32 C
Mumbai
April 24, 2026
Mumbai News Kannada
ಕರಾವಳಿ

ಶಂಕರಪುರ ರಾಮಣ್ಣ ಪೂಜಾರಿ ನಿಧನ.





ಪಾಂಗಾಳ ಗ್ರಾಮದವರಾದ ರಾಮಣ್ಣ ಪೂಜಾರಿ (86)ಸ್ವಲ್ಪ ಕಾಲದ ಅಸೌಖ್ಯದಿಂದ ಪಾಂಗಾಳದ ಸ್ವಗೃಹ ದಲ್ಲಿ ನಿಧನ ಹೊಂದಿದರು, ಮೃತರ ಪತ್ನಿ ಓರ್ವ ಪುತ್ರ ಈ ಹಿಂದೆಯೇ ಮೃತರಾಗಿದ್ದು, ಮೂವರು ಪುತ್ರರು ಹಾಗೂ ಒಬ್ಬರು ಪುತ್ರಿಯನ್ನು ಅಗಲಿದ್ದಾರೆ, ಶಂಕರಪುರ ಪೇಟೆಯಲ್ಲಿ ಸುಮಾರು 60ವರುಷಗಳ ಸುದೀರ್ಘ ಟೈಲರ್ ವೃತ್ತಿಯೊಂದಿಗೆ ರಾಮಣ್ಣ ಟೈಲರ್ ಎಂದೇ ಪ್ರಸಿದ್ದಿ ಪಡೆದು ನಲವತ್ತು ವರುಷಗಳ ಹಿಂದೆ ಅಶ್ವತ್ತಕಟ್ಟೆ ಸ್ಥಾಪಿಸಿ ನಿತ್ಯ ನಿರಂತರ ಪೂಜೆ ಕೈಂಕರ್ಯದೊಂದಿಗೆ ಗಂಟೆ ಬಾರಿಸಿ ಪಕ್ಷಿಗಳಿಗೆ ಆಹಾರ ನೀಡುವುದು ಅವರ ದಿನಚರಿ ಆಗಿತ್ತು, ಹಲವು ವರ್ಷ ಸ್ವತ: ಶ್ರೀ ಅಯ್ಯಪ್ಪ ಮಾಲಾಧಾರಣೆ ಮಾಡಿ ಶಿಬಿರದಲ್ಲಿ ಸೇವೆ ನೀಡಿರುವುದಲ್ಲದೆ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಕೂಡ ಸಕ್ರಿಯರಾಗಿದ್ದರು, ಪೇಟೆ ಯಲ್ಲಿ ಯಾರಾದರೂ ಅನಾಥರು ಸಿಕ್ಕಿದಲ್ಲಿ, ತನ್ನಲ್ಲಿ ಇದ್ದುದರಲ್ಲಿ ಅವರಿಗೆ ನೀಡಿ ಉಪಚರಿಸುತಿದ್ದರು,

ಅವರ ನಿಧನಕ್ಕೆ ಅಯ್ಯಪ್ಪ ಭಕ್ತ ವೃಂದ ಮುಂಬಯಿಯ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಹಾಗೂ ಶಿಷ್ಯಂದಿರು, ಹಾಗೂ ಇನ್ನಂಜೆ, ಪಾಂಗಳ, ಶಂಕರಪುರ ಪರಿಸರದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.



Related posts

ಮೂಳೂರು ಜಾರಿಗೆದಡಿ ಕೋಟಿಯನ್ ಮೂಲಸ್ಥಾನದ ತನು ತಂಬಿಲ

Mumbai News Desk

ಶ್ರೀ ಭಗವತೀ ತೀಯಾ ಸಮಾಜ ನೇಜಾರ್,  ಮಹಿಳಾ ಘಟಕ ಉದ್ಘಾಟನೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ನ.21ರಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ

Mumbai News Desk

ಡಿ.25ಕ್ಕೆ ಆಶಾ ಪ್ರಕಾಶ್ ಶೆಟ್ಟಿ “ನೆರವು” ಪ್ರದಾನ ಕಾರ್ಯಕ್ರಮ 

Mumbai News Desk

ನಡೂರು ಕಂಬಳ ಗದ್ದೆ ಮನೆ ಕಂಬಳೋತ್ಸವ

Mumbai News Desk