September 6, 2026
Mumbai News Kannada
ಪ್ರಕಟಣೆ

ಡಿ. 03. ಥಾಣೆಯಲ್ಲಿ ಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವೆಯಲ್ಲಿ ಮಂತ್ರ ದೇವತೆಯ 6ನೇ ವಾರ್ಷಿಕ ಪೂಜೆ ಹಾಗೂ ನೇಮೋತ್ಸವ





​ಮುಂಬಯಿಯ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮತ್ತು ಥಾಣೆ ವೈಶಾಲಿ ನಗರದ ನಿವಾಸಿಗಳಾದ ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಹಾಗೂ ಪ್ರಮೀಳಾ ಪೂಜಾರಿ ಇವರ ಸೇವೆಯಲ್ಲಿ, ಮಂತ್ರ ದೇವತೆಯ 6ನೇ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವವು ಡಿ. 03, ಬುಧವಾರದಂದು ವೈಶಾಲಿ ನಗರದಲ್ಲಿ ನಡೆಯಲಿದೆ.

​ಈ ಧಾರ್ಮಿಕ ಕಾರ್ಯಕ್ರಮವು ಶ್ರೀನಗರ ಪೊಲೀಸ್‌ ಸ್ಟೇಷನ್ ಹತ್ತಿರದ ನಿಶಿಗಂಧ ಕೋ.ಆಪ್. ಹೌಸಿಂಗ್ ಸೊಸೈಟಿಯಲ್ಲಿ ನೆರವೇರಲಿದೆ.

ಕಾರ್ಯಕ್ರಮಗಳ ವಿವರ:

​ದೇವತಾ ಕಾರ್ಯಕ್ರಮಗಳು ಬೆಳಿಗ್ಗೆ 6.00 ಗಂಟೆಗೆ ಕಲಶಾಭಿಷೇಕದೊಂದಿಗೆ ಪ್ರಾರಂಭವಾಗಲಿವೆ. ನಂತರ 8.00 ಗಂಟೆಗೆ ಗಣಹೋಮ ಮತ್ತು 10.00 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ಜರುಗಲಿದೆ. ಮಧ್ಯಾಹ್ನ 1.00 ಗಂಟೆಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

​ಮಧ್ಯಾಹ್ನ 2.00 ಗಂಟೆಯಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.00 ಗಂಟೆಗೆ ಮಂತ್ರದೇವತೆಯ ಬಾಲು ಭಂಡಾರ ಮೆರವಣಿಗೆ ನಡೆಯಲಿದೆ. ರಾತ್ರಿ 6.00 ಗಂಟೆಗೆ ಕುಣಿತ ಭಜನೆ ಹಾಗೂ 7.00 ಗಂಟೆಗೆ ಮಂತ್ರದೇವತೆಯ ಗಗ್ಗರ ಸೇವೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

​ಕಾರ್ಯಕ್ರಮದ ದರ್ಶನ ಸೇವೆಯನ್ನು ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿಯವರು ನೆರವೇರಿಸಲಿದ್ದಾರೆ. ಬೋಳ ಜಗ್ಗು ಬಳಗದವರಿಂದ ನರತನ ಸೇವೆ, ಮಂಗಲದಿ ಮಠದ ಜಗದೀಶ್ ಮೂಲ್ಯಯವರು ಮಧ್ಯಸ್ಥರಾಗಿ, ಮತ್ತು ಹರೀಶ ಪೂಜಾರಿ ಹಾಗೂ ತಂಡದಿಂದ ವಾಲಗದ ಸೇವೆ ನಡೆಯಲಿದೆ. ಗಣಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ಶ್ರೀಕಾಂತ್ ಭಟ್ ಬಳಗದವರು ನಡೆಸಿಕೊಡಲಿದ್ದಾರೆ.

​ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಮತ್ತು ಪ್ರಮೀಳಾ ಪೂಜಾರಿಯವರು ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ದೈವ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9930247335.



Related posts

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk

ಮಾ.15, ತುಳುನಾಡ ಸೇವಾಸಮಾಜ ಮೀರಾಬಾಯಂದರ್ ವತಿಯಿಂದ ಸಂಸ್ಥಾಪಕ ದಿನಾಚರಣೆ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಅರಸಿನ ಕುಂಕುಮ ಕಾರ್ಯಕ್ರಮ.

Mumbai News Desk

ಮುಂಬಯಿಯಲ್ಲಿ ಆಗಸ್ಟ್ 15ರಿಂದ ನಾಗಶ್ರೀ ಜಿ ಎಸ್ ತಂಡ ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ

Mumbai News Desk

ವಿದ್ಯಾವಿಹಾರ್: ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನ,ಫೆ. 1ರಂದು ಇಪ್ಪತ್ನಾಲ್ಕು ಕಂತುಗಳ ಶ್ರೀರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ

Mumbai News Desk

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk

ಜ.6ಕ್ಕೆ ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ, ವಾಗ್ಮಿ, ದಿನೇಶ್ ಮಟ್ಟು ಅವರಿಗೆ ಗೌರವ.

Mumbai News Desk