July 12, 2026
Mumbai News Kannada
ಪ್ರಕಟಣೆ

ಪಲಿಮಾರು ಹೊಸಾಗ್ಮೆಯಲ್ಲಿ ಜುಲೈ 16 ರಿಂದ ‘ಕುಮಾರವ್ಯಾಸ ಭಾರತ’ ಕಥಾ ವಾಚನ ಮತ್ತು ಪ್ರವಚನ ಕಾರ್ಯಕ್ರಮ







ಹೆಜಮಾಡಿಯ ಪಲಿಮಾರು ಹೊಸಾಗ್ಮೆ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದ ಕರ್ಕಾಟಕ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಪರಾಭವ ನಾಮ ಸಂವತ್ಸರದ ಆಷಾಢ ಶುಕ್ಲ ಪಕ್ಷಕ್ಕೆ ಒದಗಿಬರುವ ಜುಲೈ 16, 2026ರ ಗುರುವಾರದಿಂದ ಈ ಪುಣ್ಯ ಕಥಾ ವಾಚನ ಮತ್ತು ಪ್ರವಚನ ಕಾರ್ಯಕ್ರಮವು ಆರಂಭಗೊಳ್ಳಲಿದೆ.
ಈ ವರ್ಷದ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಮಹಾಕಾವ್ಯ ‘ಕುಮಾರವ್ಯಾಸ ಭಾರತ’ದ ಕಥಾ ವಾಚನ ನಡೆಯಲಿದ್ದು, ಪ್ರತಿದಿನ ಸಾಯಂಕಾಲ 4:00 ಗಂಟೆಯಿಂದ 6:00 ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರವಣ ಭಾಗ್ಯ ಸಿಗಲಿದೆ. ಸುರತ್ಕಲ್‌ನ ಪ್ರಸಿದ್ಧ ವಾಚಕರಾದ ಶ್ರೀ ಜಯ ದೇವಾಡಿಗ ಸುರತ್ಕಲ್, ಅವರು ಕಾವ್ಯ ವಾಚನ ಮಾಡಲಿದ್ದಾರೆ. ಇದರೊಂದಿಗೆ ಪಡುಬಿದ್ರಿಯ ಶ್ರೀ ಭಾಸ್ಕರ್ ಕೆ. ಮತ್ತು ಎರ್ಮಾಳಿನ ಶ್ರೀ ಮನೋಹರ್ ಕುಂದರ್ ಅವರು ಕಥೆಯ ಮರ್ಮ ಹಾಗೂ ಜೀವನ ಸಂದೇಶಗಳನ್ನು ಒಳಗೊಂಡ ಪ್ರವಚನವನ್ನು ನೀಡಲಿದ್ದಾರೆ.
1934ರಲ್ಲಿ ಸ್ಥಾಪನೆಗೊಂಡು ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮವನ್ನು ಪಲಿಮಾರು ಮೊಗವೀರ ಸಭಾ (ರಿ.) ಪಲಿಮಾರು, ಪಲಿಮಾರು ಮೊಗವೀರ ಸಭಾ ಮುಂಬಯಿ, ಪಲಿಮಾರು ಮೊಗವೀರ ಮಹಿಳಾ ಸಭಾ ಹಾಗೂ ಪಲಿಮಾರು ಶ್ರೀ ಸೀತಾರಾಮ ಸೇವಾ ಸಮಿತಿಯವರು ಜಂಟಿಯಾಗಿ ಆಯೋಜಿಸಿದ್ದಾರೆ. ಈ ಪುಣ್ಯಪ್ರದ ಕಥಾ ಶ್ರವಣ ಕಾರ್ಯಕ್ರಮದಲ್ಲಿ ಪರಿಸರದ ಸಮಸ್ತ ಭಕ್ತಾಭಿಮಾನಿಗಳು ಪ್ರತಿದಿನ ಸಕಾಲದಲ್ಲಿ ಪಾಲ್ಗೊಂಡು, ಶ್ರೀ ಸೀತಾರಾಮ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.



Related posts

ಹಿಂದೂ ಸಂಗಮ ಆಯೋಜನಾ ಸಮಿತಿ ಮೂಲ್ಕಿ : ಜ. 25ರಂದು “ಭವ್ಯ ಹಿಂದೂ ಸಂಗಮ”

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ, ನೃತ್ಯ ವೈಭವ, ಸನ್ಮಾನ

Mumbai News Desk

ಮದರ್ ಇಂಡಿಯಾದ 19th east ಬಾಂಬೆ ಸ್ಕೌಟ್ ಮಿತ್ರರ ಮತ್ತು ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಫೌಂಡೇಶನ್ ನ ಜಂಟಿ ಆಶ್ರಯದಲ್ಲಿ ನವೆಂಬರ್ 15 ಮತ್ತು 16 ರಂದು ಫಾರ್ಮ್ ರಿಜೆನ್ಸಿಯಲ್ಲಿ 6 ನೇ ವರ್ಷದ ಗುರುವಂದನಾ ಕಾರ್ಯಕ್ರಮ.

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ,ಫೆ. 15ರಂದು, 26ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಮಹಾಪೂಜೆ

Mumbai News Desk

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಜುಲೈ.20ಕ್ಕೆ ಆಟಿಡೊಂಜಿ ದಿನ

Mumbai News Desk