32 C
Mumbai
April 24, 2026
Mumbai News Kannada
ಮುಂಬಯಿ

ಮುಂಬೈ : ಸಾಕಿನಾಕದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭ ಹೈಟೆನ್ಷನ್ ತಂತಿ ತಗಲಿ ಒರ್ವ ಸಾವು, ಐವರ ಸ್ಥಿತಿ ಗಂಭೀರ





ರಾಜ್ಯಾದ್ಯಂತ ಗಣಪತಿ ವಿಸರ್ಜನೆಯ ಸಂಭ್ರಮ ಉತ್ತುಂಗಕ್ಕೇರಿದೆ. ಒಂದೆಡೆ ಸಂತೋಷ ಮತ್ತು ಉತ್ಸಾಹದ ವಾತಾವರಣವಿದ್ದರೆ, ಮತ್ತೊಂದೆಡೆ, ಸಾಕಿನಾಕ ಪ್ರದೇಶದಲ್ಲಿ ಗಣಪತಿ ಮೆರವಣಿಗೆಯ ಸಮಯದಲ್ಲಿ ಹೈಟೆನ್ಷನ್ ತಂತಿಯಿಂದ ಆಘಾತಕ್ಕೊಳಗಾಗಿ ಒಬ್ಬರು ಸಾವನಪ್ಪಿ, ಐವರ ಪರಿಸ್ಥಿತಿ ಚಿಂತಾಜನಕವಿದೆ.

ಮುಂಬೈನ ಸಾಕಿನಾಕ ಪ್ರದೇಶದ ಖೈರಾನಿ ರಸ್ತೆಯಲ್ಲಿ ವಿಸರ್ಜನ ಮೆರವಣಿಗೆ ನಡೆಯುತ್ತಿದ್ದಾಗ ದೊಡ್ಡ ದುರಂತ ಸಂಭವಿಸಿದೆ. ಶ್ರೀ ಗಜಾನನ ಮಿತ್ರ ಮಂಡಲದ ವಿಸರ್ಜನ್ ಮೆರವಣಿಗೆ ನಡೆಯುತ್ತಿದ್ದಾಗ, ಅವರ ಟ್ರಾಲಿಗೆ ನೇತಾಡುತ್ತಿದ್ದ ಹೈಟೆನ್ಷನ್ ವೈರ್ ನಿಂದ ಶಾಕ್ ಆಯಿತು. ಇದರಲ್ಲಿ ಒಬ್ಬರು ಸಾವನ್ನಪ್ಪಿದರು. ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರು. ಶನಿವಾರ ಮಧ್ಯರಾತ್ರಿ ಸುಮಾರಿಗೆ ಈ ಘಟನೆ ನಡೆದಿದೆ. ಟಾಟಾ ಪವರ್ ಕಂಪನಿಯ 11,000 ವೋಲ್ಟ್ ವೈರ್ ಮೆರವಣಿಗೆ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತಿದೆ.

ಪ್ರತಿ ವರ್ಷದಂತೆ, ಈ ವರ್ಷವೂ, ಶ್ರೀ ಗಜಾನನ ಮಿತ್ರ ಮಂಡಲದ ಗಣೇಶ ನಿಮಜ್ಜನ ಟ್ರಾಲಿ ಮುಂಬೈನ ಸಕಿನಾಕಾ ಖೈರಾನಿ ರಸ್ತೆ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು. ಟಾಟಾ ಪವರ್ ಕಂಪನಿಯ 11,000-ವೋಲ್ಟ್ ಹೈಟೆನ್ಷನ್ ವೈರ್ ಆ ರಸ್ತೆಯ ಮೂಲಕ ಹಾದು ಹೋಗುತ್ತಿತ್ತು. ಆ ವೈರ್‌ನಲ್ಲಿದ್ದ ಒಂದು ಸಣ್ಣ ವೈರ್ ಕೆಳಗೆ ನೇತಾಡುತ್ತಿತ್ತು. ವಿಸರ್ಜನಾ ಮೆರವಣಿಗೆ ನಡೆಯುತ್ತಿರುವಾಗ, ಈ ವೈರ್ ನೇರವಾಗಿ ಗಣೇಶ ಟ್ರಾಲಿಗೆ ತಗುಲಿತು. ಇದರ ನಂತರ, ಕೆಲವೇ ಸೆಕೆಂಡುಗಳಲ್ಲಿ, ಟ್ರಾಲಿಯಲ್ಲಿದ್ದ ಐದು ಜನರು ಆಘಾತಕ್ಕೊಳಗಾದರು. ಈ ಐದು ಜನರು ಗಂಭೀರವಾಗಿ ಗಾಯಗೊಂಡರು. ಅವರಲ್ಲಿ, ಬಿನು ಶಿವಕುಮಾರ್ (36 ವರ್ಷ) ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ತುಷಾರ್ ಗುಪ್ತಾ (18), ಧರ್ಮರಾಜ್ ಗುಪ್ತಾ (44), ಆರುಷ್ ಗುಪ್ತಾ (12), ಶಂಭು ಕಾಮಿ (20) ಮತ್ತು ಕರಣ್ ಕನೋಜಿಯಾ (14) ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Related posts

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕುಮಾರಿ ಸನ್ನಿಧಿ ಸುಧಾಕರ್ ಪೂಜಾರಿಗೆ ಶೇ 96.60 ಅಂಕ.

Mumbai News Desk

ಬಂಟರ ಸಂಘ ಮುಂಬೈ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ  ನವರಾತ್ರಿ ಉತ್ಸವ, ಮಾತಾ ಕೀ ಚೌಕಿ .  ದಾಂಡಿಯಾ ರಾಸ್.

Mumbai News Desk

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 

Mumbai News Desk

ಚಿಣ್ಣರಬಿಂಬ ವಿಕ್ರೋಲಿ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

Mumbai News Desk

ಮುಂಬಯಿ : ಏನ್ ಸಿ ಪಿ ಮುಖಂಡ ಬಾಬಾ ಸಿದ್ಧಿಕ್ ಅವರನ್ನು ಗುಂಡಿಕ್ಕಿ ಹತ್ಯೆ

Mumbai News Desk

ಮೂರು ದಶಕಗಳ ಅವಿರತ ಸೇವಾ ಪಯಣ: ಭಾರತ್ ಬ್ಯಾಂಕಿನ ಹಿರಿಯ ಅಧಿಕಾರಿ ಸುಧೀರ್ ಸುವರ್ಣರಿಗೆ ಅಭಿನಂದನಾ ಪೂರ್ವಕ ಬೀಳ್ಕೊಡುಗೆ

Mumbai News Desk