30.5 C
Mumbai
June 8, 2026
Mumbai News Kannada
ಸುದ್ದಿ

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ 79 ನೇ ವಾರ್ಷಿಕ ಮಹಾ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ:






ಹರೀಶ್ ಜಿ.ಅಮೀನ್ ಗೌರವ ಅಧ್ಯಕ್ಶರಾಗಿ ಹಾಗೂ ರವಿ ಎಲ್.ಬಂಗೇರ ಅಧ್ಯಕ್ಶರಾಗಿ ಪುನರ್ ಆಯ್ಕೆ


ಮುಂಬಯಿ: ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ 79 ನೇ ವಾರ್ಷಿಕ ಮಹಾ ಸಭೆಯು ಅ.2 ರ0ದು ಭಾನುವಾರ ಬೆಳಿಗ್ಗೆ 10.30 ಗ0ಟೆಗೆ ಸರಿಯಾಗಿ ಮ೦ದಿರದ ವಠಾರದಲ್ಲಿ ಅಧ್ಯಕ್ಷರಾದ ರವಿ ಎಲ್.
ಬಂಗೇರ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ದೇವರ ಪ್ರಾರ್ಥನೆಯ ನಂತರ ವರದಿ ವರ್ಷದಲ್ಲಿ ಅಗಲಿದ ಸದಸ್ಸ್ಯರ ಆತ್ಮಕ್ಕೆ ಚಿರ ಶಾಂತಿ ಕೋರಿ 2 ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರುಮಕ್ಕನುಸಾರವಾಗಿ ಗತ ಸಭೆಯ ವರದಿಯನ್ನು ಓದಿ ಮಂಜೂರು ಮಾಡಲಾಯಿತು ಹಾಗೂ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿ ಮ೦ಜೂರು ಮಾಡಲಾಯಿತು.

ಮುಂದಿನ ಒಂದು ವರ್ಷದ ಅವಧಿಗೆ ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ಆಕಾಶ್ ಸುವರ್ಣರವರನ್ನು ಹಾಗೂ ಬಾಹ್ಯಲೆಕ್ಕ ಪರಿಶೋಧಕರನ್ನಾಗಿ
ಮೆ. ಅನಿಲ್ ಮಹಾಡಿಕ್ ಮತ್ತು ಅಸೋಸಿಯೇಟ್ಸ್ ಅವರನ್ನು ನೇಮಕ ಮಾಡಲಾಯಿತು.


ಅದೇ ರೀತಿ 2023-2026 ಅವಧಿಗೆ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಮಾಡಲಾಯಿತು.
ಸುಮಾರು 23 ವರ್ಷಗಳಿಂದ ಗೌ.ಅಧ್ಯಕ್ಷರಾಗಿ ಸೇವೆ ಗೈಯ್ಯುತ್ತಿರುವ ಶ್ರೀ.ಹರೀಶ್ ಜಿ.ಅಮೀನ್ ರವರನ್ನು ಪುನರಾಯಿಕೆ ಮಾಡಲಾಯಿತು ಹಾಗೆಯೇ ರವಿ ಎಲ್.ಬಂಗೇರವರು ಅಧ್ಯಕ್ಷರಾಗಿ, ಶರತ್ ಜಿ.ಪೂಜಾರಿ ಪಡುಬೆಳ್ಳೆಯವರು ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯಿಕೆ ಗೊಂಡರು.
ಉಪಾಧ್ಯಕ್ಷರಾಗಿ ವಿಶ್ವನಾಥ್ ಬ೦ಡಾರಿ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಆರ್.ಸುವರ್ಣ, ಗೌ.ಕೊಶಾಧಿಕಾರಿಯಾಗಿ ಪ್ರಸಾದ್ ಕರ್ಕೇರ, ಜೊತೆ ಕೋಶಾದಿಕಾರಿಯಾಗಿ ಪ್ರತೀಕ್ ಅಚಾರ್ಯ ಆಯ್ಕೆಯಾದರು.
ಧಾರ್ಮಿಕ ಸಲಹೆಗಾರರಾಗಿ ಜಗದೀಶ್ ಜೆ.ಕೋಟಿಯಾನ್ ರವರನ್ನು ಮರು ಆಯ್ಕೆ ಮಾಡಲಾಯಿತು ಹಾಗೂ ಕಾನೂನು ಸಲಹೆಗಾರರನ್ನಾಗಿ ನ್ಯಾಯವಾದಿ ಸುದೇಶ್ ಪೂಜಾರಿಯವರನ್ನು ಆಯ್ಕೆಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಸ್ಯರಾಗಿ ಬಿ.ಬಿ. ಕೋಟಿಯಾನ್, ಸದಾನ0ದ ಸುವರ್ಣ, ವಿಶ್ಬನಾಥ್ ಕೋಟಿಯಾನ್, ಸತೀಶ್ ಏನ್.ಕೋಟಿಯಾನ್, ವಾಸು ಸಾಲಿಯಾನ್,ಭೋಜ ಎಸ್.ಪೂಜಾರಿ, ಹರೀಶ್ ಶಾಂತಿ ಹೆಜ್ಮಾಡಿ, ಸುರೇಶ್ ಕೋಟಿಯಾನ್, ಅನುಸೂಯ ಕೆಲ್ಲಪುತ್ತಿಗೆ ಮತ್ತು ವಸಂತಿ ಕೋಟಿಯಾನ್ ರವರನ್ನು ಆಯ್ಕೆ ಮಾಡಲಾಯಿತು.


