September 6, 2026
Mumbai News Kannada
ಮುಂಬಯಿ

ಮುಂಬೈ : ಸಾಕಿನಾಕದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭ ಹೈಟೆನ್ಷನ್ ತಂತಿ ತಗಲಿ ಒರ್ವ ಸಾವು, ಐವರ ಸ್ಥಿತಿ ಗಂಭೀರ





ರಾಜ್ಯಾದ್ಯಂತ ಗಣಪತಿ ವಿಸರ್ಜನೆಯ ಸಂಭ್ರಮ ಉತ್ತುಂಗಕ್ಕೇರಿದೆ. ಒಂದೆಡೆ ಸಂತೋಷ ಮತ್ತು ಉತ್ಸಾಹದ ವಾತಾವರಣವಿದ್ದರೆ, ಮತ್ತೊಂದೆಡೆ, ಸಾಕಿನಾಕ ಪ್ರದೇಶದಲ್ಲಿ ಗಣಪತಿ ಮೆರವಣಿಗೆಯ ಸಮಯದಲ್ಲಿ ಹೈಟೆನ್ಷನ್ ತಂತಿಯಿಂದ ಆಘಾತಕ್ಕೊಳಗಾಗಿ ಒಬ್ಬರು ಸಾವನಪ್ಪಿ, ಐವರ ಪರಿಸ್ಥಿತಿ ಚಿಂತಾಜನಕವಿದೆ.

ಮುಂಬೈನ ಸಾಕಿನಾಕ ಪ್ರದೇಶದ ಖೈರಾನಿ ರಸ್ತೆಯಲ್ಲಿ ವಿಸರ್ಜನ ಮೆರವಣಿಗೆ ನಡೆಯುತ್ತಿದ್ದಾಗ ದೊಡ್ಡ ದುರಂತ ಸಂಭವಿಸಿದೆ. ಶ್ರೀ ಗಜಾನನ ಮಿತ್ರ ಮಂಡಲದ ವಿಸರ್ಜನ್ ಮೆರವಣಿಗೆ ನಡೆಯುತ್ತಿದ್ದಾಗ, ಅವರ ಟ್ರಾಲಿಗೆ ನೇತಾಡುತ್ತಿದ್ದ ಹೈಟೆನ್ಷನ್ ವೈರ್ ನಿಂದ ಶಾಕ್ ಆಯಿತು. ಇದರಲ್ಲಿ ಒಬ್ಬರು ಸಾವನ್ನಪ್ಪಿದರು. ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರು. ಶನಿವಾರ ಮಧ್ಯರಾತ್ರಿ ಸುಮಾರಿಗೆ ಈ ಘಟನೆ ನಡೆದಿದೆ. ಟಾಟಾ ಪವರ್ ಕಂಪನಿಯ 11,000 ವೋಲ್ಟ್ ವೈರ್ ಮೆರವಣಿಗೆ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತಿದೆ.

ಪ್ರತಿ ವರ್ಷದಂತೆ, ಈ ವರ್ಷವೂ, ಶ್ರೀ ಗಜಾನನ ಮಿತ್ರ ಮಂಡಲದ ಗಣೇಶ ನಿಮಜ್ಜನ ಟ್ರಾಲಿ ಮುಂಬೈನ ಸಕಿನಾಕಾ ಖೈರಾನಿ ರಸ್ತೆ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು. ಟಾಟಾ ಪವರ್ ಕಂಪನಿಯ 11,000-ವೋಲ್ಟ್ ಹೈಟೆನ್ಷನ್ ವೈರ್ ಆ ರಸ್ತೆಯ ಮೂಲಕ ಹಾದು ಹೋಗುತ್ತಿತ್ತು. ಆ ವೈರ್‌ನಲ್ಲಿದ್ದ ಒಂದು ಸಣ್ಣ ವೈರ್ ಕೆಳಗೆ ನೇತಾಡುತ್ತಿತ್ತು. ವಿಸರ್ಜನಾ ಮೆರವಣಿಗೆ ನಡೆಯುತ್ತಿರುವಾಗ, ಈ ವೈರ್ ನೇರವಾಗಿ ಗಣೇಶ ಟ್ರಾಲಿಗೆ ತಗುಲಿತು. ಇದರ ನಂತರ, ಕೆಲವೇ ಸೆಕೆಂಡುಗಳಲ್ಲಿ, ಟ್ರಾಲಿಯಲ್ಲಿದ್ದ ಐದು ಜನರು ಆಘಾತಕ್ಕೊಳಗಾದರು. ಈ ಐದು ಜನರು ಗಂಭೀರವಾಗಿ ಗಾಯಗೊಂಡರು. ಅವರಲ್ಲಿ, ಬಿನು ಶಿವಕುಮಾರ್ (36 ವರ್ಷ) ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ತುಷಾರ್ ಗುಪ್ತಾ (18), ಧರ್ಮರಾಜ್ ಗುಪ್ತಾ (44), ಆರುಷ್ ಗುಪ್ತಾ (12), ಶಂಭು ಕಾಮಿ (20) ಮತ್ತು ಕರಣ್ ಕನೋಜಿಯಾ (14) ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Related posts

ನಮೋ ಮೊಯರ್ ಗ್ಲೋಬಲ್ ಪೌಂಡೇಶನ್; ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕಂಪ್ಯೂಟರ್ ವಿತರಣೆ,

Mumbai News Desk

ಎಸ್ ಎಸ್ ಸಿ ಯಲ್ಲಿ ಅನನ್ಯಾ ಹರೀಶ್ ಪೂಜಾರಿ ಶೇ 97.80 ಅಂಕ

Mumbai News Desk

 ಶ್ರೀ ಕಟೀಲು ಯಕ್ಷಕಲ ವೇದಿಕೆ ಚಾರಿಟೇಬಲ್ ಟ್ರಸ್ಟ್ ಆರನೇ ವಾರ್ಷಿಕ ಯಕ್ಷ ಸಂಭ್ರಮ

Mumbai News Desk

ಮದರ್ ಇಂಡಿಯಾ ದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ನಿರಂತರವಾಗಿರಲಿ -ಸುರೇಂದ್ರ ಪೂಜಾರಿ ಮುಂಬೈ :

Mumbai News Desk

ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ ಸಂಪನ್ನ

Mumbai News Desk

ಸಮಾಜ ಸೇವಕ ಡಾ. ಪಿ.ವಿ. ಶೆಟ್ಟಿಗೆ ಕರ್ನಾಟಕ ಸಂಘ ಮುಂಬಯಿ ಗೌರವಾರ್ಪಣೆ

Mumbai News Desk