27.7 C
Mumbai
July 23, 2026
Mumbai News Kannada
ಮುಂಬಯಿ

ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ಸಮುದಾಯ ಪಿಕ್ನಿಕ್ ಯಶಸ್ವಿಯಾಗಿ ಆಯೋಜನೆ







ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ದಿನಾಂಕ 14 ಡಿಸೆಂಬರ್ 2025ರಂದು ಗೋರಾಯಿಯ ಫಾರ್ಮ್ ರಿಜೆನ್ಸಿ ರಿಸಾರ್ಟ್‌ನಲ್ಲಿ ಸಮುದಾಯ ಪಿಕ್ನಿಕ್ ಅನ್ನು ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ವಿವಿಧ ಪ್ರದೇಶಗಳಿಂದ ಆಗಮಿಸಿದ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ದಿನವನ್ನೆಲ್ಲಾ ಸಂತೋಷದಿಂದ ಕಳೆದರು.

ಈ ಕಾರ್ಯಕ್ರಮಕ್ಕೆ ಮೋಗವೀರ ವ್ಯಾವಸ್ಥಾಪಕ ಮಂಡಳಿಯ ಗಣ್ಯ ಅತಿಥಿಗಳಾದ ಶ್ರೀ ಪ್ರಜ್ವಲ್ ಸಾಲಿಯನ್, ಶ್ರೀಮತಿ ದಯಾವತಿ ಸುವರ್ಣ ಮತ್ತು ಶ್ರೀಮತಿ ಪ್ರೀತಿ ಶ್ರೀಯಾನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿದರು.

ಶ್ರೀ ಬೋಜರಾಜ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ಮನರಂಜನಾ ಆಟಗಳು ಎಲ್ಲ ವಯೋಮಾನದ ಸದಸ್ಯರನ್ನು ಆಕರ್ಷಿಸಿತು. ಈ ಸಂದರ್ಭ ಈಜುಕೊಳ, ರೇನ್ ಡ್ಯಾನ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಸದಸ್ಯರು ಸಂತೋಷದಿಂದ ಭಾಗವಹಿಸಿದರು.

ಕಾರ್ಯಕ್ರಮದ ಸಮಾರೋಪದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಯಶೋಧರ ವಿ. ಕೋಟ್ಯಾನ್ ಅವರು ಮೋಗವೀರ ವ್ಯಾವಸ್ಥಾಪಕ ಮಂಡಳಿಯ ಇತಿಹಾಸದಲ್ಲೇ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ದಯಾವತಿ ಸುವರ್ಣ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀ ವಿಶ್ವನಾಥ ಬಂಗೇರಾ, ಶ್ರೀ ಮೋಹನ್ ಪುತ್ರನ್, ಶ್ರೀಮತಿ ಪ್ರೇಮಾ ನಾಯ್ಕ್, ಶ್ರೀಮತಿ ಪಲ್ಲವಿ ಪುತ್ರನ್, ಶ್ರೀಮತಿ ಮೋಹಿನಿ ಮಲ್ಪೆ ಹಾಗೂ ಶ್ರೀಮತಿ ಇಂದಿರಾ ಪುತ್ರನ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭವನ್ನು ಶ್ರೀ ಪ್ರದೀಪ್ ಪುತ್ರನ್ ಹಾಗೂ ಬಹುಮಾನ ವಿತರಣೆಯನ್ನು ಶ್ರೀ ನವೀನ್ ಪುತ್ರನ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು



Related posts

ಮಲಾಡ್ ಶ್ರೀ ಮಹಮ್ಮಾಯಿ  ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ ದಸರಾ ಮಹೋತ್ಸವ ಸಂಪನ್ನ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿ, ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ  ರತ್ನಾ ಡಿ ಕುಲಾಲ್  ಆಯ್ಕೆ

Mumbai News Desk

ಜಾನ್ಹವಿ ಶೆಟ್ಟಿಗೆ ಶೇ.86.40 ಅಂಕ.

Mumbai News Desk

ಮುಂಬೈ :ದಹಿಸರ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ: ವಿವೇಕಾನಂದರ ಆದರ್ಶಗಳ ಸ್ಮರಣೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ-ಭಾಯಂದರ್ ಶಾಖೆಯಿಂದ ಪ್ರತಿಭಾ ಪುರಸ್ಕಾರ ಮತ್ತು ‘ಆಟಿಡೊಂಜಿ ಕೂಟ’

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕೃಷಾ ಪ್ರಕಾಶ್ ಶೆಟ್ಟಿ ಗೆ ಶೇ.92. 60 ಅಂಕ

Mumbai News Desk