ಹೆಜಮಾಡಿ ಮೊಗವೀರ ಮಹಾಸಭಾ ಹೆಜಮಾಡಿ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಶ್ರೀ ಹರೀಶ್ ಕೋಟ್ಯಾನ್ ಹೆಜಮಾಡಿ ಆಯ್ಕೆಯಾಗಿದ್ದಾರೆ.
ಶ್ರೀ ಬಬ್ಬರ್ಯ ದೇವಸ್ಥಾನ ಹೆಜಮಾಡಿ ಇದರ ಸನ್ನಿಧಾನದಲ್ಲಿ ಇತ್ತೀಚೆಗೆ ಸಭಾದ ನಿಕಟಪೂರ್ವ ಅಧ್ಯಕ್ಷರಾದ ಎಚ್.ರವಿ ಕುಂದರ್ ಹೆಜಮಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪಾದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸಂಘಟಕ ಶ್ರೀ ಅನಿಲ್ ಎಚ್.ಕುಂದರ್, ಶ್ರೀ ವಿಜಯ ಎಸ್.ಕುಂದರ್,
ಕಾರ್ಯದರ್ಶಿ ಶ್ರೀ ಸಂದೇಶ್ ಪುತ್ರನ್,ಜತೆ ಕಾರ್ಯದರ್ಶಿ ಪುನೀತ್ ಸುವರ್ಣ,ಕೋಶಾಧಿಕಾರಿ ಶ್ರೀ ಹರೀಶ್ ಮೆಂಡನ್,ಜತೆ ಕೋಶಾಧಿಕಾರಿ ಶ್ರೀ ಶ್ರೇಯಸ್ ಕರ್ಕೇರ, ಗೌ ಸಲಹೆಗಾರರು ಶ್ರೀ ರಮೇಶ್ ಪುತ್ರನ್,
ಸಮಿತಿ ಸದಸ್ಯರಾಗಿ ಎಚ್.ರವಿ ಕುಂದರ್,ಶ್ರೀ ಪಾಂಡುರಂಗ ಕರ್ಕೇರ,ಜಿತೇಂದ್ರ ಕೋಟ್ಯಾನ್,ಶ್ರೀ ಕೇಶವ್ ಸುವರ್ಣ,ಶ್ರೀ ಮೋಹನ್ ಕೋಟ್ಯಾನ್,ಕಿರಣ್ ಸುವರ್ಣ,ಯತೀಶ್ ಮೆಂಡನ್,ದಿವಾಕರ್ ಮೆಂಡನ್ ರವರು ಆಯ್ಕೆಯಾಗಿರುತ್ತಾರೆ.




