28.4 C
Mumbai
March 7, 2026
Mumbai News Kannada
ಮುಂಬಯಿ

ವರ್ಲಿ   ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಇದರ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಭ್ರಮದೊಂದಿಗೆ ಆಚರಣೆ





 ಚಿತ್ರ ವರದಿ : ದಿನೇಶ್ ಕುಲಾಲ್ .

ಮುಂಬಯಿ :ವರ್ಲಿ ಮಧುಸೂಧನ ಮಿಲ್ ಕಾಂಪೋಂಡ್ ಪಡುಬಿದ್ರೆ, ಬೆಂಗ್ರೆ ರಮೇಶ ಗುರುಸ್ವಾಮಿ ಯವರು  ಇಲ್ಲಿ ಸ್ಥಾಪಿಸಿದ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್  ನ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಮಧುಸೂಧನ ಮಿಲ್ ಕಾಂಪೋಂಡ್, (ಸೆಂಚುರಿ ಮಿಲ್ ಸಮೀಪ) , ವರ್ಲಿ ಇಲ್ಲಿ ರವಿವಾರ, ಡಿ. 24 ರಂದು ಬೆಳಿಗ್ಗೆ   ರಾತ್ರಿ 11 ರ ತನಕ ನಡೆಯಿತು.

ಬೆಳಿಗ್ಗೆ ಶರಣು ಘೋಷ,  ಗಣಹೋಮ, ಬೆಳಿಗ್ಗೆ  ಅಪ್ಪಾಜಿ ಬೀಡು  ಮಹಿಳಾ ಸದಸ್ಯರಿಂದ ಭಜನೆ,  ಆ ಬಳಿಕ ಶ್ರೀ ರಮೇಶ್ ಗುರುಸ್ವಾಮಿಯವರು ಮಹಾಮಂಗಳಾರತಿಯನ್ನು ನಡೆಸಿದರು. ಮುದ್ರಾಡಿ ಉದಯ ಶೆಟ್ಟಿ ಸ್ವಾಮಿ .   ಪಡುಬಿದ್ರೆ, ಬೆಂಗ್ರೆ  ಅರುಣ್ ಗುರುಸ್ವಾಮಿ . ಅಶೋಕ್ ಗುರುಸ್ವಾಮಿ ಸಹಕರಿಸಿದರು ಆ ಬಳಿಕ ಅನ್ನ ಪ್ರಸಾದ ನಡೆಯಿತು. 

ಮಧ್ಯಾಹ್ನ  ಭಕ್ತಿ ಗಾನ ಸುಧೆ, ಶಿಬರೂರು ಸುರೇಶ್ ಎಲ್ ಶೆಟ್ಟಿ ಮಣಿಕಂಠ ಭಕ್ತವೃಂದ, ಪನ್ವೆಲ್ ಇವರಿಂದ, ಮಧ್ಯಾಹ್ನ . ಸಂಜೆ ಗಂಟೆ 6 ರಿಂದ ಶ್ರೀ  ಅಯ್ಯಪ್ಪ ಸ್ವಾಮಿ ದೀಪೋತ್ಸವ (1118 ತುಪ್ಪದ ದೀಪಗಳಿಂದ ಭವ್ಯ ಮಂಟಪವನ್ನು ಅಲಂಕರಿಸಿ), ರಾತ್ರಿ ಭಕ್ತಿ ರಸಮಂಜರಿ, ಬ್ರಾಮರಿ ಕಲಾ ತಂಡ ಕುಡ್ಲ ಇವರಿಂದ ನಡೆಯಿತು.

