
ಚಿತ್ರ ಮತ್ತು ವರದಿ : ಪಿ.ಆರ್.ರವಿಶಂಕರ್
ಡಹಾಣೂ : ಮಹಾರಾಷ್ಟ್ರದ ಪಶ್ಚಿಮ ಕರಾವಳಿ ತೀರದ ಹಾಗೂ ಗಡಿಪ್ರದೇಶದಲ್ಲಿನ ಊರಾದ ಡಹಾಣೂವಿನಲ್ಲಿರುವ ಮೂಲತಃ ಉಡುಪಿ ಜಿಲ್ಲೆಯವರಾದ ರಾಜಾಪುರ ಸಾರಸ್ವತರು 1999 ರಲ್ಲಿ ಆರಂಭಿಸಿದ ಶ್ರೀ ಗಣೇಶನ ಮಂಗಲ ಮೂರ್ತಿ ಉತವದ 27 ನೆಯ ವರ್ಷದ ಕಾರ್ಯಕ್ರಮವು ಇದೇ ತಾ.15ರಂದು ಸಂಪನ್ನ ಗೊಂಡಿತು.
ಸ್ಥಳೀಯ ದಶಶ್ರೀಮಳಿ ವಣಿಕ ಸಮಾಜದ ಸಭಾಂಗಣದಲ್ಲಿ ಜರಗಿದ 27 ನೆಯ ವರ್ಷದ ಮಂಗಲಮೂರ್ತಿ ಮಹೋತ್ಸವದ ಎರಡು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ತುಳು ಕನ್ನಡಿಗರ ಜೊತೆಗೆ ಮುಂಬೈ , ಗುಜರಾತ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಸೇವಾಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರತಿಷ್ಟಾಪನೆ , ಗಣಹೋಮ , ರಂಗಪೂಜೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ವಸಂತ ಭಟ್ ನೆರವೇರಿಸಿದರು.
ಎರಡನೆಯ ದಿನದ ಉತ್ತರ ಪೂಜೆಯ ಬಳಿಕ ಡಹಾಣೂವಿನ ರಾಜಬೀದಿಯಲ್ಲಿ ಶ್ರೀ ಗಣೇಶನ ಪಲ್ಲಕ್ಕಿಯ ಶೋಭಾಯಾತ್ರೆಯು ಜರಗಿದ್ದು ಸ್ಥಳೀಯ ಕಂಕ್ರಾಡಿ ರೈಲ್ವೇ ಸೇತುವೆ ಬಳಿಯ ನಾಲೆಯಲ್ಲಿ ಗಣೇಶ ಮೂರ್ತಿಯನ್ನು ವಿದ್ಯುಕ್ತವಾಗಿ ವಿಸರ್ಜಿಸಲಾಯಿತು.
ಚಿತ್ರ ವರದಿ ಪಿ.ಆರ್.ರವಿಶಂಕರ್
8493980035




