32 C
Mumbai
March 7, 2026
Mumbai News Kannada
ತುಳುನಾಡು

ಕಾಪು: ಜನ ಮೆಚ್ಚಿದ ತಹಶೀಲ್ದಾರ್ ಡಾ. ಪ್ರತಿಭಾ ಅವರಿಗೆ ಆತ್ಮೀಯ ಬೀಳ್ಕೊಡುಗೆ





ಕಾಪುವಿನ ಜನರ ಪ್ರೀತಿ, ನೆನಪು ಸದಾ ಶಾಶ್ವತ – ಡಾ. ಪ್ರತಿಭಾ

ಕಾಪು, ಸೆ. 2:
ಕಾಪು ತಾಲೂಕಿನಲ್ಲಿ ಜನಮನ ಗೆದ್ದ, ಜನಸೇವೆಯ ಹಾದಿಯಲ್ಲಿ ಅಚ್ಚಳಿಯದ ಗುರುತು ಬರೆದ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಅವರನ್ನು ಇಲ್ಲಿ ನಡೆದ ಭಾವಪೂರ್ಣ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ತಮ್ಮ ನಿಷ್ಠಾವಂತ ಕರ್ತವ್ಯ ನಿರ್ವಹಣೆಯಿಂದ, ನಾಗರಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆಯಿಂದ ಮತ್ತು ಜನಸಾಮಾನ್ಯರೊಂದಿಗೆ ಹೊಂದಿಕೊಂಡ ಮಮತೆಯ ಹಾದಿಯಿಂದ ಅವರು ಕಾಪುವಿನ ಜನತೆಯ ಮೆಚ್ಚುಗೆಯನ್ನು ಗಳಿಸಿದ್ದರು.

22 ತಿಂಗಳುಗಳ ಕಾಲ ಕಾಪು ತಾಲೂಕಿಗೆ ಆಡಳಿತದ ಚೈತನ್ಯ ತುಂಬಿದ ಡಾ. ಪ್ರತಿಭಾ ಆರ್ ಅವರು ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗೆ ವರ್ಗಾವಣೆಯಾಗಿದ್ದು, ಈ ಸಂದರ್ಭದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದರು. ಅವರು ಹೇಳಿದರು:
“ಕಾಪುವಿನಲ್ಲಿ ಸೇವೆ ಸಲ್ಲಿಸಿದ ಈ 22 ತಿಂಗಳುಗಳು ನನ್ನ ಬದುಕಿನ ಅನನ್ಯ ಅನುಭವಗಳಾಗಿವೆ. ಇಲ್ಲಿಂದ ಹೊರಡುವಾಗ ನನ್ನ ಮನೆಯಿಂದಲೇ ಹೊರಟಂತೆ ಭಾವಿಸುತ್ತಿದ್ದೇನೆ. ನನ್ನ ಹುದ್ದೆಯನ್ನು ಕೇವಲ ಅಧಿಕಾರದ ನೆಲೆಯಲ್ಲಿ ನಿರ್ವಹಿಸದೆ, ಮಾನವೀಯ ಸೇವೆಯ ದೃಷ್ಟಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಕಾಪುವಿನ ಜನರ ಪ್ರೀತಿ, ಅವರ ಆತ್ಮೀಯ ನೆನಪುಗಳು ಸದಾ ಶಾಶ್ವತವಾಗಿರುತ್ತವೆ” ಎಂದು ಮನದಾಳದಿಂದ ಹೇಳಿದರು.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಜರಿದ್ದರು. ಪ್ರಭಾರ ತಹಶೀಲ್ದಾರ್ ಪ್ರದೀಪ್ ಆರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ’ಸಿಲ್ವಾ, ಉಪತಹಶೀಲ್ದಾರ್ ದೇವಕಿ, ತಾಲೂಕು ಶಿಕ್ಷಣಾಧಿಕಾರಿ ಎಲ್ಲಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ತಾಲೂಕು ಖಜಾನೆ ಅಧಿಕ್ಷಕಿ ಜಯಲಕ್ಷ್ಮಿ, ಪುರಸಭೆ ಮುಖ್ಯಾಧಿಕಾರಿ ನಾಗರಾಜ, ಇತರ ಇಲಾಖೆಗಳ ಅಧಿಕಾರಿಗಳು, ತಾಲೂಕು ಮಟ್ಟದ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅನೇಕ ಸಾಮಾಜಿಕ-ಸಾಂಸ್ಕೃತಿಕ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್ಲರೂ ತಮ್ಮ ಹೃದಯದಾಳದ ಶುಭಾಶಯಗಳನ್ನು ಅರ್ಪಿಸಿ, ಕಾಪು ತಾಲೂಕಿಗೆ ಅವರು ನೀಡಿದ ಸೇವೆಯನ್ನು ಸ್ಮರಿಸಿದರು. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ – “ಡಾ. ಪ್ರತಿಭಾ ಅವರ ಆಡಳಿತ ಶೈಲಿ ಸಾಮಾನ್ಯ ಜನರ ಹೃದಯಕ್ಕೆ ಹತ್ತಿರವಾಗಿತ್ತು. ಜನರ ನೋವು-ನಲಿವುಗಳಿಗೆ ತಕ್ಷಣ ಸ್ಪಂದಿಸುವ ಅಪರೂಪದ ತಹಶೀಲ್ದಾರ್ ಆಗಿ ಅವರು ಉಳಿದಿದ್ದಾರೆ” ಎಂದು ಪ್ರಶಂಸಿಸಿದರು.

ಸಮಾರಂಭದಲ್ಲಿ ಸನ್ಮಾನಿತಳಾದ ಡಾ. ಪ್ರತಿಭಾ ಆರ್ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಸ್ಮರಣಿಕೆ, ಗೌರವಪತ್ರ, ಶಾಲು ಹಾಗೂ ಹೂವಿನ ಬುಕ್ಕೆಯಿಂದ ಗೌರವ ಸಲ್ಲಿಸಿದವು. ಕಾಪು ತಾಲೂಕಿನ ಜನರ ಆತ್ಮೀಯತೆ ಹಾಗೂ ಮಮತೆ, ಈ ಬೀಳ್ಕೊಡುಗೆಯನ್ನು ಹೃದಯಸ್ಪರ್ಶಿಯಾಗಿಸಿತು.



Related posts

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Mumbai News Desk

ಮುಲ್ಕಿ ಸೀಮೆಯ ಅರಸು ಕಂಬಳಕ್ಕೆ ಚಾಲನೆ. ಕಂಬಳ ತುಳುನಾಡಿನ ಸಂಸ್ಕೃತಿಯ ಪ್ರತೀಕ:ಐಕಳ ಹರೀಶ್ ಶೆಟ್ಟಿ

Mumbai News Desk

ಪೊಲಿಪು ಸರಕಾರಿ ಪ್ರಾಥಮಿಕ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭೋತ್ಸವ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

Mumbai News Desk

ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ: ಶಿವ-ಶಕ್ತಿ ಸಮಾಗಮ, ಇಂದ್ರಜಿತು ಕಾಳಗದ ವೈಭವ

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮಹೂರ್ತ

Mumbai News Desk

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ – ಇಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ತುರ್ತು ಸಭೆ

Mumbai News Desk