July 23, 2026
Mumbai News Kannada
ಪ್ರಕಟಣೆ

ಜುಲೈ 25: ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿಪತ್ರಕರ್ತ, ಸಾಹಿತಿ, ರಂಗಕರ್ಮಿ ದಿವಂಗತ ಪರಮಾನಂದ ವಿ. ಸಾಲ್ಯಾನ್‌ರವರಿಗೆ ಶ್ರದ್ಧಾಂಜಲಿ ಸಭೆ








​ಮುಂಬಯಿ: ಸಸಿಹಿತ್ಲು ನಿವಾಸಿ, ಹೆಸರಾಂತ ಪತ್ರಕರ್ತ, ವಾಗ್ಮಿ, ಜಾನಪದ ಬರಹಗಾರ, ಸಂಘಟಕ, ಗಾಯಕ ಮತ್ತು ಬಹುಮುಖ ಪ್ರತಿಭೆಯ ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲುರವರು ಅಲ್ಪಕಾಲದ ಅನಾರೋಗ್ಯದಿಂದ ಜುಲೈ 13ರಂದು ನಿಧನರಾಗಿರುವರು.


​ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಮುಂಬಯಿಯ ಆಡಳಿತ ಸಮಿತಿಯು ಅವರ ಅಗಲುವಿಕೆಯ ಸ್ಮರಣಾರ್ಥ ನುಡಿನಮನ, ಶ್ರದ್ಧಾಂಜಲಿ ಸಭೆಯನ್ನು ಶನಿವಾರ 25-07-2026ರ ಸಂಜೆ 4.30ರ ಸಮಯಕ್ಕೆ ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಹಮ್ಮಿಕೊಂಡಿದೆ.


​ಮುಂಬಯಿ ಮತ್ತು ಉಪನಗರಗಳ ಅವರ ಸಹಸ್ರಾರು ಅಭಿಮಾನಿಗಳು, ಸಸಿಹಿತ್ಲು ಬಿಲ್ಲವ ಹಾಗೂ ಮೊಗವೀರ ಬಂಧುಗಳು ಮತ್ತು ಪರಿಸರದ ಇತರ ಸಮುದಾಯದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲದಲ್ಲಿ ಆಗಮಿಸಿ ನುಡಿನಮನ ಸಲ್ಲಿಸಿ, ಪ್ರಾರ್ಥನಾ ಸಭೆ ಯಶಸ್ವಿಯಾಗಿ ಜರಗುವಂತೆ ಸಹಕರಿಸಲು ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಅಭಿಮಾನಿ ವರ್ಗವು ಆತ್ಮೀಯವಾಗಿ ವಿನಂತಿಸಿಕೊಂಡಿದೆ.



Related posts

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಫೆ. 6ರಂದು ವಾರ್ಷಿಕ ಉತ್ಸವ.

Mumbai News Desk

ಜ.7ರಂದು ಶ್ರೀ ಅಯ್ಯಪ್ಪ ಭಕ್ತ ವೃಂದ, ಸಾಮಾಜಿಕ ಸಂಸ್ಥೆ, ನಾಲಾಸೋಪರ, ಇದರ ವಾರ್ಷಿಕ ಅಯ್ಯಪ್ಪ ಮಹಾಪೂಜೆ.

Mumbai News Desk

ಡೊಂಬಿವಲಿಯಲ್ಲಿ ಇಂದು( ಜುಲೈ 15) ಅದ್ದೂರಿ ಬಡಗು ಯಕ್ಷ ಸಂಭ್ರಮ: ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಪ್ರದರ್ಶನ, ಸಾಧಕರಿಗೆ ಸನ್ಮಾನ

Mumbai News Desk

ಶ್ರೀ ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ ಇಲ್ಲಿ ನವೆಂಬರ್ 13 ರಂದುತುಳಸೀ ಪೂಜೆ ಹಾಗೂ ಕಾರ್ತಿಕ ದೀಪೋತ್ಸವ

Mumbai News Desk

ಆ.16: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ

Mumbai News Desk

ಜ.14 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ.ಸುವರ್ಣ ಸಭಾಂಗಣದಲ್ಲಿಸುವರ್ಣಯುಗ ಗ್ರಂಥ ಬಿಡುಗಡೆ ಸಮಾರಂಭ

Mumbai News Desk