July 11, 2026
Mumbai News Kannada
ನಿಧನ ಸುದ್ದಿ

ಜೋಗೇಶ್ವರಿ: ಹೋಟೆಲ್ ಉದ್ಯಮಿ, ಸಂಘಟಕ ನಾರಾಯಣ ಪೂಜಾರಿ ನಿಧನ








​ಮುಂಬಯಿ: ಜೋಗೇಶ್ವರಿ ಪೂರ್ವದ ಸ್ವಪ್ನಪೂರ್ತಿ ನಿವಾಸಿ, ಬಿಲ್ಲವರ ಅಸೋಸಿಯೇಷನ್ ಜೋಗೇಶ್ವರಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು, ಹೋಟೆಲ್ ಉದ್ಯಮಿ, ಸಮಾಜ ಸೇವಕ ಹಾಗೂ ಸಂಘಟಕ ಜಯ ಸಿ. ಸುವರ್ಣರ ಅಭಿಮಾನಿ ಆಗಿದ್ದ ನಾರಾಯಣ ಪೂಜಾರಿಯವರು ಜುಲೈ 10ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
​ಮೃತರು ಮಾತೃಶ್ರೀ, ಪತ್ನಿ, ಇಬ್ಬರು ಮಕ್ಕಳು, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
​ನಾರಾಯಣ ಪೂಜಾರಿಯವರ ನಿಧನಕ್ಕೆ ಸೂರ್ಯಕಾಂತ್ ಜಯ ಸುವರ್ಣ, ಗಂಗಾಧರ್ ಜೆ. ಪೂಜಾರಿ, ಜಯ ಸಿ. ಸುವರ್ಣ ಅಭಿಮಾನಿ ಬಳಗ, ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ.) ಮುಂಬಯಿ ಹಾಗೂ ಮುಂಬಯಿಯ ಬಿಲ್ಲವ ಬಾಂಧವರು ತೀವ್ರ ಸಂತಾಪ ಸೂಚಿಸಿದ್ದಾರೆ.