32 C
Mumbai
March 7, 2026
Mumbai News Kannada
ಸುದ್ದಿ

” ಸಾಧನೆಯ ಮೂಲಕ ಮನಸ್ಸನ್ನು ತಿಳಿಗೊಳಿಸುವುದೇ ಜೀವನದ ಮುಖ್ಯ ಉದ್ದೇಶ “: ಶ್ರೀ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ.







ಸುದ್ದಿ ವಿವರ : ಪಿ.ಆರ್.ರವಿಶಂಕರ್
8483980035
ಬೊಯಿಸರ್ ತಾ. 14.01.2026
ಧರ್ಮಸ್ಥಳದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಇವರು ಇದೇ ಜನೆವರಿ ತಾ.14 ನೇ ಬುಧವಾರ ಮಕರ ಸಂಕ್ರಾಂತಿಯಂದು ಮಹಾರಾಷ್ಟ್ರ ಪಶ್ಚಿಮ ಕರಾವಳಿಯ ಬೊಯಿಸರ್ ಪಶ್ಚಿಮದಲ್ಲಿನ ಸುಪ್ರಸಿದ್ಧ ಶ್ರೀ ಸ್ವಾಮಿ ನಿತ್ಯಾನಂದ ಮಂದಿರಕ್ಕೆ ಭೇಟಿ ನೀಡಿದರು.
ಶ್ರೀ ಗಳಿಗೆ ಕಳೆದ ವರ್ಷ ಶ್ರೀ ಪಂಚ ದಶಾನಮ್ ಜುನಾ ಅಖಾಡದಲ್ಲಿನ ಗೌರವಾನ್ವಿತ ಅನಂತ ಶ್ರೀ ವಿಭೂಷಿತ ಶ್ರೋತ್ರೀಯ ಭ್ರಾಮ್ನಿಷ್ಟ ಮಹಾ ಮಂಡಲೇಶ್ವರ ಪದವಿ ದೊರಕಿದ್ದು ( ಈ ಪಟ್ಟಕ್ಕೆ ಭಾಜನರಾದ ಕರ್ನಾಟಕ ರಾಜ್ಯದಲ್ಲಿನ ಏಕೈಕ ಮತ್ತು ಮೊತ್ತ ಮೊದಲ ಸ್ವಾಮಿಗಳು ) ಈ ಪಟ್ಟ ದೊರಕಿದ ಬಳಿಕ ಬೊಯಿಸರ್ ಗೆ ಇಂದು ಮೊದಲ ಭೇಟಿ ಆಗಿದೆ.
ಮಂದಿರಕ್ಕೆ ಆಗಮಿಸಿದ ಶ್ರೀಗಳನ್ನು ಮಂದಿರದ ವಿಶ್ವಸ್ಥ ಮಂಡಳಿ, ಸದ್ಗುರು ಭಜನಾ ಮಂಡಳಿ ಹಾಗೂ ಭಕ್ತ ವೃಂದದವರು ಪುಷ್ಪವೃಷ್ಟಿ , ಸಾಂಪ್ರದಾಯಿಕ ವಾದ್ಯ ವೃಂದದೊಂದಿಗೆ ಸ್ವಾಗತಿಸಿದರು . ಮುಖ್ಯದ್ವಾರದಲ್ಲಿ ಶ್ರೀಗಳ ಪಾದ್ಯ ಪೂಜೆಯ ಬಳಿಕ , ನಿತ್ಯಾನಂದ ಸ್ವಾಮಿಯವರ ಮಂದಿರದಲ್ಲಿ ಶ್ರೀಗಳು ಆರತಿ ಸಲ್ಲಿಸಿದರು. ಸಭಾಂಗಣದಲ್ಲಿ ಮಂದಿರದ ವಿಶ್ವಸ್ಥ ಮಂಡಳಿ ಹಾಗೂ ಭಕ್ತಾಭಿಮಾನಿಗಳು ಶಾಲು ಹೊದೆಸಿ ಫಲವಸ್ತು ಕಾಣಿಕೆಗಳನ್ನು ಸಲ್ಲಿಸಿ ಹಾರಾರ್ಪಣೆಗೈದು ಗೌರವಿಸಲಾಯಿತು. ಉಪಸ್ಥಿತ ಭಕ್ತ ಮಂಡಳಿಗೆ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ಧಾರ್ಮಿಕ ಪ್ರವಚನದೊಂದಿಗೆ ಆಶೀರ್ವಚನ ನೀಡಿದರು.


