September 6, 2026
Mumbai News Kannada
ಮುಂಬಯಿ

ಮಲಾಡ್ ಕುರಾರ್  ಶನಿ ಮಹಾತ್ಮಾ ಪೂಜಾ ಸಮಿತಿ ಮಹಿಳಾ ವಿಭಾಗ  ಆಟಿದ ಕೂಟ 





ಆಟಿ ಆಡಂಭರದ ಕೂಟವಾಗದಿರಲಿ – ಶ್ರೀನಿವಾಸ ಪಿ ಸಾಫ಼ಲ್ಯ.

      ಮುಂಬಯಿ.  ಹಬ್ಬ ಹರಿದಿನಗಳು ಧಾರ್ಮಿಕ ಹಾಗು ಸಾಂಸ್ಕ್ರತಿಕ ಚೌಕಟ್ಟನ್ನು ಮೀರದಿದ್ದಲ್ಲಿ ಭವಿಷ್ಯದ ಪೀಳಿಗೆಗೆ ನಾವು ಸನಾತನ ಸಂಸ್ಕೃತಿಯಲ್ಲಿ ಅವರನ್ನು ಶ್ರೀಮಂತಗೊಳಿಸಬಹುದು. ಈ ನಿಟ್ಟಿನಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರು ಹಲವು ವರ್ಷಗಳಿಂದ ಅರ್ಥಗರ್ಭಿತ ಆಟಿಯನ್ನು ಆಚರಿಸುತ್ತಿದಾರೆ. ಎಂದು ಮಲಾಡ್ ಕುರಾರ್ ವಿಲೇಜಿನ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ  ಶ್ರೀನಿವಾಸ ಪಿ ಸಾಫ಼ಲ್ಯ ನುಡಿದರು. 

ಅವರು ಆ 3ರಂದು ಮಲಾಡ್ ಕುರಾರ್ ವಿಲೇಜ ಲಕ್ಷಣ ನಗರದ ಸೆಂಟ್ ಪ್ರಾನ್ಸಿಸ್ ಸ್ಕೂಲಿನ ಸಭಾಗೃಹದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಹಿಳಾ ವಿಭಾಗ ಆಯೋಜಿಸಿದ ಆಟಿದ ಕೂಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಆಟಿ ತಿಂಗಳಲ್ಲಿ ಶ್ರೀ ವಿಷ್ಣು ದೇವರು ಸಹ ಶಯನಾವಸ್ಥೆಯಲ್ಲಿರುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆಟಿ ತಿಂಗಳು ಅಂದರೆ ಒಂದು ಸಮಯದಲ್ಲಿ ಬಹಳ ಕಷ್ಟದ ತಿಂಗಳಾಗಿತ್ತು. ಒಂದು ಹೊತ್ತಿನ ಊಟಕ್ಕೂ ಕಷ್ಟವಾದುದರಿಂದ ಪ್ರಕೃತಿಯಲ್ಲಿ ಬೆಳೆದ ಸೊಪ್ಪು ಗೆಡ್ಡೆಗಳನ್ನು ತಿನ್ನುತ್ತಿದ್ದರು ವೈಜ್ಞಾನಿಕವಾಗಿಯೂ ಸಹ ಈ ತಿನಿಸುಗಳು ಆರೋಗ್ಯಗರವೆಂದು ತಿಳಿದು ಬಂದಿದೆ. ಆದರೆ ಇಂದಿನ ಆಟಿ ಸಂಭ್ರಮದಲ್ಲಿ ಚೈನೀಸ್ ಪದಾರ್ಥಗಳು ಪಾಲು ಪಡೆದುಕೊಂಡಿವೆ ಎಂದಾಗ ಬೇಸರವಾಗುತ್ತೆ. ನಮ್ಮ ಹಬ್ಬ ಹರಿದಿನಗಳು ಮೌಲ್ಯಯುತವಾಗಿವೆ. ಈ ಪರಂಪರೆಯನ್ನು ಉಳಿಸುವ ಬಹುಮೂಲ್ಯ ಕೊಡುಗೆ ನಮ್ಮದಾಗಬೇಕು ಎಂದರು.

ಸಂಸ್ಥೆಯ ಹಿರಿಯ ಸದಸ್ಯರಾದ ನಾರಾಯಣ ಶೆಟ್ಟಿಯವರು ಮಾತನಾಡುತ್ತಾ ತಮ್ಮ ಬಾಲ್ಯದಲ್ಲಿನ ಆ ಕಷ್ಟದ ದಿನಗಳು ಹೇಗಿದ್ದವು ಎನ್ನುವುದನ್ನು ನೆನಪಿಸಿದರಲ್ಲದೆ. ಅಂದಿನ ಆಟಿ ತಿಂಗಳಿಗೂ ಇಂದಿನ ಆಟಿ ತಿಂಗಳ ಅಂತರವನ್ನು ವಿಸ್ತಾರವಾಗಿ ವಿವರಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ಶೀತಲ್ ಆನಂದ ಕೋಟ್ಯಾನ್ ಮಾತನಾಡುತ್ತಾ  ಪುಜಾ ಸಮಿತಿಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಮುಂಚೂಣಿಯಲ್ಲಿರುತ್ತಾರೆ. ಆಟಿಯ ಸಂಭ್ರಮದ ಈ ದಿನದಲ್ಲಿ ಮಹಿಳೆಯರು ಹಲವಾರು ಬಗೆಯ ಖಾದ್ಯಗಳನ್ನು ಮಾಡಿ ತಂದಿರುತ್ತಾರೆ ಅವರೆಲ್ಲರೂ ಇಂದಿನ ದಿನಕ್ಕಾಗಿ ಹಲವಾರು ದಿನಗಳಿಂದ ತಯಾರಿ ನಡೆಸುತ್ತಿದ್ದರು. ಅವರ ಶ್ರಮ ಪರಿಶ್ರಮಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುವೆ ಶ್ರೀ ಶನಿ ದೇವರ ಕೃಪೆ ಅವರೆಲ್ಲರಿಗೂ ಸದಾ ಶ್ರೀರಕ್ಷೆಯಾಗಿರಲಿ ಎಂದರು.

ಪುಜಾ ಸಮಿತಿಯ ಉಪಾಧ್ಯಕ್ಷರಾದ ಪೇತ್ರಿ ವಿಶ್ವನಾಥ ಶೆಟ್ಟಿ ಹಾಗು ರಮೇಶ ಆಚಾರ್ಯ ಸಮಯಯೋಚಿತವಾಗಿ ಮಾತನಾಡಿದರು.  ಮಹಿಳಾ ವಿಭಾಗದ ಕಾರ್ಯಕರ್ತೆ ಜಯಂತಿ ಸುರೇಶ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.   ಮಾಸ್ಟರ್ ಸನ್ವಿತ್ ಆಟಿ ಕಲೆಂಜದ ಪ್ರಾತ್ಯಕ್ಷಿಕೆಯೊಂದಿಗೆ ಒಟ್ಟು ಕಾರ್ಯಕ್ರಮದ ಸೋಬಗನ್ನು ಹೆಚ್ಚಿಸಿದರು.  ರಾಜಶ್ರೀ ಯವರು ಧನ್ಯವಾದ ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ, ಮಹಿಳಾ ವಿಭಾಗ ಹಾಗು ಚಾರಿಟೇಬಲ್ ಟ್ರಸ್ಟ್ ನ ಸರ್ವ ಸದಸ್ಯರು ಸಹಕರಿಸಿದರು. ತದ ನಂತರ ಮಹೀಳಾ ಸದಸ್ಯೆರು ತಯಾರಿಸಿದ ವಿವಿಧ ರೀತಿಯ ತಿನಿಸುಗಳಿತ್ತು.

B. Dinesh Kulal

Mob.: 9821868674



Related posts

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮತ್ತು ಹರಿನಾರಾಯಣ ಅಸ್ರಣ್ಣರಿಗೆ ಗೌರವಾರ್ಪಣೆ

Mumbai News Desk

ಧರ್ಮಪಾಲ ದೇವಾಡಿಗರಿಗೆ  ದೇವಾಡಿಗ ಸಂಘದ ಗೌರವ. ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಧರ್ಮಪಾಲರ ಕೊಡುಗೆ ಅಪಾರ: ರವಿ ದೇವಾಡಿಗ

Mumbai News Desk

ಮುಂಬಯಿ ಬಂಟರ ಸಂಘ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳ ಪ್ರವಾಸ

Mumbai News Desk

ಮದರ್ ಇಂಡಿಯಾ ದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ನಿರಂತರವಾಗಿರಲಿ -ಸುರೇಂದ್ರ ಪೂಜಾರಿ ಮುಂಬೈ :

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ನೂತನ ಅಧ್ಯಕ್ಷರಾಗಿ ರವಿ ಎಂ ಸುವರ್ಣ ಆಯ್ಕೆ

Mumbai News Desk

ಎನ್ ಕೆ ಇ ಎಸ್ ಪ್ರೌಢಶಾಲೆ ವಡಾಲ,” ಕಲಾತಪಸ್ವಿ ” ಶಿವಯೋಗಿ ಸಣ್ಣಮನಿ ಅವರಿಗೆ ಬೀಳ್ಕೊಡುಗೆ

Mumbai News Desk