July 23, 2026
Mumbai News Kannada
ಪ್ರಕಟಣೆ

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ







ಮುಂಬಯಿ.ಅ.16:ಭಾಯಂದರ್ ಪೂರ್ವ ನವಘರ್ ಪೋಲೀಸ್ ಸ್ಟೇಷನ್ ಬದಿಯ ನ್ಯೂ ಅಂಕಿತಾ ಅಪಾರ್ಟ್ಮೆಂಟ್ ನಲ್ಲಿರುವ ಅಯ್ಯಪ್ಪ ಆರಾಧನಾ ಭಕ್ತ ಮಂಡಲದಲ್ಲಿ ಆರಾಧ್ಯ ದೇವರುಗಳ ರಜತ ಬಿಂಬ ಪ್ರತಿಷ್ಠಾಪನಾ ಮಹೋತ್ಸವವು ಆದಿತ್ಯವಾರ ಅ.17ರಂದು ಕಾಶಿ ಗಾಂವ್ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ ಗಣಹೋಮ ನಡೆದು ರಜತ ಬಿಂಬ ಪ್ರತಿಷ್ಟಾಪನೆ ನಡೆಯಲಿದೆ. 10.30 ಗಂಟೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಲಿದ್ದು ತದನಂತರ ಆರಾಧನಾ ಹಾಗೂ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನೆ, ಪ್ರಸಾದ ವಿತರಣೆ ನಡೆಯಲಿದೆ. ಸುದೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ತೆಳ್ಳಾರು ಕಡಪುಲಾಜೆ ಪರಿವಾರದವರ ವತಿಯಿಂದ ಅನ್ನಸಂತರ್ಪಣೆ ನಡೆಯಲಿದ್ದು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಅಯ್ಯಪ್ಪ ಭಕ್ತರು ಭಾಗವಹಿಸಿ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮಂಡಲದ ಗುರುಸ್ವಾಮಿ ಸುಧಾಕರ್ ಜಿ.ಪೂಜಾರಿ, ಗೌರವಾಧ್ಯಕ್ಷರುಗಳಾದ ಪ್ರಮೋದ್ ಕೆ.ಕೋಟ್ಯಾನ್, ರವಿಕಾಂತ್ ಶೆಟ್ಟಿ ಇನ್ನ, ಅಶೋಕ್ ಎನ್.ಶೆಟ್ಟಿ, ಅಧ್ಯಕ್ಷ ಸುಕೇಶ್ ಶೆಟ್ಟಿ, ಉಪಾಧ್ಯಕ್ಷ ಉದಯ ಹೆಗ್ಡೆ, ಕಾರ್ಯದರ್ಶಿ ನವೀನ್ ಕೆ.ಸುವರ್ಣ, ಜೊತೆ ಕಾರ್ಯದರ್ಶಿ ನಿತಿನ್ ಜಿ.ಶೆಟ್ಟಿ, ಕೋಶಾಧಿಕಾರಿ ನವೀನ್ ಶೆಟ್ಟಿ, ಜೊತೆ ಕೋಶಾಧಿಕಾರಿ ನಾರಾಯಣ ಸುವರ್ಣ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಉದಯ ಸುವರ್ಣ, ಆರಾಧನಾ ಫ್ರೆಂಡ್ಸ್ ನ ಕಾರ್ಯಾಧ್ಯಕ್ಷೆ ಪ್ರೇಮಾ ಮಾಧವ ಹೆಗ್ಡೆ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ



Related posts

ಜ.17ರಿಂದ 19 ರ ತನಕ ಭುವಾಜಿ ರವೀಂದ್ರ ಶಾಂತಿ ಹಾಗೂ ತಂಡದವರಿಂದ 11ನೇ ವರ್ಷದ ತಿರುಪತಿ ಯಾತ್ರೆ: ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಸಹಭಾಗಿ

Mumbai News Desk

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ

Mumbai News Desk

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk

ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ :ಜುಲೈ 5 ರಂದು “ಶ್ರೀ ಜಗನ್ನಾಥ ಕ್ಷೇತ್ರ ಮಹಿಮೆ” ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ

Mumbai News Desk

ಜ  5 :  ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಸಮಿತಿ,   47ನೇ ವಾರ್ಷಿಕ ಶ್ರೀ ಅಯ್ಯಪ್ಪ  ಮಹಾಪೂಜೆ

Mumbai News Desk