32 C
Mumbai
March 7, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ, ಕಲ್ಯಾಣ: ನ.23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ





12/11/25,ಕಲ್ಯಾಣ (ಪ): ಕರ್ನಾಟಕ ಅಭಿಮಾನಿಗಳೇ, ಪ್ರತಿ ವರ್ಷದಂತೆ ಈ ವರ್ಷ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 23ನೇ ವಾರ್ಷಿಕೋತ್ಸವವನ್ನು 23ನೇ ನವೆಂಬರ್ 2025ರಂದು ಸಂಜೆ ಕಲ್ಯಾಣ(ಪ) ಪರಿಸರದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಸಂಜೆ 5ರಿಂದ ಆಚರಿಸಲಾಗುವುದು. ಅದ್ದೂರಿಯಾಗಿ ಆಚರಿಸಲ್ಪಡುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂಟರ ಸಂಘ, ಮುಂಬಯಿಯ ಭೀವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಭೋದ ಭಂಡಾರಿ ಹಾಗೂ ಪ್ರತಿಷ್ಠಿತ ಡೊಂಬಿವಲಿ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿಗಳಾದ ಪ್ರೊ. ಅಜಿತ್ ಉಮ್ರಾಣಿಯವರು ಗೌರವ ಅತಿಥಿಯಾಗಿ ಆಗಮಿಸಲಿದ್ದಾರೆ. ವಿವಿಧ ಮನೋರಂಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಹೋಟೆಲ್ ಡಾಲ್ಫಿನ್ ಮಾಲಿಕರಾದ ಶ್ರೀ ಸದಾನಂದ ಶೆಟ್ಟಿಯವರನ್ನು, ಕಲಾವಿದೆ ಪ್ರವೀಣಾ ಶೆಟ್ಟಿಯವರನ್ನು ಸಮಾಜ ಸೇವೆ ಕ್ಷೇತ್ರದಲ್ಲಿ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಲ್ಲರಿಗೂ ಪರಿಚಿತ ಉದಯವಾಣಿ ಪತ್ರಕರ್ತ ಶ್ರೀ ಗುರುರಾಜ ಪೊಟ್ನಿಸ್ ರವರನ್ನು ಸನ್ಮಾನಿಸಲಾಗುವುದು. ಜೊತೆಗೆ 16 ನವೆಂಬರ್ 25 ಸಂಜೆ 3 ರಿಂದ ಸಂಘದ ಕಾರ್ಯಾಲಯದಲ್ಲಿ ಸಂಘದ ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಘದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಕರ್ನಾಟಕ ಬಾಂಧವರು ಆಗಮಿಸಿ ನಮ್ಮ ಆದರಾತಿಥ್ಯವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಸಮಸ್ತ ಸಂಘದ ಸದಸ್ಯರ ಪರವಾಗಿ ಅಧ್ಯಕ್ಷ ಶ್ರೀ ಜಯಂತ ದೇಶಮುಖರವರು ವಿನಂತಿಸಿ ಕೊಂಡಿದ್ದಾರೆ.



Related posts

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್. ಶನಿ ಕಥೆ ಪ್ರವಚನ ಮತ್ತು  ಗ್ರಂಥ ವಾಚನ ಶಿಕ್ಷಣ ತರಬೇತಿ – 

Mumbai News Desk

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk

ಮೀರಾ ದಹಾಣು ಬಂಟ್ಸ್ (ರಿ) ಅ10.ಆಟಿದ ಕೂಟ . ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಪೆ. 3 ರಿಂದ 9 ರ ತನಕ ಬೋರಿವಲಿ: ಶ್ರೀ ಜಗದೀಶ್ವರಿ ದೇವಸ್ಥಾನದ ನೂತನ ಆಲಯ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಂಭ್ರಮ

Mumbai News Desk

ಜು.21, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಆಚರಣೆ.

Mumbai News Desk