ಕರ್ನೀರೆ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಅರ್ಚಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ, ಯುವಕರೀಗೆ ದೈವದ ಆರಾಧನೆಯ ವಿದಿವಿಧಾನಗಳ ಮಾರ್ಗದರ್ಶನ ನೀಡುತ್ತಾ ಬಂದಿರುವ ಶ್ರೀಯುತ ವಿಠ್ಠಲ ಪೂಜಾರಿ, ರನೋಲಿ, ಕರ್ನಿರೆ ಕೊಪ್ಪಲ ಇವರು ತನ್ನ 71 ವರ್ಷ ಪ್ರಾಯದಲ್ಲಿ ದಿನಾಂಕ 29/10/2025 ರಂದು ದೇವರ ಪಾದ ಸೇರಿರುತ್ತಾರೆ. ಶ್ರೀಯುತರು ತನ್ನ ಎರಡು ಗಂಡು ಮಕ್ಕಳು, ಗ್ರಾಮಸ್ಥರು ಮತ್ತು ಅಪಾರ ಸಂಖ್ಯೆಯಲ್ಲಿ ತನ್ನ ಬಂಧು-ಮಿತ್ರರನ್ನು ಅಗಲಿರುತ್ತಾರೆ. ದಿವಂಗತರು ಕರ್ನೀರೆ ಗಂಗಾಧರ ಅಮೀನ್ ಇವರ ಸಹೊದರ ಸಂಬಂಧಿಯಾಗಿರುತ್ತಾರೆ. ಮೃತರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.
ದಿವಂಗತರ ಪಾರ್ಥೀವ ಶರೀರವನ್ನು ದೈವ ಅರ್ಚಕರೀಗೆ ಗ್ರಾಮಸ್ಥರಿಂದ ಲಭಿಸಬೇಕಾದ ಗೌರವದೊಂದಿಗೆ ಪಂಚಭೂತಗಳೊಂದಿಗೆ ವಿಲೀನಗೊಳಿಸಲಾಗುವುದು.




