September 6, 2026
Mumbai News Kannada
ಮುಂಬಯಿ

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.





     

   ಬಂಟರ ಪ್ರತಿಷ್ಟಿತ ಸಂಸ್ಥೆ ಮೀರಾ ಡಹಾಣೂ ಬಂಟ್ಸ್ ಇದರ ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಇದೇ  ತಾ.09 ಮಾರ್ಚ್ ಶನಿವಾರದಂದು ಸಂಜೆ ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು. ಬೊಯಿಸರ್ ನ ಪ್ರೀಮಿಯಮ್ ಹೋಟೆಲ್ ರೆಯಾಂಶ್ ಪ್ರೈಡ್ ನಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ  ಕಳೆದ ಫೆಬ್ರುವರಿ ತಾ.10 ರಂದು ವಿರಾರ್ ನಲ್ಲಿ    ಜರಗಿದ ಸಂಸ್ಥೆಯ ಕ್ರೀಡಾ ಉತ್ಸವದಲ್ಲಿನ ವಿಜೇತ ಸದಸ್ಯರನ್ನು ಗೌರವಿಸಲಾಯಿತು. ಹಾಗೂ ಇತ್ತೀಚೆಗೆ ಸರಾವಲಿ ಗ್ರಾಮಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಲತಾ ಜಗದೀಶ್ ಶೆಟ್ಟಿ ಇವರನ್ನು ಸತ್ಕರಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟೀ ಕೆ.ಭುಜಂಗ ಶೆಟ್ಟಿ , ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಹಾಗೂ ಮಹಿಳಾ ಮತ್ತು ಯುವ ವಿಭಾಗ ಸೇರಿದಂತೆ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ” ಇದೇ ಮೊದಲ ಬಾರಿ ಎಂಬಂತೆ ಇಂದು ಜರಗಿದ ಈ  ಸ್ನೇಹ ಸಮ್ಮಿಲನದ ಮೂಲಕ ನಮ್ಮ ಸಮಾಜದ ಯುವಕರನ್ನು ಉತ್ತೇಜಿಸುವುದು ಹಾಗೂ ಡಹಾಣೂವಿನಿಂದ ಪಾಲ್ಘರ್ ತನಕ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಂಟಬಾಂಧವರನ್ನು ಒಗ್ಗೂಡಿಸಿ ಪರಿಚಯ ಸಂಬಂಧ ಬೆಳೆಸುವುದು ಈ ಸುಂದರ ಸಂಜೆಯ ಕಾರ್ಯಕ್ರಮದ ಉದ್ದೇಶವಾಗಿದೆ ” ಎಂದು ಕೆ.ಭುಜಂಗ ಶೆಟ್ಟಿ ವಿವರಿಸಿ ಶುಭ ಹಾರೈಸಿದರು. 

   ವಿವಿಧ ಮನೋರಂಜನಾ ಆಟಗಳಲ್ಲಿ ಸದಸ್ಯರ ಮಕ್ಕಳು ಹಾಗೂ ಮಹಿಳೆಯರು ಭಾಗವಹಿಸಿದ್ದು ಪ್ರೀತಿ ಭೋಜನದೊಂದಿಗೆ  ಕಾರ್ಯಕ್ರಮ ಸಂಪನ್ನಗೊಂಡಿತು.

ಚಿತ್ರ  ಹಾಗೂ ವರದಿ :

ಪಿ.ಆರ್.ರವಿಶಂಕರ್ 8483980035



Related posts

ಕಲ್ಯಾಣ್- ಉಲ್ಲಾಸನಗರ ಕನ್ನಡಿಗರಿಂದ ಮಾರಣಕಟ್ಟೆ ಮೇಳದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ಪ್ರದರ್ಶನ’

Mumbai News Desk

ನಾರಿ ಶಕ್ತಿ ಬಳಗ ಪನ್ವೇಲ್ – ಆಟಿದ ತಿರ್ಲ್ – ಆಷಾಢೋತ್ಸವ , ಆಷಾಢ ಕವಿಗೋಷ್ಠಿ‌ ಕಾರ್ಯಕ್ರಮ

Mumbai News Desk

ಬಾಂಬೆ ಬಂಟ್ಸ್ ಅಸೋಷಿಯೇಶನಿನ ಮಹಿಳಾ ವಿಭಾಗದಿಂದ” ನಾರಿ ಉತ್ಸವ “

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ : ಭಕ್ತಿ ಸಂಭ್ರಮದ   ಪಲ್ಲಕ್ಕಿ ಉತ್ಸವ, .

Mumbai News Desk

ರಾವಲ್‌ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ 40ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಬಂಟರ ಸಂಘ ಮುಂಬೈ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Mumbai News Desk