ಕಳೆದ ಎಂಟು ದಶಕಗಳಿಗೂ ಹೆಚ್ಚು ಕಾಲದಿಂದ ಮುಂಬಯಿಯಲ್ಲಿ
ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು
ಜರಗಿಸುತ್ತಾ ಕನ್ನಡದ ಪರಿಚಾರಿಕೆಯಲ್ಲಿ ತೊಡಗಿಕೊಂಡಿದ್ದು
ಮುಂಬಯಿ ಕನ್ನಡಿಗರ ಗೌರವಾದರಗಳಿಗೆ ಪಾತ್ರವಾಗಿರುವ ಮಾಟುಂಗಾ [ಪೂರ್ವ]ದ ಮುಂಬಯಿ ಕನ್ನಡ ಸಂಘದ
85ನೇ ವಾರ್ಷಿಕ ಮಹಾಸಭೆಯು ಇದೇ ಬರುವ ಆಗಸ್ಟ್ 29 ರಂದು ಸಂಜೆ ಗಂಟೆ 5-00ಕ್ಕೆ ಜರಗಲಿದೆ. ದಾದರ್ ಪೂರ್ವದ ನಪ್ಪೂ ರೋಡ್ನಲ್ಲಿರುವ 2-ಸಾಯಿ ವಿಸಾವ ಕೋ-ಆಪರೇಟಿವ್ ಸೊಸಾಯಿಟಿಯಲ್ಲಿರುವ ಸಂಘದ
ಸದ್ಯದ ಕಾರ್ಯಾಲಯಲ್ಲಿ ಜರಗುವ ಈ ಮಹಾಸಭೆಯ ಅಧ್ಯಕ್ಷತೆಯನ್ನು
ಸಂಘದ ಅಧ್ಯಕ್ಷರಾದ ಗುರುರಾಜ ಎಸ್.ನಾಯಕ್ ಅವರು ವಹಿಸಲಿದ್ದಾರೆ.
ಈ
ಮಹಾ ಸಭೆಯಲ್ಲಿ ಇತರ ವಿಷಯಗಳ ಜೊತೆಗೆ ಗತ ವರ್ಷದ ವರದಿ ಮತ್ತು ಲೆಕ್ಕಪತ್ರಗಳ ಮಂಡನೆ ಮತ್ತು ಮಂಜೂರು
ಮಾಡುವುದಲ್ಲದೆ 2026-27ರ ಸಲುವಾಗಿ ಲೆಕ್ಕ ಪರಿಶೋಧಕರನ್ನು ನೇಮಿಸಲಾಗುವುದು.
ಈ ಮಹಾಸಭೆಯಲ್ಲಿ ಮುಂಬಯಿ, ಪುಣೆ, ಬೆಂಗಳೂರು ಹಾಗೂ ಇತರ ಕಡೆಗಳಲ್ಲಿ ನೆಲಸಿರುವ ಸಂಘದ ಸದಸ್ಯರು ಅಧಿಕ
ಸಂಖ್ಯೆಲ್ಲಿ ಹಾಜರಿದ್ದು ಸಂಘದ ಮುಂದಿನ ಯೋಜನೆಗಳ ಬಗ್ಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರ
ಮತ್ತು ಗೌರವ ಜೊತೆ ಕಾರ್ಯದರ್ಶಿ ರಾಮಚಂದ್ರ ಭಟ್ ವಿನಂತಿಸಿಕೊಂಡಿದ್ದಾರೆ.
–ಸೋಮನಾಥ
ಎಸ್. ಕರ್ಕೇರ, ಮುಂಬಯಿ




