28.1 C
Mumbai
July 21, 2026
Mumbai News Kannada
ಮುಂಬಯಿ

ಮೈಸೂರು ಅಸೋಸಿಯೇಷನಲ್ಲಿ ಶ್ರೀರಂಗ ನಾಟಕೋತ್ಸವ  ಸಮರೋಪ







ಮುಂಬಯಿ , ಶ್ರೀರಂಗ ನಾಟಕೋತ್ಸವದ ಕೊನೆಯ ದಿನ ಪೆ 19 ರಂದು ಪ್ರದರ್ಶಿಸಲ್ಪಟ್ಟ ನಾಟಕ: ‘ಸ್ವಾತಂತ್ರ ಸಮರ ಕರುನಾಡು ಅಮರ’.
ಮಾಲೂರಿನಲ್ಲಿ ಆರಂಭವಾಗಿ ಬೆಂಗಳೂರಿನಲ್ಲಿ ನೆಲೆ ನಿಂತು ಕರ್ನಾಟಕದದಾದ್ಯಂತ ಪಸರಿಸಿ ದೇಶದಲ್ಲೆಡೆ ಹಬ್ಬುತ್ತಿರುವ ತಂಡ ‘ರಂಗ ವಿಜಯ’. ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತನ್ನನ್ನು ತಾನು ಸದಾ ನಿರೂಪಿಸಿಕೊಂಡಿರುವ ಈ ತಂಡ ‘ರಂಗಭೂಮಿ ನನ್ನುಸಿರು’ ಎಂಬ ಧ್ಯೇಯದೊಂದಿಗೆ ಕಾರ್ಯೋನ್ಮುಖವಾಗಿದೆ.
ಈ ನಾಟಕವನ್ನು ಖ್ಯಾತ ಚಿತ್ರ ಕಲಾವಿದರು, ಶಿಕ್ಷಕರು ಮತ್ತು ಗಾಯಕರು ಆದಂತ ಡಾ. ಟಿ ಲಕ್ಷ್ಮೀನಾರಾಯಣ ಅವರು ಈ ನಾಟಕವನ್ನು ರಚಿಸಿ, ಸಂಗೀತ ನಿರ್ದೇಶನ ಮಾಡಿ ಸ್ವತಃ ತಾವೇ ಹಾಡಿದ್ದಾರೆ.  ಹಾಗೆಯೇ ತನ್ನ 7ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪಾದರ್ಪಣೆ ಮಾಡಿ ಸಿಜಿಕೆ ಅವರ ಗರಡಿಯಲ್ಲಿ ಪಳಗಿದ ಶ್ರೀ ಮಾಲೂರು ವಿಜಿ ಅವರು ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ.
ಈ ನಾಟಕವು ಸುಮಾರು 30ಕ್ಕೂ ಹೆಚ್ಚು ನಟರನ್ನು ಒಳಗೊಂಡಂತ ಪ್ರಯೋಗ ಎಂದು ಹೇಳುವಲ್ಲಿ ತನ್ನ ವಿಶೇಷತೆಯನ್ನು ಸಾರಿಕೊಳ್ಳುತ್ತದೆ. ರಾಣಿ ಅಬ್ಬಕ್ಕನಂತ ವೀರ ರಾಣಿಯ ಯಶೋಗಾಥೆ ಪೋರ್ಚುಗೀಸರ ವಿರುದ್ಧ ಹೋರಾಡಿದಂತ ಕೆಚ್ಚೆದೆಯ ಕಥೆ ಹೇಳುವ ಮೂಲಕ  ಈ ನಾಟಕ ಆರಂಭವಾಗುತ್ತದೆ.
ಕರ್ನಾಟಕದಲ್ಲಿ ಮನೆ ಮಾತಾಗಿರುವಂತ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರಂಥ ವಿರೋಚಿತ ಸಂದರ್ಭದಲ್ಲಿ ಈ ನಾಟಕದಲ್ಲಿ ಕಟ್ಟಿಕೊಡಲಾಗಿದೆ. ಅಂತೆಯೇ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳಾದ ಉಪ್ಪಿನ ಸತ್ಯಾಗ್ರಹ, ಶಿವಪುರದ ದ್ವಜ ಸತ್ಯಾಗ್ರಹ, ಈಸೂರು ದಂಗೆ,  ವಿದುರಾಶ್ವತದ ಮಾರಣಹೋಮ … ಇಂತಹ ಚರಿತ್ರೆ ಪುಟಗಳಲ್ಲಿ ಬರೆಯಬಲ್ಲಂತ ಸಂದರ್ಭಗಳನ್ನ ಈ ನಾಟಕದಲ್ಲಿ ಕಟ್ಟಿಕೊಟ್ಟು ಅದಕ್ಕಾಗಿ ಬಲಿದಾನ ಮಾಡಿದಂತ ಸರ್ವಸ್ವವನ್ನು ಕಳೆದುಕೊಂಡಂತಹ ಸ್ವಾತಂತ್ರ್ಯ ಯೋಧರ ಸ್ಮರಣೆಯನ್ನು ಮಾಡುವಂತಹ ಪ್ರಯತ್ನದಲ್ಲಿ ಒಂದೊಂದು ದೃಶ್ಯವನ್ನು ಮನದಟ್ಟಾಗುವಂತೆ ಮೂಡಿಸಲಾಗಿದೆ. ಸ್ವಾತಂತ್ರ್ಯಾನಂತರದ ನಾಲ್ಕು ಸಿಂಹಗಳ ತತ್ವಗಳನ್ನು ದೇಶದ ಪ್ರಜೆಗಳಿಗೆ ಅವು ಸಾರಬಹುದಾದ ಸಂದೇಶಗಳನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ

 BMM_8687.JPG



Related posts

ಭಾರತ್ ಬ್ಯಾಂಕ್ ಭೊಯಿಸರ್ ಶಾಖೆಯ 10ನೇ ವಾರ್ಷಿಕ ದಿನಾಚರಣೆ

Mumbai News Desk

ಮೊಗವೀರ ಬ್ಯಾಂಕಿನ ಆಡಳಿತ ಮಂಡಳಿ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಭೇಟಿ

Mumbai News Desk

ಎಸ್ ಎಸ್ ಸಿ ಯಲ್ಲಿ ಅದಿತಿ ಆರ್ ಶೆಟ್ಟಿ ಯವರಿಗೆ ಶೇಕಡಾ 96.20 ಅಂಕ

Mumbai News Desk

ಬಂಟರ ಸಂಘ ಡೊಂಬಿವಲಿ ವತಿಯಿಂದ ನವರಾತ್ರಿ ಉತ್ಸವಕ್ಕೆ ಸಡಗರದ ‘ಹೊರೆ ಕಾಣಿಕೆ’ ಸಮರ್ಪಣೆ

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ಮೀರಾಭಾಯಂದರ್ ಹೋಟೇಲ್ಸ್ ಅಸೋಸಿಯೇಷನಿನ ವಿಶೇಷ ಸರ್ವ ಸಾಮಾನ್ಯ ಸಭೆ, ಸನ್ಮಾನ.

Mumbai News Desk