July 22, 2026
Mumbai News Kannada
ಮುಂಬಯಿ

ಬೋರಿವಲಿ ಪೂರ್ವ ನ್ಯಾನ್ಸಿ ಕಾಂಪ್ಲೆಕ್ಸ್: ಶ್ರೀ ಜಗದೀಶ್ವರಿ ಮಂದಿರದಲ್ಲಿ ದೃಢ ಕಲಶಾಭಿಷೇಕ ಸಂಪನ್ನ







ಮುಂಬಯಿ: ಬೋರಿವಲಿ ಪೂರ್ವದ ರಾಷ್ಟ್ರೀಯ ಉದ್ಯಾನದ ಸನಿಹದ ಶ್ರೀಕೃಷ್ಣ ನಗರ, ನ್ಯಾನ್ಸಿ ಕಾಂಪ್ಲೆಕ್ಸ್, ಶೀತಲ್ ರಿಗಾಲಿಯಾದಲ್ಲಿ ಇತ್ತೀಚೆಗೆ ನವೀಕೃತಗೊಂಡು, ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವಗೊಂಡಿರುವ ಶ್ರೀ ಜಗದೀಶ್ವರಿ ಮಂದಿರದಲ್ಲಿ ಏಪ್ರಿಲ್ 8ರಂದು ದೃಢ ಕಲಶಾಭಿಷೇಕ ನೆರವೇರಿತು.

​ಮಂದಿರದ ಮುಖ್ಯಸ್ಥರಾದ ಶೇಖರ್ ಕೋಟ್ಯಾನ್ ಅವರ ಮುಂದಾಳುತ್ವದಲ್ಲಿ ಮತ್ತು ಸಮಿತಿಯ ಸರ್ವ ಸದಸ್ಯರ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ವಿಜಯ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ, ಅಂಧೇರಿಯ ಗುರುಪ್ರಸಾದ್ ಭಟ್ ಮತ್ತು ತಂಡದವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.

ಧಾರ್ಮಿಕ ಕಾರ್ಯಕ್ರಮಗಳ ವಿವರ:

  • ಬೆಳಿಗ್ಗೆ: ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡು, ಪುಣ್ಯಾಹವಾಚನ, ಗಣಹೋಮ, ದೃಢ ಕಲಶಾಭಿಷೇಕ ಪ್ರಧಾನ ಹೋಮಗಳು ನಡೆದವು. ತದನಂತರ ಕಲಶಾಭಿಷೇಕ, ಮಹಾಪೂಜೆ ಹಾಗೂ ಮಂತ್ರಾಕ್ಷತೆಯ ನಂತರ ಅನ್ನಪ್ರಸಾದ ವಿತರಣೆಯಾಯಿತು.
  • ಸಂಜೆ: ಲಲಿತಾ ಸಹಸ್ರನಾಮ ಪಠಣ ಹಾಗೂ ಶ್ರೀ ಹನುಮಾನ್ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಸೇವೆ ಜರುಗಿತು. ನಂತರ ದೇವಿಗೆ ಮಹಾಮಂಗಳಾರತಿ ಮತ್ತು ರಂಗಪೂಜೆ ನೆರವೇರಿತು. ತೀರ್ಥಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು.

ಈ ಸನ್ನಿಧಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಸರದ ತುಳು-ಕನ್ನಡಿಗರೇ ಅಲ್ಲದೆ ಅನ್ಯಭಾಷಿಕ ಭಕ್ತಾದಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಪಿ.ವಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.



Related posts

ಕುಲಾಲ ಸಂಘ ಮುಂಬಯಿ,ಥಾಣ, ಕಸರಾ , ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಹಳದಿ ಕುಂಕುಮ

Mumbai News Desk

ತೀಯಾ ಸಮಾಜ ಮುಂಬಯಿ, ಸತ್ಯನಾರಾಯಣ ಪೂಜೆ, ಅರಸಿನ ಕುಂಕುಮ, ಬೋಳ್ನಾಡು ಕ್ಷೇತ್ರದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಭಾರೀ ಮಳೆ ಮುನ್ಸೂಚನೆ: ಸೋಮವಾರ ಮುಂಬೈ ಮತ್ತು ಪಾಲ್ಘರ್‌ನ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

Mumbai News Desk

ಮುಂಬೈ ಲೋಕಲ್ ರೈಲಿನಲ್ಲಿ ಬಾಗಿಲು ಮುಚ್ಚುವ ವಿವಾದ: ಚಾಕು ಇರಿತಕ್ಕೊಳಗಾಗಿದ್ದ ಯುವಕ ಸಾವು, ಆರೋಪಿ ಬಂಧನ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬೈ: ತುಳು ನಾಟಕ ಸ್ಪರ್ಧೆ ಯಶಸ್ವಿ ಸಂಪನ್ನ:

Mumbai News Desk

ಬಿಲ್ಲವರ ಅಸೋಸಿಯೇಶನ್ ಕಲ್ಯಾಣ್ ಸ್ಥಳೀಯ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಭಕ್ತಿ ವಿಜೃಂಭಣೆಯಿಂದ ಆಚರಣೆ

Mumbai News Desk