33 C
Mumbai
May 13, 2026
Mumbai News Kannada
ಮುಂಬಯಿ

ಮೈಸೂರು ಅಸೋಸಿಯೇಷನಲ್ಲಿ ಶ್ರೀರಂಗ ನಾಟಕೋತ್ಸವ  ಸಮರೋಪ





ಮುಂಬಯಿ , ಶ್ರೀರಂಗ ನಾಟಕೋತ್ಸವದ ಕೊನೆಯ ದಿನ ಪೆ 19 ರಂದು ಪ್ರದರ್ಶಿಸಲ್ಪಟ್ಟ ನಾಟಕ: ‘ಸ್ವಾತಂತ್ರ ಸಮರ ಕರುನಾಡು ಅಮರ’.
ಮಾಲೂರಿನಲ್ಲಿ ಆರಂಭವಾಗಿ ಬೆಂಗಳೂರಿನಲ್ಲಿ ನೆಲೆ ನಿಂತು ಕರ್ನಾಟಕದದಾದ್ಯಂತ ಪಸರಿಸಿ ದೇಶದಲ್ಲೆಡೆ ಹಬ್ಬುತ್ತಿರುವ ತಂಡ ‘ರಂಗ ವಿಜಯ’. ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತನ್ನನ್ನು ತಾನು ಸದಾ ನಿರೂಪಿಸಿಕೊಂಡಿರುವ ಈ ತಂಡ ‘ರಂಗಭೂಮಿ ನನ್ನುಸಿರು’ ಎಂಬ ಧ್ಯೇಯದೊಂದಿಗೆ ಕಾರ್ಯೋನ್ಮುಖವಾಗಿದೆ.
ಈ ನಾಟಕವನ್ನು ಖ್ಯಾತ ಚಿತ್ರ ಕಲಾವಿದರು, ಶಿಕ್ಷಕರು ಮತ್ತು ಗಾಯಕರು ಆದಂತ ಡಾ. ಟಿ ಲಕ್ಷ್ಮೀನಾರಾಯಣ ಅವರು ಈ ನಾಟಕವನ್ನು ರಚಿಸಿ, ಸಂಗೀತ ನಿರ್ದೇಶನ ಮಾಡಿ ಸ್ವತಃ ತಾವೇ ಹಾಡಿದ್ದಾರೆ.  ಹಾಗೆಯೇ ತನ್ನ 7ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪಾದರ್ಪಣೆ ಮಾಡಿ ಸಿಜಿಕೆ ಅವರ ಗರಡಿಯಲ್ಲಿ ಪಳಗಿದ ಶ್ರೀ ಮಾಲೂರು ವಿಜಿ ಅವರು ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ.
ಈ ನಾಟಕವು ಸುಮಾರು 30ಕ್ಕೂ ಹೆಚ್ಚು ನಟರನ್ನು ಒಳಗೊಂಡಂತ ಪ್ರಯೋಗ ಎಂದು ಹೇಳುವಲ್ಲಿ ತನ್ನ ವಿಶೇಷತೆಯನ್ನು ಸಾರಿಕೊಳ್ಳುತ್ತದೆ. ರಾಣಿ ಅಬ್ಬಕ್ಕನಂತ ವೀರ ರಾಣಿಯ ಯಶೋಗಾಥೆ ಪೋರ್ಚುಗೀಸರ ವಿರುದ್ಧ ಹೋರಾಡಿದಂತ ಕೆಚ್ಚೆದೆಯ ಕಥೆ ಹೇಳುವ ಮೂಲಕ  ಈ ನಾಟಕ ಆರಂಭವಾಗುತ್ತದೆ.
ಕರ್ನಾಟಕದಲ್ಲಿ ಮನೆ ಮಾತಾಗಿರುವಂತ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರಂಥ ವಿರೋಚಿತ ಸಂದರ್ಭದಲ್ಲಿ ಈ ನಾಟಕದಲ್ಲಿ ಕಟ್ಟಿಕೊಡಲಾಗಿದೆ. ಅಂತೆಯೇ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳಾದ ಉಪ್ಪಿನ ಸತ್ಯಾಗ್ರಹ, ಶಿವಪುರದ ದ್ವಜ ಸತ್ಯಾಗ್ರಹ, ಈಸೂರು ದಂಗೆ,  ವಿದುರಾಶ್ವತದ ಮಾರಣಹೋಮ … ಇಂತಹ ಚರಿತ್ರೆ ಪುಟಗಳಲ್ಲಿ ಬರೆಯಬಲ್ಲಂತ ಸಂದರ್ಭಗಳನ್ನ ಈ ನಾಟಕದಲ್ಲಿ ಕಟ್ಟಿಕೊಟ್ಟು ಅದಕ್ಕಾಗಿ ಬಲಿದಾನ ಮಾಡಿದಂತ ಸರ್ವಸ್ವವನ್ನು ಕಳೆದುಕೊಂಡಂತಹ ಸ್ವಾತಂತ್ರ್ಯ ಯೋಧರ ಸ್ಮರಣೆಯನ್ನು ಮಾಡುವಂತಹ ಪ್ರಯತ್ನದಲ್ಲಿ ಒಂದೊಂದು ದೃಶ್ಯವನ್ನು ಮನದಟ್ಟಾಗುವಂತೆ ಮೂಡಿಸಲಾಗಿದೆ. ಸ್ವಾತಂತ್ರ್ಯಾನಂತರದ ನಾಲ್ಕು ಸಿಂಹಗಳ ತತ್ವಗಳನ್ನು ದೇಶದ ಪ್ರಜೆಗಳಿಗೆ ಅವು ಸಾರಬಹುದಾದ ಸಂದೇಶಗಳನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ

 BMM_8687.JPG



Related posts

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆಯ ಕಾರ್ಯಕ್ರಮ

Mumbai News Desk

ಭಾರತ್ ಬ್ಯಾಂಕಿನ ಬೈಕುಲ್ಲಾ ಶಾಖೆಯಲ್ಲಿ 49ನೇ ಸಂಸ್ಥಾಪನಾ ದಿನಾಚರಣೆ: ಯಶಸ್ವಿ ಆಚರಣೆ

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk

ಬಂಟರ ಸಂಘ ಮುಂಬಯಿ, ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿ ವಾರ್ಷಿಕ ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ, ವಿಧವಾವೇತನ, ಆರ್ಥಿಕ ನೆರವು ವಿತರಣೆ,

Mumbai News Desk

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk

ಶಾರದೆಯ ವೈಭವ: ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಸಂಭ್ರಮ

Mumbai News Desk