ಮುಂಬಯಿ: ಸಸಿಹಿತ್ಲು ನಿವಾಸಿ, ಹೆಸರಾಂತ ಪತ್ರಕರ್ತ, ವಾಗ್ಮಿ, ಜಾನಪದ ಬರಹಗಾರ, ಸಂಘಟಕ, ಗಾಯಕ ಮತ್ತು ಬಹುಮುಖ ಪ್ರತಿಭೆಯ ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲುರವರು ಅಲ್ಪಕಾಲದ ಅನಾರೋಗ್ಯದಿಂದ ಜುಲೈ 13ರಂದು ನಿಧನರಾಗಿರುವರು.
ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಮುಂಬಯಿಯ ಆಡಳಿತ ಸಮಿತಿಯು ಅವರ ಅಗಲುವಿಕೆಯ ಸ್ಮರಣಾರ್ಥ ನುಡಿನಮನ, ಶ್ರದ್ಧಾಂಜಲಿ ಸಭೆಯನ್ನು ಶನಿವಾರ 25-07-2026ರ ಸಂಜೆ 4.30ರ ಸಮಯಕ್ಕೆ ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಹಮ್ಮಿಕೊಂಡಿದೆ.
ಮುಂಬಯಿ ಮತ್ತು ಉಪನಗರಗಳ ಅವರ ಸಹಸ್ರಾರು ಅಭಿಮಾನಿಗಳು, ಸಸಿಹಿತ್ಲು ಬಿಲ್ಲವ ಹಾಗೂ ಮೊಗವೀರ ಬಂಧುಗಳು ಮತ್ತು ಪರಿಸರದ ಇತರ ಸಮುದಾಯದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲದಲ್ಲಿ ಆಗಮಿಸಿ ನುಡಿನಮನ ಸಲ್ಲಿಸಿ, ಪ್ರಾರ್ಥನಾ ಸಭೆ ಯಶಸ್ವಿಯಾಗಿ ಜರಗುವಂತೆ ಸಹಕರಿಸಲು ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಅಭಿಮಾನಿ ವರ್ಗವು ಆತ್ಮೀಯವಾಗಿ ವಿನಂತಿಸಿಕೊಂಡಿದೆ.





