30.9 C
Mumbai
June 8, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಕಾಂದಿವಿಲಿ ಪೂರ್ವ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ





ಮುಂಬಯಿ, ಆ.26 : ಭಾರತ್ ಬ್ಯಾಂಕಿನ ಕಾಂದಿವಿಲಿ ಪೂರ್ವ, ಠಾಕೂರ್ ವಿಲೇಜ್‌ನಲ್ಲಿರುವ ಶಾಖೆಯಲ್ಲಿ 49ನೇ ಸಂಸ್ಥಾಪನಾ ದಿನಾಚರಣೆಯನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.

ಬ್ಯಾಂಕಿನ ನಿರ್ದೇಶಕರಾದ ಸಂತೋಷ್ ಕೆ. ಪೂಜಾರಿ, ಹಿರಿಯ ಗ್ರಾಹಕರಾದ ಅವೆನ್ಯೂ ಹೋಟೆಲ್‌ನ ರಘುರಾಮ ಶೆಟ್ಟಿ, ತಾರಾನಾಥ್ ಕಲ್ಯಾಣಪುರ, ಜಯಾ ಶೆಟ್ಟಿ, ಲಕ್ಷ್ಮಣ್ ಸಾಲಿಯಾನ್, ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡು ಶುಭಾಶಯಗಳನ್ನು ಕೋರಿದರು.

ಶಾಖೆಯ ಮುಖ್ಯ ಪ್ರಬಂಧಕರಾದ ವೀರೇಂದ್ರ ಕುಂದರ್ ಅವರು ಪ್ರಮುಖ ಗ್ರಾಹಕರಿಗೆ ಹೊದಿಕೆ ನೀಡಿ ಗೌರವ ಸಲ್ಲಿಸಿದರು.

ಉಪ ಪ್ರಬಂಧಕರಾದ ಜಯಲಕ್ಷ್ಮಿ ಅಮೀನ್ ಹಾಗೂ ಸಿಬ್ಬಂದಿಗಳಾದ ಕಾರ್ತಿಕ್ ಪೂಜಾರಿ, ಸೌಮ್ಯಾ ಬಂಗೇರ, ಮಹೇಶ್ ಕರ್ಕೇರ, ದೀಪಾ ಪಾಲನ್, ಅನಿಶಾ ಪೂಜಾರಿ, ಶ್ರುತಿ ಸುವರ್ಣ, ಸಿಂಚನಾ ಪೂಜಾರಿ, ಸುಧರ್ಶನ ಆಚಾರ್ಯ ಮತ್ತು ಆದಿತ್ಯ ಕುಬಲ್ ಉಪಸ್ಥಿತರಿದ್ದರು.



Related posts

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಮುಂಬೈ : ಭಾಂಡುಪ್‌ನಲ್ಲಿ ಪಾದಚಾರಿಗಳಿಗೆ ಬೆಸ್ಟ್ ಬಸ್ ಡಿಕ್ಕಿ ಹೊಡೆದ ಪರಿಣಾಮ 4 ಸಾವು, 8 ಜನರಿಗೆ ಗಾಯ

Mumbai News Desk

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಧ್ಯಕ್ಷರಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್

Mumbai News Desk

ನಾರಾಯಣ ಗುರುಗಳ ತತ್ವದೊಂದಿಗೆ ಸಮಾಜ ಸಂಘಟನೆಯಾಗಲಿ: ಸೂರ್ಯಕಾಂತ್ ಜಯ ಸುವರ್ಣ

Mumbai News Desk