32 C
Mumbai
March 7, 2026
Mumbai News Kannada
ಪ್ರಕಟಣೆ

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ





ಮಹಾರಾಷ್ಟ್ರ , ಕರ್ನಾಟಕ ಮತ್ತು ಗುಜರಾತ್ ನಲ್ಲಿ ನೂರಕ್ಕಿಂತ ಹೆಚ್ಚು ಶಾಖೆ ಹೊಂದಿರುವ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿ. ನ 49ನೇ ವಾರ್ಷಿಕ ಮಹಾಸಭೆ ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಹಾಲ್‌ನಲ್ಲಿ ನಡೆಯಲಿದೆ.

ಮುಂಬಯಿ ಮಹಾನಗರದಲ್ಲಿ ಭಾರತ್ ಬ್ಯಾಂಕ್ ಎಂದು ಕರೆಯಲ್ಪಡುವ ಬ್ಯಾಂಕ್ 21ಆಗಸ್ಟ್ 1978 ರಂದು ಸ್ಥಾಪನೆಗೊಂಡಿದೆ. ಕಳೆದ 4 ದಶಕಗಳಿಂದ ಮಹಾರಾಷ್ಟ್ರ ಸಹಿತ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಸೇವೆ ಒದಗಿಸುತ್ತ ಬರುತ್ತಿದೆ.

ಭಾರತ್‌ ಬ್ಯಾಂಕ್‌ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಪ್ರಸಿದ್ಧಿ ಪಡೆದಿದೆ. ಅದರ ಪ್ರೀಮಿಯಂ ಠೇವಣಿ ಖಾತೆಗಳು ಮತ್ತು ಉದ್ಯಮಿಗಳಿಗೆ ಅನುಗುಣವಾಗಿ ಸಾಲಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಭಾರತ್ ಬ್ಯಾಂಕ್ ವಿದೇಶಿ ವಿನಿಮಯ ವ್ಯವಹಾರ ಮಾಡುವ ಕೆಲವೇ ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ವರ್ಗ ಒಂದರ ಅಧಿಕೃತ ಡೀಲರ್ ಆಗಿ ಪ್ರಸಿದ್ದಿ ಪಡೆದಿದೆ.

ಭಾರತ್ ಬ್ಯಾಂಕಿನ ಹೆಚ್ಚಿನ ಶಾಖೆಗಳ ಕಟ್ಟಡ ಬ್ಯಾಂಕಿನ ಮಾಲಕತ್ವದ್ದಾಗಿರುವುದು ಮತ್ತೊಂದು ವಿಶೇಷತೆಯಾಗಿದೆ.

ಪ್ರಸ್ತುತ ಕಾರ್ಯಾಧ್ಯಕ್ಷ ಶ್ರೀ ಸೂರ್ಯಕಾಂತ್ ಜಯ ಸುವರ್ಣರ ನೇತೃತ್ವದಲ್ಲಿ ಭಾರತ್ ಬ್ಯಾಂಕನ್ನು ವೃತ್ತಿಪರವಾಗಿ ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಪರಿಣಿತರನ್ನು ಒಳಗೊಂಡ ಸಮರ್ಥ ನಿರ್ದೇಶಕರ ಮಂಡಳಿ ಮತ್ತು ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ನಿರ್ವಹಿಸುತ್ತಿದೆ. ಇದು ಬ್ಯಾಂಕನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ತನ್ನ ಗ್ರಾಹಕರ ಮತ್ತು ಷೇರುದಾರರ ಅಚಲ ವಿಶ್ವಾಸ ಬ್ಯಾಂಕಿನ ಯಶಸ್ಸಿಗೆ ಮುಖ್ಯ ಕಾರಣವಾಗಿದೆ.

70 ಕ್ಕಿಂತ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಭಾರತ್ ಬ್ಯಾಂಕ್ ಪಡೆದಿರುತದೆ.



Related posts

ಯಕ್ಷಗಾನದ ಸ್ತ್ರೀ ಪಾತ್ರಧಾರಿಯ ಜೀವನ ಆಧಾರಿತ”ದ್ವಮ್ದ್ವ” ಕನ್ನಡ ಚಲನಚಿತ್ರ, ಮುಂಬೈಯಲ್ಲಿ ಮೇ 16ಕ್ಕೆ ಪ್ರದರ್ಶನ.

Mumbai News Desk

ಗೌಡರ ಉನ್ನತೀಕರಣ ಸಂಸ್ಥೆ ಮಹಾರಾಷ್ಟ್ರ : ಆಗಸ್ಟ್ 15ರಂದು 9ನೇ ವಾರ್ಷಿಕೋತ್ಸವ

Mumbai News Desk

  ಜು 14; ಗೋರೆಗಾಂವ್ ಪೂರ್ವ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ  ಉಚಿತ ಆರೋಗ್ಯ, ಮತ್ತು ಕಣ್ಣಿನ ಪರೀಕ್ಷೆ

Mumbai News Desk

ಇಂದು ಡೊಂಬಿವಲಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ

Mumbai News Desk

ಡಿ.18 ರಂದು ಬಂಟರ ಸಂಘ ಕುರ್ಲಾ ದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಕಾಪು ಅವರ ಶ್ರದ್ಧಾಂಜಲಿ ಸಭೆ

Mumbai News Desk

ಕರ್ನಾಟಕ ಸಂಘ, ಕಲ್ಯಾಣ: 23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk