ಮುಂಬಯಿ : ಅಂಧೇರಿ ಪೂರ್ವ ಜಿ. ಬಿ. ನಗರ ನಿವಾಸಿ ದಿ. ಸುಂದರ ಸುವರ್ಣ ಅವರ ಧರ್ಮಪತ್ನಿ ರೇವತಿ ಸುಂದರ್ ಸುವರ್ಣ (77) ಅವರು ಜ. 22 ರಂದು ಮುಂಜಾನೆ ಹೃದಯಘಾತದಿಂದಾಗಿ ನಿಧನಹೊಂದಿದರು. ಮೃತರು ತೀಯಾ ಸಮಾಜ ಮುಂಬಯಿಯ ಕ್ರೀಯಾಶೀಲ ಸದಸ್ಯ, ತೀಯಾ ಬೆಳಕು ಮಾಸಿಕದ ಮಾಜಿ ಸಂಪಾದಕ ಶ್ರೀಧರ ಎಸ್. ಸುವರ್ಣ ಸೇರಿ ಇಬ್ಬರು ಪುತ್ರರು, ಒರ್ವ ಪುತ್ರಿ ಹಾಗೂ ಅಪಾರ ಸಂಮಂದಿಕರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ, ಅಧ್ಯಕ್ಷ ಕೃಷ್ಣ ಎನ್. ಉಚ್ಚಿಲ್ ಹಾಗೂ ಸಮಾಜದ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
previous post




