗಲು ಸಾಧ್ಯ ಎಂಬುದಾಗಿ ಸಮಾಜಕ್ಕೆ ತಿಳಿಸಿ ಸಂಸ್ಥೆ ಎಲ್ಲಾ ಸದಸ್ಯರಿಗೂ ಪದಾಧಿಕಾರಿಗಳಿಗೂ ಪ್ರೀತಿ ಪೂರ್ವಕ ಧನ್ಯವಾದಗಳು ಸಮರ್ಪಿಸಿದರು,

  ತುಳುನಾಡಿನ ಸಂಸ್ಕೃತಿಯನ್ನು ಸಾರುವಂತ  ವಿಧವಿಧದ ಅಡುಗೆಗಳನ್ನು ಮಾಡಿತಂದಂತಹ ಮಹಿಳೆಯರಿಗೆ 10 ಆಕರ್ಷಕ ಬಹುಮಾನಗಳನ್ನು ನೀಡಲಾಯಿತು ಹಾಗೆ ತುಳುನಾಡಿನ ಹಳ್ಳಿಯ  ಸಂಸ್ಕೃತಿ ಪ್ರಕಾರ ತಾಳೆಗರಿಗಳನ್ನು ಹೆಣೆದುವೇದಿಕೆಯನ್ನು ಸೌತೆಕಾಯಿ ಕುಂಬಳಕಾಯಿ ಬೂದಿಗುಂಬಳ ಇತ್ಯಾದಿ ತರಕಾರಿ ಹಾಗೂ ಇನ್ನಿತರ ವಸ್ತುಗಳಿಂದ ಸಿಂಗಾರ ಮಾಡಲಾಯಿತು ಸಾಂಸ್ಕೃತಿಕ ಕಾರ್ಯಕ್ರಮದ ಪುಟಾಣಿ ಮಕ್ಕಳಿಂದ ನೃತ್ಯ ಹಾಗೂ ಕೊನೆಗೆ ಸಂಶಯ ಸದಸ್ಯರಿಂದ ತೆಂಗಿನಕಾಯಿ ಕಟ್ಟುವ ಆಟವನ್ನು ಕೂಡ ಆಯೋಜಿಸಲಾಗಿತ್ತು , ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ  ಸುಜಿತ್ ಪೂಜಾರಿ ಅವರು  ನಿರೂಪಿಸಿದರು ಹಾಗೂ ಜಾನಪದ ಗೀತೆಗಳು ಭಕ್ತಿ ಗೀತೆಗಳು ಸ್ನೇಹಿತರ ಗೀತೆಗಳು ಹಾಡಿ ಸೇರಿದ ಸಭಿಕರನ್ನು ಮನರಂಜಿಸಿದರು,

 ಕೊನೆದಾಗಿ ರಸದೌತನದ ಸವಿ ಉಣ್ಣುತ್ತಾ ರಾಷ್ಟ್ರಗೀತೆಯೊಂದಿಗೆ ಧನ್ಯವಾದ ಸಮರ್ಥಿಗೆ ಕಾರ್ಯಕ್ರಮಕ್ಕೆ ಮುಕ್ತಾಯವನ್ನು ಮಾಡಲಾಯಿತು

B. Dinesh Kulal

Mob.: 9821868674



Related posts

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ: ನವರಾತ್ರಿ ಉತ್ಸವ, ದಾಂಡಿಯಾ ರಾಸ್

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀಕ್ಷಾ ಪುಷ್ಪರಾಜ್ ಪೂಂಜಾ ಗೆ ಶೇ 93.20 ಅಂಕ.

Mumbai News Desk

ಶಹಾಡ್: ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಹಿಂದೂ ಧರ್ಮ ಜಾಗೃತಿ ಬೇಸಿಗೆ ಶಿಬಿರ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ – ಆಟಿಡ್ ಒಂಜಿ ದಿನತ ಸಂಭ್ರಮ

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ಕರುಣಾಕರ ಎಂ. ಶೆಟ್ಟಿ

Mumbai News Desk