ಆಮ0ತ್ರಿತ ಸದಸ್ಸ್ಯರಾಗಿ
ಮೋಹನ್ ಡಿ. ಪೂಜಾರಿ,ಜನಾರ್ಧನ್ ಶೆಟ್ಟಿ, ತಾರಾ ಮೆಂಡನ್, ಸುಭಾಶ್ ಪೂಜಾರಿ, ತಾರನಾಥ್ ಶೆಟ್ಟಿ, ಉದಯ ಕೋಟಿಯಾನ್,
ನಾರಾಯಣ್ ಪೂಜಾರಿ, ಗಣೇಶ್ ಪೂಜಾರಿ,
ಸುಭಾಶ್ ಪೂಜಾರಿ, ನವೀನ್ ಬಂಗೇರ, ಶ್ರೀಧರ್ ಪೂಜಾರಿ, ಶಂಕರ್ ಪೂಜಾರಿ, ಉದಯ ಎಲ್. ಪೂಜಾರಿ, ರವಿ ಪೂಜಾರಿ, ಅಶೋಕ್ ಪೂಜಾರಿ, ಸತೀಶ್ ಪೂಜಾರಿ, ಚ0ದ್ರಶೇಖರ್ ಅಮೀನ್, ಸುರೇಶ ಎಂ.ಪೂಜಾರಿ, ಪ್ರಶಾ0ತ್ ಕರ್ಕೇರ, ಸದಾನ0ದ್ ಪೂಜಾರಿ, ಪ್ರವೀಣ್ ಪೂಜಾರಿ, ದಿನೇಶ್ ಪೂಜಾರಿ, ಉಮೇಶ್ ಪೂಜಾರಿ ಮತ್ತು ಸೂರಜ್ ಬೆಲ್ಚಡ ಆಯ್ಕೆಯಾದರು.


ಮಹಾ ಸಭೆಯಲ್ಲಿ 79ನೇ ವಾರ್ಷಿಕ ಮಹಾ ಪೂಜೆಯಯನ್ನು ದಿನಾಂಕ 16.12.2023 ರ0ದು ಜರಗಿಸುವದಾಗಿ ನಿರ್ಧರಿಸಲಾಯಿತು.
ಸಭೆಯಲ್ಲಿ ಸದಸ್ಸ್ಯರ ಪರವಾಗಿ ಬಿ.ಬಿ.ಕೋಟಿಯಾನ್, ಸದಾನ0ದ ಸುವರ್ಣ, ಜೆ.ಜೆ.ಕೋಟಿಯನ್, ವಿಶ್ವನಾಥ್ ಕೋಟಿಯಾನ್, ಸತೀಶ್ ಕೋಟಿಯಾನ್, ವಿಶ್ವನಾಥ್ ಭ೦ಡಾರಿ, ರಾಘ ಅಮೀನ್, ಹರೀಶ್ ಶಾ0ತಿ, ವಾಸು ಸಾಲಿಯಾನ್, ಭೋಜ ಪೂಜಾರಿ, ಸುದೇಶ್ ಪೂಜಾರಿ ಮು0ತಾದವರು
ಸ೦ದರ್ಭೋಚಿತವಾಗಿ ಮಾತನಾಡಿದರು ಹಾಗೂ
ಉತ್ತಮ ಸಲಹೆಗಳನ್ನು ನೀಡಿದರು.


ಅಧ್ಯಕ್ಷರಾದ ರವಿ ಎಲ್.ಬ೦ಗೇರರವರು ಮಾತನಾಡುತ್ತಾ ಮ೦ದಿರದ ಪ್ರತಿಯೊಂದು ಚಟುವಟಿಕೆಗಳಲ್ಲಿ ಎಲ್ಲಾ ಸದಸ್ಸ್ಯರು ಶ್ರದ್ದಾ ಭಕ್ತಿಯಿ0ದ ಸೇವೆ ಸಲ್ಲಿಸುತ್ತಿದ್ದಾರೆ , ತಾನೂ ಕೂಡ ಮಂದಿರದ ಅಭಿವ್ರದ್ದಿಗಾಗಿ ಶ್ರದ್ದಾ ಭಕ್ತಿಯೊ೦ದಿಗೆ ಸದಾ ದುಡಿಯುವೆನು ಎಂಬ ಅಶ್ವಾಸನೆ ಇತ್ತರು.
ಪ್ರಧಾನ ಕಾರ್ಯದರ್ಶಿ ಶರತ್ ಜಿ.ಪೂಜಾರಿಯವರ ಧನ್ಯಾವಾದಗಳೊ0ದಿಗೆ ಸಭೆಯು ಮುಕ್ತಾಯವಾಯಿತು.



Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (01/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಶಿರ್ಡಿ ಶ್ರೀ ಸಾಯಿಬಾಬಾ ಸಾನಿಧ್ಯದಲ್ಲಿ ಕಲಾ ಸೌರಭದ ವೈವಿಧ್ಯಮಯ ಬಹುಭಾಷಾ ಸಂಗೀತ ನೃತ್ಯ ಕಲೋತ್ಸವ

Mumbai News Desk

ಭಾರತದ 15ನೇ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಆಯ್ಕೆ

Mumbai News Desk

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಆರೋಗ್ಯ ಇಲಾಖೆಯಿಂದ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಕರ್ನಿರೆ ಫೌಂಡೇಷನ್ ವತಿಯಿಂದ 27ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ,

Mumbai News Desk