30 C
Mumbai
April 24, 2026
Mumbai News Kannada
ಪ್ರಕಟಣೆ

ಡಿ. 14 ರಂದು ಭಾಯಂದರ್ ಅಯ್ಯಪ್ಪ ಭಕ್ತ ಮಂಡಲದ ಇಪ್ಪತ್ತನೇ ವರ್ಷದ ಮಹಾಪೂಜೆ





ಮುಂಬಯಿ: ಭಾಯಂದರ್ ಪೂರ್ವದಲ್ಲಿರುವ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲದ ವತಿಯಿಂದ (ನ್ಯೂ ಅಂಕಿತಾ ಅಪಾರ್ಟ್ಮೆಂಟ್, ಪೊಲೀಸ್ ಸ್ಟೇಷನ್ ಸಮೀಪ, ನವಘರ್ ಫಾಟಕ್ ರೋಡ್) 20ನೇ ವಾರ್ಷಿಕ ಮಹಾಪೂಜಾ ಮಹೋತ್ಸವವು ಡಿಸೆಂಬರ್ 14ರಂದು ದಿನಪೂರ್ತಿ ವೈಭವದಿಂದ ಜರುಗಲಿದೆ.

​ಈ ವರ್ಷ ಮಹಾಪೂಜೆಯನ್ನು ಭಾಯಂದರ್ ಪೂರ್ವದ ನವಘರ್ ಫಾಟಕ್ ರಸ್ತೆಯಲ್ಲಿರುವ ಶಿರಿಡಿ ನಗರದ ಶಿಲೇದಾರ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮಗಳ ಪ್ರಮುಖಾಂಶಗಳು

ಸಮಯಕಾರ್ಯಕ್ರಮದ ವಿವರನೆರವೇರಿಸುವವರು/ಭಾಗವಹಿಸುವವರು
ಬೆಳಿಗ್ಗೆ 6:00ಗಣಹೋಮದೊಂದಿಗೆ ಆರಂಭ
ಬೆಳಿಗ್ಗೆ 9:00ಶ್ರೀ ದೇವರ ಜ್ಯೋತಿಯ ಮೆರವಣಿಗೆಮಂದಿರದಿಂದ ಆಗಮನ
ಬೆಳಿಗ್ಗೆ 9:30ಭಜನಾ ಕಾರ್ಯಕ್ರಮಆರಾಧನಾ ಫ್ರೆಂಡ್ಸ್ ಸದಸ್ಯೆಯರು ಹಾಗೂ ಜತೀಶ್ ಕುಂದರ್ ಬಳಗದವರು
ಮಧ್ಯಾಹ್ನ 12:00ಪಡಿ ಪೂಜೆ ಮತ್ತು ಮಹಾ ಮಂಗಳಾರತಿಕೀರ್ತಿಶೇಷ ತೊಕ್ಕೊಟ್ಟು ಧರ್ಮಣ್ ಗುರುಸ್ವಾಮಿಯವರ ಸ್ಮರಣೆ; ದಹಿಸರ್ ಶೈಲೇಂದ್ರ ನಗರದ ಮೋಹನ್ ಗುರುಸ್ವಾಮಿಯವರ ಉಪಸ್ಥಿತಿ; ಬ್ರಹ್ಮಾವರ ಕುಕ್ಕುಡೆ ಶ್ರೀ ಸುಧಾಕರ ಗುರುಸ್ವಾಮಿಯವರ ಶುಭ ಹಸ್ತದಿಂದ ಪೂಜೆ.
ಮಧ್ಯಾಹ್ನಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ
ಸಾಯಂಕಾಲ 6:00ಯಕ್ಷಗಾನ ಪ್ರದರ್ಶನಸುಮತಿ ನಾಮ್ದೇವ್ ಶೆಟ್ಟಿ ಮತ್ತು ಮಕ್ಕಳ ಸೇವಾ ರೂಪದಲ್ಲಿ, ಸಾಂತಾಕ್ರೂಸ್ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯವರಿಂದ ‘ನಳದಮಯಂತಿ’ ಪ್ರದರ್ಶನ.

​ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು, ಮಂಡಲದ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದು ಮಂಡಲದ ಗೌರವಾಧ್ಯಕ್ಷರುಗಳಾದ ಪ್ರಮೋದ್ ಕೆ. ಕೋಟ್ಯಾನ್, ರವಿಕಾಂತ್ ಶೆಟ್ಟಿ, ಅಶೋಕ್ ಎನ್. ಶೆಟ್ಟಿ; ಅಧ್ಯಕ್ಷ ಸುಕೇಶ್ ಶೆಟ್ಟಿ; ಉಪಾಧ್ಯಕ್ಷ ಉದಯ್ ಹೆಗ್ಡೆ; ಕಾರ್ಯದರ್ಶಿ ನವೀನ್ ಕೆ. ಸುವರ್ಣ; ಕೋಶಾಧಿಕಾರಿ ನವೀನ್ ಶೆಟ್ಟಿ; ಜೊತೆ ಕಾರ್ಯದರ್ಶಿ ನಿತಿನ್ ಜಿ. ಶೆಟ್ಟಿ. ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಕೆ. ಅಂಚನ್; ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಉದಯ್ ಡಿ. ಸುವರ್ಣ; ಆರಾಧನಾ ಫ್ರೆಂಡ್ಸ್‌ನ ಅಧ್ಯಕ್ಷೆ ಪ್ರೇಮಾ ಮಾಧವ ಹೆಗ್ಡೆ ಹಾಗೂ ಶಿಬಿರದ ಸ್ವಾಮಿಗಳು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಗೋರೆಗಾಂವ್ ಕರ್ನಾಟಕ ಸಂಘ : ಮಾ. 9ರಂದು 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ

Mumbai News Desk

ನ. 30 ರಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ವಠಾರದಲ್ಲಿ “ಕುಲದೈವೋ ಬ್ರಹ್ಮ” ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ರಜಕ ಸಂಘ ಮುಂಬಯಿ, ಜ.6 ರಂದು ಸಾಮೂಹಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ

Mumbai News Desk

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ

Mumbai News Desk

ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಾಳೆ (ಮಾ.16) ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ.

Mumbai News Desk

ಶ್ರೀ ಅಯ್ಯಪ್ಪ ಭಕ್ತ ವೃಂದ ಜೆರಿಮೆರಿ, ಡಿ.31ಕ್ಕೆ 34ನೇ ವಾರ್ಷಿಕ ಮಹಾಪೂಜೆ

Mumbai News Desk