July 22, 2026
Mumbai News Kannada
ತುಳುನಾಡು

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು: ಮೂರನೇ ಸ್ಥನ್ಯಪಾನ ಕೊಠಡಿ ಉದ್ಘಾಟನೆ







ಮಂಗಳೂರು:
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಮುತೋಟ್ ಫೈನಾನ್ಸ್ ಲಿಮಿಟೆಡ್ ಇವರ ಜಂಟಿ ಆಶಯದಲ್ಲಿ, ಮಂಗಳೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕೂಳೂರು (ಕುಳೂರ್) ನಲ್ಲಿ ಮೂರನೇ ಸ್ಥನ್ಯಪಾನ ಕೊಠಡಿಯನ್ನು ಉದ್ಘಾಟಿಸಲಾಯಿತು.

ಈ ನೂತನ ಸ್ಥನ್ಯಪಾನ ಕೊಠಡಿಯನ್ನು ಮುತೋಟ್ ಫೈನಾನ್ಸ್‌ನ ರೀಜನಲ್ ಮೆನೇಜರ್ ಪ್ರಶಾಂತ್ ನಾಯಕ್ ಅವರು ಉದ್ಘಾಟಿಸಿ, ನಂತರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕುಳೂರ್ ಆಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದರು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಶಾಂತ್ ನಾಯಕ್ ಅವರು, “ಈ ಸ್ಥನ್ಯಪಾನ ಕೊಠಡಿ ತಾಯಂದಿರಿಗಾಗಿ ಅತ್ಯಂತ ಅಗತ್ಯ ಹಾಗೂ ಉಪಯುಕ್ತ ಸೌಕರ್ಯ. ಇದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ಮುತೋಟ್ ಫೈನಾನ್ಸ್ ಹಾಗೂ ಮೂಲತ್ವ ಫೌಂಡೇಶನ್ ಮಹತ್ವದ ಹೆಜ್ಜೆ ಇಟ್ಟಿವೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಜೇಶ್ ಅವರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮುತೋಟ್ ಫೈನಾನ್ಸ್ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಆರಂಭದಲ್ಲಿ, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕರಾದ ಪ್ರಕಾಶ್ ಕೋಟ್ಯಾನ್ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ, ಮುತೋಟ್ ಫೈನಾನ್ಸ್‌ನ ಸಿ.ಎಸ್.ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮುತೋಟ್ ಫೈನಾನ್ಸ್ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೇನೋಯ್, ಮುತೋಟ್ ಫೈನಾನ್ಸ್ ಕೊಟ್ಟಾರ ಶಾಖೆಯ ಮ್ಯಾನೇಜರ್ ಆಶಾಲತಾ ಅಂಚನ್, ಡಾ. ಚೈತ್ರಾ, ಗೌತಮ್, ಪ್ರವೀಣ್ ಫ್ರಾಂಕ್ (ಮುತೋಟ್ ಫೈನಾನ್ಸ್), ಮೂಲತ್ವ ಫೌಂಡೇಶನ್‌ನ ಟ್ರಸ್ಟಿ ಕಲ್ಪನಾ ಕೋಟ್ಯಾನ್, ಅಕ್ಷತಾ ಕದ್ರಿ ಮೊದಲಾದವರು ಹಾಜರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ, ಮೂಲತ್ವ ಫೌಂಡೇಶನ್ ಟ್ರಸ್ಟಿ ಶೈನೀ ಮೂಲತ್ವ ಅವರು ಧನ್ಯವಾದ ಸಮರ್ಪಣೆ ಸಲ್ಲಿಸಿದರು.



Related posts

ಉಡುಪಿಯಲ್ಲಿ ನಡೆದ ಕುಣಿತ ಭಜನಾ ಸೇವೆಯಲ್ಲಿ ಎಲ್ಲರ ಗಮನ ಸೆಳೆದ ಲಕ್ಷ್ಮಿ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ತಂಡದ ಪುಟಾಣಿಗಳು

Mumbai News Desk

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ 50ನೇ ವರ್ಷದ ಸಂಭ್ರಮಾಚರಣೆ

Mumbai News Desk

ಮಲ್ಪೆ- ಕಡಲ ಮಕ್ಕಳಿಂದ ಸಂಭ್ರಮದ ಸಮುದ್ರ ಪೂಜೆ.

Mumbai News Desk

ಮೂಲ್ಕಿ : ಕೊಳಚಿ ಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಶಿಲನ್ಯಾಸ

Mumbai News Desk

ಮುಲ್ಕಿ : ಸಾಧಕರ ಅರಸು ಕಂಬಳ ಪ್ರಶಸ್ತಿ 2025 ಪ್ರಕಟ – ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ

Mumbai News Desk