32 C
Mumbai
March 7, 2026
Mumbai News Kannada
ಸುದ್ದಿ

ಕಲ್ಯಾಣ್: ಧಾರ್ಮಿಕ, ಸಾಮಾಜಿಕ ಸಂಘಟಕ, ಭಜನಾ ಗಾಯಕ ದೇವಾನಂದ್ ಜೆ ಸುವರ್ಣ ನಿಧನ





ನಂದಿಕೂರು,ಕೊಳಚೂರು ಶ್ರೀಮತಿ ಯೋಗಿನಿ ಮತ್ತು ಅಡ್ವೇ ಜಯರಾಮ ಕೋಟ್ಯಾನರ ಸುಪುತ್ರ, ಗೊರೇಗಾoವ್ ಮತ್ತು ಕಲ್ಯಾಣ್ ನಿವಾಸಿ ದೇವಾನಂದ್ ಜೆ ಸುವರ್ಣ ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ಸಂಜೆ(ಡಿ. 14) ದೈವಾದೀನರಾದರು.

ಅವರು ಅಡ್ವೇ ಗರಡಿ ಕೋಟಿ ಚೆನ್ನಯರ, ಶ್ರೀ ನಾರಾಯಣ ಗುರು ಸ್ವಾಮಿಯ, ಶ್ರೀ ನಿತ್ಯಾನಂದ ಸ್ವಾಮಿಯ, ಶ್ರೀ ರಾಘವೇಂದ್ರ ಹಾಗೂ ಶ್ರೀ ಸಾಯಿಬಾಬಾ ಹಾಗೂ ತುಳುನಾಡ ದೈವ ದೇವರುಗಳ ಪರಮ ಭಕ್ತರಾಗಿದ್ದರು. ಶ್ರೀ ನಿತ್ಯಾನಂದ ಸ್ವಾಮಿಯ ಹೆಸರಲ್ಲೇ ಭಜನಾ ಮಂಡಳಿ ಕಟ್ಟಿಕೊಂಡು ಮಹಾರಾಷ್ಟ್ರದಲ್ಲೇ ಪ್ರಸಿದ್ದಿಯ ಭಜನಾ ಗಾಯಕರಾಗಿದ್ದರು. ಬಿಲ್ಲವರ ಎಸೋಸಿಯೇಷನ್ ಮುಂಬಯಿ ಕಲ್ಯಾಣ್ ಸ್ಥಳೀಯ ಕಚೇರಿಯ ಮಾಜಿ ಉಪ ಕಾರ್ಯಧ್ಯಕ್ಷರಾಗಿ, ಬದ್ಲಾಪುರ ಶ್ರೀ ನಿತ್ಯಾನಂದ ಭಜನಾ ಸಮಿತಿಯಲ್ಲಿ ಸೇವೆ ಗೈದು, ಸಮಾಜದ ಸಂಘಟನೆಯಲ್ಲಿ ಹಾಗೂ ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದವರು. ಮೃತರು ತಾಯಿ, ತಂದೆ,ಪತ್ನಿ, ಇಬ್ಬರು ಪುತ್ರಿ, ಇಬ್ಬರು ತಮ್ಮಂದಿರು, ಇಬ್ಬರು ತಂಗಿ,-ಭಾವoದಿರನ್ನು, ದೊಡ್ಡ ಕುಟುಂಭ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಕ್ರೀಯೆ ಯಾತ್ರೆ ನಾಳೆ, ದಿನಾಂಕ 15.12.2025 ರಂದು ಸಂಜೆ 4 ಗಂಟೆಗೆ ಅವರ ಕಲ್ಯಾಣ್ ಗೃಹದಿಂದ ಹೊರಟು ಕಲ್ಯಾಣ್ ರುದ್ರಭೂಮಿಯಲ್ಲಿ ನೆರವೇರಲಿದೆ.



Related posts

ಸೌದಿ ಅರೇಬಿಯಾದ ಮದೀನಾ ಬಳಿ ಬಸ್-ಟ್ಯಾಂಕರ್ ಡಿಕ್ಕಿ: 42 ಭಾರತೀಯರು ಸಾವು

Mumbai News Desk

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟಿಕರಣ:

Mumbai News Desk

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಆರೋಗ್ಯ ಇಲಾಖೆಯಿಂದ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

Mumbai News Desk

ಮುಲ್ಕಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಮಿನಾ ಆಳ್ವ ಆಯ್ಕೆ 

Mumbai News Desk

ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರು, ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ , ಆರ್ಥಿಕ ನೆರವು ವಿತರಣೆ.

Mumbai News Desk