
ವಸಾಯಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ನೈಗಾಂವ್ – ವಿರಾರ್ ಶಾಖೆಯ 2025-2028ರ ಅವಧಿಯ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಜುಲೈ 06ರ ಭಾನುವಾರ ನಡೆಯಿತು. ಮಂಡಳಿಯ ಟ್ರಸ್ಟಿ ಪುರುಷೋತ್ತಮ್ ಎಲ್. ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ವಸಾಯಿ ಪಶ್ಚಿಮದಲ್ಲಿರುವ ವಿಟಿಎಂಎಸ್ (VTMS) ಸಭಾಂಗಣದಲ್ಲಿ ಈ ಪ್ರಕ್ರಿಯೆ ಜರುಗಿತು.
ನೂತನ ಅವಧಿಗೆ ಆಯ್ಕೆಯಾದ ಪದಾಧಿಕಾರಿಗಳ ವಿವರ ಇಂತಿದೆ:
ಮುಖ್ಯ ಸಮಿತಿ:
ಕಾರ್ಯಾಧ್ಯಕ್ಷರು: ಪಿ. ವಿ. ಕಾಂಚನ್
ಉಪಾಧ್ಯಕ್ಷರು: ರೋಶನ್ ವಿ. ಸುವರ್ಣ
ಕಾರ್ಯದರ್ಶಿ: ಶೇಖರ್ ಟಿ. ಕರ್ಕೇರ
ಜೊತೆ ಕಾರ್ಯದರ್ಶಿ: ರಾಜೇಶ್ ಎನ್. ಕೋಟ್ಯಾನ್
ಖಜಾಂಚಿ: ವಿಶ್ವನಾಥ್ ಬಿ. ಬಂಗೇರ
ಸಹ ಖಜಾಂಚಿ: ಸುನಿಲ್ ಎನ್. ಪುತ್ರನ್
ಸಲಹೆಗಾರರು: ಮೋಹನ್ ಜೆ. ಪುತ್ರನ್

ಮಹಿಳಾ ವಿಭಾಗ:
ಕಾರ್ಯಾಧ್ಯಕ್ಷೆ: ಮೋಹಿನಿ ಎಸ್. ಮಲ್ಪೆ
ಉಪಾಧ್ಯಕ್ಷರು: ಶ್ರೀಮತಿ ಯಶೋದಾ ವಿ. ಬಂಗೇರ
ಕಾರ್ಯದರ್ಶಿ: ಯಶವಂತಿ ಸಿ. ಕುಂದರ್
ಸಹ ಕಾರ್ಯದರ್ಶಿ: ಚಂದ್ರ ಜಿ. ಕರ್ಕೇರ
ಖಜಾಂಚಿ: ಪ್ರೇಮಲತಾ ಎಸ್. ನಾಯಕ್
ಸಹ ಖಜಾಂಚಿ: ಮಾಲತಿ ಎ. ಮೊಗವೀರ
ಈ ಸಭೆಯಲ್ಲಿ ‘ಮೊಗವೀರ’ ಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕಲಾಪಗಳನ್ನು ಪ್ರಧಾನ ಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಿರಣ್ ಮೆಂಡನ್ ನಿರ್ವಹಿಸಿದರು. ಶಾಖೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಯಶೋದರ್ ಕೋಟ್ಯಾನ್ ಮತ್ತು ಉಪಾಧ್ಯಕ್ಷರಾದ ರೋಶನ್ ವಿ. ಸುವರ್ಣ ಅವರು ಆಹ್ವಾನಿತರನ್ನು ಗೌರವಿಸಿ, ಅಭಿನಂದಿಸಿದರು.