    ಈ ಸಂದರ್ಭದಲ್ಲಿ ರೇರೋಡ್  ಅಯ್ಯಪ್ಪ ಸ್ವಾಮಿ ಭಕ್ತವೃಂದ ದ ಸತೀಶ್ ಗುರುಸ್ವಾಮಿ  ಶಿಷ್ಯ ವೃಂದದವರು 18ನೇ ಶಬರಿಮಲೆ ಯಾತ್ರೆ ಯನ್ನು ಮಾಡುತ್ತಿರುವ ಅವರನ್ನು ವಿಶೇಷವಾಗಿ ಪೂಜೆಯ ಪ್ರಸಾದ ನೀಡಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

 ಪೂಜಾ ಕಾರ್ಯಗಳು ವಿಜ್ರಮ್ಮನೆಯಿಂದ ನಡೆಯಲು ಶ್ರೀ ಅಪ್ಪಾಜಿ ಬೀಡು ಪೌಂಡೇಶನ್ ನ ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿ  ,   ಅಯ್ಯಪ್ಪ ಸ್ವಾಮಿ ಭಕ್ತವೃಂದ ರೇರೋಡ್  ನ ಸತೀಶ್ ಗುರುಸ್ವಾಮಿ ಮತ್ತು ಶಿಷ್ಯರು.. ಅಪ್ಪಾಜಿ ಬೀಡು ಫೌಂಡೇಶನ್ ನ ಟ್ರಷ್ಟಿಗಳಾದ  ಶಾಂಭವಿ ಆರ್. ಶೆಟ್ಟಿ, ಸುರೇಶ್ ಎಸ್. ಶೆಟ್ಟಿ ಕೇದಗೆ,ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್. ಶೆಟ್ಟಿ, ಸಂತೋಷ್ ವಿ ಶೆಟ್ಟಿ

ಬಿ. ದಿನೇಶ್ ಜಿ. ಕುಲಾಲ್, ಪುಷ್ಪರಾಜ್ ಎಸ್. ಶೆಟ್ಟಿ, , ಮೊಹನ್ ಟಿ. ಚೌಟ,  ,  ,   ಗೌ. ಕೋಶಾಧಿಕಾರಿ, ಪ್ರಸಾದ್ ಶೆಟ್ಟಿ  ಅರುವ,  , ಉಪಾಧ್ಯಕ್ಷ ಉದಯ್ ಶೆಟ್ಟಿ, ಜೊತೆ ಕಾರ್ಯದರ್ಶಿ ವಿಜಯ್ ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸತ್ಯನಾರಾಯಣ ಕುಚನ್, ಸಲಹೆಗಾರರಾದ ಅರುಣ್ ಆಳ್ವ ಕಾಂತಡಿಗುತ್ತು, ಭೋಜ ಎಸ್ ಶೆಟ್ಟಿ ಕೇದಗೆ, ಅರುಣ್ ಶೆಟ್ಟಿ, ಪಡಿ ಪೂಜಾ ಸಮಿತಿಯ ಕಾರ್ಯದಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್, ಶೇಖರ ಶೆಟ್ಟಿ ವರ್ಲಿ,   ಸಮಿತಿಯ ಸದಸ್ಯರಾದ   ಅರವಿಂದ್ ಶೆಟ್ಟಿ, ರಾಜೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಗಣೇಶ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ, ಪ್ರಕಾಶ್ ಜಾದವ್, ಸತೀಶ್ ಶೆಟ್ಟಿ, ಗಣೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ,  ಸಂತೋಶ್ ನಾಯಕ್, ಶ್ರೀಕಾಂತ್ ಶೆಟ್ಟಿ, ಚಂದ್ರಕಾಂತ್ ಭಂಡಾರಿ, ದಿಲೀಪ್ ಮೊಗವೀರ, ಅಜಯ್ ಶೆಟ್ಟಿ, ಸಂತೋಷ್ ಸಾಲ್ಯಾನ್, ಹರೀಶ್ ಶೆಟ್ಟಿ, ಸತೀಷ್ ಪೂಜಾರಿ, ಪಾರ್ಥಸಾರತಿ ಆರ್ ಶೆಟ್ಟಿ,  ಜಯಕರ್ ಶೆಟ್ಟಿ, ಸಚಿನ್ ಶೆಟ್ಟಿ ಕರ್ನಿರೆ .ವಿಠ್ಠಲ್ ಮೂಲ್ಯ , ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ  ಕಾರ್ಯಾಧ್ಯಕ್ಷೆ  ಕವಿತಾ ಜಿ. ಶೆಟ್ಟಿ, ಕಾರ್ಯದರ್ಶಿ  ರೋಹಿಣಿ ಎಸ್ ಪೂಜಾರಿ, ಕೋಶಾಧಿಕಾರಿ ಶೋಭಾ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಶೆ ದಿವ್ಯ ಪಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜಾತ ಎನ್. ಪುತ್ರನ್, ಜೊತೆ ಕೋಶಾಧಿಕಾರಿ  ನಿರ್ಮಲ ಕೆ. ಶೆಟ್ಟಿ, ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ವಿಜಯಶ್ರೀ ಎಸ್ ಶೆಟ್ಟಿ, ರಮ್ಯ ಎಸ್. ಶೆಟ್ಟಿ, ರಾಣಿ ಆರ್. ಶೆಟ್ಟಿ, ರಾಗಿಣಿ ಆರ್. ಶೆಟ್ಟಿ, ಸುಮಿತ್ರ ಪಿ. ಶೆಟ್ಟಿ, ನಿಮಾ ಆರ್ ಶೆಟ್ಟಿ, ಸಂಗೀತ ಪಿ. ಶೆಟ್ಟಿ, ಶರ್ಮಿಳಾ ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ವೀಣಾ ಎಂ ಹೆಗ್ಡೆ, ಶೈಲ ಎಲ್ ಶೆಟ್ಟಿ, ಯಶಸ್ವಿ ಆರ್ ಶೆಟ್ಟಿ, ಸುಪ್ರಿತ ಎ. ಶೆಟ್ಟಿ, ಸಲಹೆಗಾರಗಾದ ಉಶಾ ಬಿ. ಶೆಟ್ಟಿ, ಯಶೋಧಾ ಎಸ್. ಶೆಟ್ಟಿ, ವಿನೋದಾ ಜೆ. ಶೆಟ್, ಪ್ರಮೀಳಾ ಜೆ. ಶೆಟ್ಟಿ ಹಾಗೂ ಅಪ್ಪಾಜಿ ಬೀಡು ಪೌಂಡೇಶನಿನ ಎಲ್ಲಾ ಸದಸ್ಯರುಗಳು ಆಕರಿಸಿದರು.



