ಥಾಣೆ ಪಶ್ಚಿಮ ವೀರ ಸಾವರ್ಕರ್ ನಗರ, ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪ್ರಯೋಜಕತ್ವದಲ್ಲಿ, ಜಗದೀಶ್ ಎಸ್ ತಂತ್ರಿ, ರಘುಚಂದ್ರ ಆಚಾರ್ಯ ಕಾರಿಂಜೆ, ಇವರ ಶುಭಾಶೀರ್ವಾದಗಳೊಂದಿಗೆ, ಶಿವಪ್ರಸಾದ್ ಪೂಜಾರಿ ಇವರ ಸಹಕಾರದೊಂದಿಗೆ, ಆಜೆಕಾರು ಕಲಾಭಿಮಾನಿ ಬಳಗ ಮುಂಬೈ, ಇವರ ಆಯೋಜನೆಯಲ್ಲಿ “ತುಳುನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ ಆಗಸ್ಟ್ 10ರ, ರವಿವಾರ ಮಧ್ಯಾಹ್ನ 3.30ಕ್ಕೆ ಮುಲುಂಡ್ ಚೆಕ್ ನಾಕ ಸಮೀಪದ ನವೋದಯ ಜೂನಿಯರ್ ಕಾಲೇಜ್ ಸಭಾಗ್ರಹದಲ್ಲಿ ನಡೆಯಲಿದೆ.
ಹಿಮ್ಮೇಳ : ಭಾಗವತರು – ದೇವಿಪ್ರಸಾದ್ ಆಳ್ವ, ಚೆಂಡೆ – ಸುಬ್ರಹ್ಮಣ್ಯ ಭಟ್, ಮದ್ದಳೆ – ಪ್ರಶಾಂತ್ ಶೆಟ್ಟಿ.
ಮುಮ್ಮೇಳ : ಡಾ. ಪ್ರಭಾಕರ್ ಜೋಶಿ, ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಲ್ಕಟ್ಟೆ, ಸದಾಶಿವ ಆಳ್ವ ತಲಪಾಡಿ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ರೂವಾರಿ ಶಿವಪ್ರಸಾದ್ ಪೂಜಾರಿ ವಿನಂತಿಸಿದ್ದಾರೆ.




