32 C
Mumbai
March 7, 2026
Mumbai News Kannada
ಪ್ರಕಟಣೆ

ಡಿ. 03. ಥಾಣೆಯಲ್ಲಿ ಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವೆಯಲ್ಲಿ ಮಂತ್ರ ದೇವತೆಯ 6ನೇ ವಾರ್ಷಿಕ ಪೂಜೆ ಹಾಗೂ ನೇಮೋತ್ಸವ





​ಮುಂಬಯಿಯ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮತ್ತು ಥಾಣೆ ವೈಶಾಲಿ ನಗರದ ನಿವಾಸಿಗಳಾದ ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಹಾಗೂ ಪ್ರಮೀಳಾ ಪೂಜಾರಿ ಇವರ ಸೇವೆಯಲ್ಲಿ, ಮಂತ್ರ ದೇವತೆಯ 6ನೇ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವವು ಡಿ. 03, ಬುಧವಾರದಂದು ವೈಶಾಲಿ ನಗರದಲ್ಲಿ ನಡೆಯಲಿದೆ.

​ಈ ಧಾರ್ಮಿಕ ಕಾರ್ಯಕ್ರಮವು ಶ್ರೀನಗರ ಪೊಲೀಸ್‌ ಸ್ಟೇಷನ್ ಹತ್ತಿರದ ನಿಶಿಗಂಧ ಕೋ.ಆಪ್. ಹೌಸಿಂಗ್ ಸೊಸೈಟಿಯಲ್ಲಿ ನೆರವೇರಲಿದೆ.

ಕಾರ್ಯಕ್ರಮಗಳ ವಿವರ:

​ದೇವತಾ ಕಾರ್ಯಕ್ರಮಗಳು ಬೆಳಿಗ್ಗೆ 6.00 ಗಂಟೆಗೆ ಕಲಶಾಭಿಷೇಕದೊಂದಿಗೆ ಪ್ರಾರಂಭವಾಗಲಿವೆ. ನಂತರ 8.00 ಗಂಟೆಗೆ ಗಣಹೋಮ ಮತ್ತು 10.00 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ಜರುಗಲಿದೆ. ಮಧ್ಯಾಹ್ನ 1.00 ಗಂಟೆಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

​ಮಧ್ಯಾಹ್ನ 2.00 ಗಂಟೆಯಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.00 ಗಂಟೆಗೆ ಮಂತ್ರದೇವತೆಯ ಬಾಲು ಭಂಡಾರ ಮೆರವಣಿಗೆ ನಡೆಯಲಿದೆ. ರಾತ್ರಿ 6.00 ಗಂಟೆಗೆ ಕುಣಿತ ಭಜನೆ ಹಾಗೂ 7.00 ಗಂಟೆಗೆ ಮಂತ್ರದೇವತೆಯ ಗಗ್ಗರ ಸೇವೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

​ಕಾರ್ಯಕ್ರಮದ ದರ್ಶನ ಸೇವೆಯನ್ನು ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿಯವರು ನೆರವೇರಿಸಲಿದ್ದಾರೆ. ಬೋಳ ಜಗ್ಗು ಬಳಗದವರಿಂದ ನರತನ ಸೇವೆ, ಮಂಗಲದಿ ಮಠದ ಜಗದೀಶ್ ಮೂಲ್ಯಯವರು ಮಧ್ಯಸ್ಥರಾಗಿ, ಮತ್ತು ಹರೀಶ ಪೂಜಾರಿ ಹಾಗೂ ತಂಡದಿಂದ ವಾಲಗದ ಸೇವೆ ನಡೆಯಲಿದೆ. ಗಣಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ಶ್ರೀಕಾಂತ್ ಭಟ್ ಬಳಗದವರು ನಡೆಸಿಕೊಡಲಿದ್ದಾರೆ.

​ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಮತ್ತು ಪ್ರಮೀಳಾ ಪೂಜಾರಿಯವರು ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ದೈವ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9930247335.



Related posts

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಮೇ 18ರಂದು ಸಾಮೂಹಿಕ ಅಶ್ಲೇಷ ಬಲಿ ಪೂಜೆ

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನ – 48ನೇ ವರ್ಷದ ನವರಾತ್ರಿ ಮಹೋತ್ಸವ 2025

Mumbai News Desk

ಮದರ್ ಇಂಡಿಯಾ ಫ್ರೀ ನೈಟ್ ಹೈಸ್ಕೂಲ್ ನ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ವತಿಯಿಂದ ಸೆ. 14, 15ರಂದು ಗುರುವಂದನೆ ಮತ್ತು ತವರೂರು ಕಾಣಿಕೆ ಕಾರ್ಯಕ್ರಮ

Mumbai News Desk

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..

Mumbai News Desk

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ಬಂಟ್ಸ್ ಪೊರಮ್ ಮೀರಾಭಾಯಂದರ್:ಆ 7 ರಂದು “ಭೀಷ್ಮ ವಿಜಯ” ಯಕ್ಷಗಾನ ತಾಳಮದ್ದಳೆ.

Mumbai News Desk