Related posts

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk

ಡೊಂಬಿವಲಿಯಲ್ಲಿ ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ ಸಂಭ್ರಮ: ಸಾಹಿತಿಗಳಾದ ಪ್ರಜ್ಞಾ ಮತ್ತಿಹಳ್ಳಿ ಹಾಗೂ ತೇಜಾವತಿ ಎಚ್.ಡಿ ಅವರಿಗೆ ಪ್ರತಿಷ್ಠಿತ ಸ್ಮಾರಕ ಪ್ರಶಸ್ತಿ ಪ್ರದಾನ

Mumbai News Desk

ಶ್ರೀ ದುರ್ಗಾಪರಮೇಶ್ವರಿ-ಶನೀಶ್ವರ ದೇವಸ್ಥಾನ, ದಹಿಸರ್ (ರಾವಲ್‌ಪಾಡ)ದಲ್ಲಿ ನವರಾತ್ರಿ ಮಹೋತ್ಸವ ಸಂಪನ್ನ

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ,ಇದರ   49ನೇ ವಾರ್ಷಿಕ ಶನಿಪೂಜೆ

Mumbai News Desk

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ) ಪುನರ್ ನಿರ್ಮಾಣ ಮನವಿಪತ್ರ ಬಿಡುಗಡೆ.

Mumbai News Desk

ಮುಂಬೈ : ನವೆಂಬರ್ 14–15 ರಂದು ಪ್ರಮುಖ ನೀರಿನ ಪೈಪ್‌ಲೈನ್ ನಿರ್ವಹಣೆ; ಹಲವು ಪ್ರದೇಶಗಳಲ್ಲಿ 22 ಗಂಟೆಗಳ ಕಾಲ ನೀರು ಸರಬರಾಜು ಕಡಿತ

Mumbai News Desk