” ಉತ್ತಮ ಜೀವನ ಸಾಗಿಸುವ ನಿಟ್ಟಿನಲ್ಲಿ ಮನುಷ್ಯನಿಗೆ ಮೊತ್ತ ಮೊದಲು ಸತ್ಯದ ಅರಿವು ಉಂಟಾಗುವುದು ಅತ್ಯಗತ್ಯವಾಗಿದೆ. ಮನಸ್ಸಿಗೆ ಮುಸುಕಿದ ಮಾಯೆಯನ್ನು ಸರಿಸದ ಹೊರತು ಜ್ಞಾನ ಮತ್ತು ವಿವೇಕ ಪ್ರಕಟವಾಗುವುದಿಲ್ಲ. ಸತ್ಯದ ಅರಿವೂ ಆಗುವುದಿಲ್ಲ. ಜೀವನದ ಮುಖ್ಯ ಉದ್ದೇಶವೇ ನಾನು ಯಾರೆಂಬುದನ್ನು ತಿಳಿದು ಕೊಳ್ಳುವುದಾಗಿದೆ ” ಎನ್ನುತ್ತಾ ಮಹಾಭಾರತ ರಾಮಾಯಣಗಳಲ್ಲಿ ನೀಡಿದ ಸಿದ್ಧಾಂತಗಳನ್ನು ಉದಾಹರಿಸಿದರು. ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಎಲ್ಲೆಡೆಯ ಭಕ್ತಾದಿಗಳು ಒಂದೆಡೆ ಸೇರುವಂತಹ ಈ ಭವ್ಯ ವಾಸ್ತುವಿನ ಮೂಲ ನಿರ್ಮಾತೃ ದಿ. ಶ್ರೀ ಕೋಡಿಕಲ್ ದಾಮೋದರ್ ನಾಯ್ಕ್ ಕೊಡುಗೆಯನ್ನು ಶ್ರೀಗಳು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಜರಗಲಿರುವ ನಾಶಿಕ್ ನಲ್ಲಿಯ ಪವಿತ್ರ ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಎಲ್ಲರನ್ನೂ ಆಮಂತ್ರಿಸಿದರು.
ಕಾರ್ಯಕ್ರಮದ ಉಸ್ತುವಾರಿಯಲ್ಲಿ ರಮಾನಂದ ಪೂಜಾರಿ ಸಹಕರಿಸಿದರು.

ಸಂದರ್ಭದಲ್ಲಿ ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ಎಮ್.ರೈ , ಮೀರಾ ಡಹಾಣೂ ಬಂಟ್ಸ್ ಸಂಸ್ಥೆಯ ಟ್ರಸ್ಟೀ ಕೆ. ಭುಜಂಗ ಶೆಟ್ಟಿ , ವಿಶ್ವಸ್ಥ ಮಂಡಳಿಯ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ , ಶ್ರೀನಿವಾಸ್ ಕೋಟ್ಯಾನ್ , ಸತ್ಯಾ ಕೋಟ್ಯಾನ್ , ಸದ್ಗುರು ಭಜನಾ ಮಂಡಳಿಯ ಸದಸ್ಯರು , ಭಕ್ತ ವೃಂದದ ಸದಸ್ಯರು , ಬೊಯಿಸರ್ ಪರಿಸರದ ಉದ್ಯಮಿಗಳು ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ ಹಾಗೂ ಸುದ್ದಿ : ಪಿ.ಆರ್
ರವಿಶಂಕರ್. 8483980035



Related posts

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಉಡುಪಿ: ಕರ್ನಾಟಕದ ಮೊಟ್ಟಮೊದಲ ‘ಸಂಪೂರ್ಣ ಸಾಕ್ಷರ’ ಜಿಲ್ಲೆಯಾಗಿ ಉಡುಪಿ

Mumbai News Desk

ಮಧುರಾ ಹರೀಶ್ ಪಾಂಡು ಶೆಟ್ಟಿ ಅವರು ಮಿಸೆಸ್ ವರ್ಲ್ಡ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಮಿಸೆಸ್ ಟ್ಯಾಲೆಂಟೆಡ್ ಮತ್ತು 4 ನೇ ರನ್ನರ್-ಅಪ್ ಯಗಿ ನಾಮನಿರ್ದೇಶನ ಗೊಂಡಿದ್ದಾರೆ.

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.

Mumbai News Desk

ಯುಎಇ ಬಂಟ್ಸ್‌ನಿಂದ ಹನ್ನೊಂದನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Mumbai News Desk

ಉಡುಪಿ : ಪೊಲೀಸರಿಂದ ಯುವತಿಗೆ ಹಲ್ಲೆ ಪ್ರಕರಣ, ಬಿಲ್ಲವ ಸಮುದಾಯದ ಆಕ್ರೋಶ – ಘಟನೆಯ ಹಿನ್ನೆಲೆ ಏನು?

Mumbai News Desk

ಮಂಗಳೂರಿನಲ್ಲಿ ಕುಲಾಲ ಭವನ ಲೋಕಾರ್ಪಣೆ: ಸಮಾಜ ಬಾಂಧವರ ಕನಸು ನನಸು

Mumbai News Desk