ಮುಲ್ಕಿಯ ಪ್ರಸಿದ್ಧ ಒಣಹಣ್ಣುಗಳ ಮಳಿಗೆ ” ಕ್ಯಾನ್ ಕೋಸ್ ಝೋನ್ ಡ್ರೈ ಫ್ರೂಟ್ಸ್”
(Kancos Dry Fruits) ತನ್ನ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಆಯೋಜಿಸಿದ್ದ “ಕ್ಯಾನ್ ಕೋಸ್ “ಗಿವ್ ಅವೇ” ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ವಿಶೇಷ ಸ್ಪರ್ಧೆಯಲ್ಲಿ ಸುರೇಶ್ ಪೂಜಾರಿ ಬೈಲೂರು ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.
ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ ಜಿ ಎಂ , ಹಾಗೂ ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾದ ಅಧ್ಯಕ್ಷರಾದ ಚಂದ್ರಕಾಂತ್ ಶ್ರೀಯಾನ್ ಅವರು ವಿಜೇತರಿಗೆ ಬಹುಮಾನ ಹಸ್ತಾಂತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ
ಹರಿಶ್ಚಂದ್ರ ಸಾಲ್ಯಾನ್ (ಸಂಪಾದಕರು, ಹೊಸ ಅಂಗಣ ಪತ್ರಿಕೆ) ಉದಯ ಅಮೀನ್ ಮಟ್ಟು ,
ಜನಾರ್ದನ ಕೋಟ್ಯಾನ್(ಹೆಜಮಾಡಿ ಪಂಚಾಯತ್ ಸದಸ್ಯರು), ಪ್ರಭಾಕರ ದೇವಾಡಿಗ (ವಿಜಯ ಸೇವಾ ರೈತ ಸಹಕಾರಿ ಸೇವಾ ಸಂಘದ ನಿರ್ದೇಶಕರು), ಹರ್ಷರಾಜ್ ಶೆಟ್ಟಿ (ಅಧ್ಯಕ್ಷರು, ಲಯನ್ಸ್ ಕ್ಲಬ್ )ಕ್ಯಾನ್ ಕೋಸ್ ನ ವೆಂಕಟೇಶ್ ಬಂಗೇರ, ರಕ್ಷಿತ್ ಬೆಳ್ಮಣ್( ವಿ ಮೀಡಿಯಾ ಪ್ರತಿನಿಧಿ) ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದಿನೇಶ್ ಕೋಲ್ನಾಡ್ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.
ಮುಲ್ಕಿಯ ಕ್ಯಾನ್ ಕೋಸ್ ಸ್ಟೋರ್ ನಲ್ಲಿ ದೇಶ-ವಿದೇಶಗಳ ವಿವಿಧ ಬಗೆಯ ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್, ನಟ್ಸ್, ವಿವಿಧ ಬೀಜಗಳು ಹಾಗೂ ರುಚಿಕರವಾದ ಡ್ರೈ ಫ್ರೂಟ್, ಬರ್ಫಿ ಮತ್ತು ಸ್ವೀಟ್ಗಳಿಗೆ ಹೆಸರುವಾಸಿಯಾಗಿದೆ. ಊರಿನ ಹಾಗೂ ಪರವೂರಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿರುವ ಈ ಸಂಸ್ಥೆಯು, ವಿಶೇಷವಾಗಿ ಕ್ಯಾಟರಿಂಗ್ ಮತ್ತು ಶುಭ ಸಮಾರಂಭಗಳಿಗೆ ಬೇಕಾದ ಬೀಜ ದ್ರಾಕ್ಷಿ ಇತ್ಯಾದಿ ಹೋಲ್ಸೇಲ್ ದರದಲ್ಲಿಯೂ ಲಭ್ಯವಿದ್ದು ಗ್ರಾಹಕರ ನಿಕ್ಕಿನ ಸಂಸ್ಥೆಯಾಗಿ ಜನಮನ್ನಣೆ ಪಡೆದಿದೆ.




