July 23, 2026
Mumbai News Kannada
ಕರಾವಳಿ

ಕುಲಶೇಖರ ಶ್ರೀ ವೀರನಾರಾಯಣ  ದೇವಸ್ಥಾನದ ಮೇಲ್ಟಾವಣಿಗೆ ಗುದ್ದಲಿ ಪೂಜೆ ,







ಶ್ರೀ ಕ್ಷೇತ್ರ  ಸುಂದರ ಮಾಯವಾಗುತ್ತದೆ ;ಮಾಣಿಲ ಶ್ರೀ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡು ಸುಂದರವಾಗಿ ದೈವಿಕವಾಗಿ ಪುನರ್ ನಿರ್ಮಾಣ ಗೊಂಡ  ದೇವಸ್ಥಾನದ ಅಂಗಣವನ್ನು ಮಳೆ, ಬಿಸಿಲಿನಿಂದ ರಕ್ಷಿಸಿ, ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 60 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕ್ಷೇತ್ರಕ್ಕೆ ಮೇಲ್ಟಾವಣಿ  ನಿರ್ಮಾಣಕ್ಕಾಗಿ

ಗುದ್ದಲಿ ಪೂಜೆ ಮಾ29ನೇ ಶುಕ್ರವಾರ ಬೆಳಿಗ್ಗೆ  ಸುಮುಹೂರ್ತದಲ್ಲಿ ಶ್ರೀಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ  ಅನಂತ ಉಪಾಧ್ಯಾಯರ ಮತ್ತು ಶ್ರೀ ಹರಿ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು,

ಆಡಳಿತ ಮೊತ್ತೇಸರರು ಪುರುಷೋತ್ತಮ ಕುಲಾಲ್ ಕಲ್ಬಾವಿ,, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಯವರು ಉಪಸ್ಥಿತಿಯಲ್ಲಿ, ಮುಂಬೈಯ ದಾನಿ ದೇವಕಿ ಸುನಿಲ್ ಸಾಲಿಯನ್, ಡಾ. ಸುರೇಖಾ ರತನ್ ಕುಲಾಲ್ಇವರ ಯಜಮಾನಿಕೆಯಲ್ಲಿ ಧಾರ್ಮಿಕ ವಿಧಿಗಳು  ನಡೆದವು.

ಮಾಣಿಲ ಶ್ರೀಗಳು ಆಶೀರ್ವಚನ ನೀಡಿ ಕ್ಷೇತ್ರದಲ್ಲಿ ಧರ್ಮ ಕಾರ್ಯಗಳು ನಡೆಯುತ್ತಿರುವಾಗ  ಭಕ್ತರಿಗೆ  ಅನುಕೂಲಕ್ಕಾಗಿ  ಮತ್ತು ದೇವಸ್ಥಾನದ ಮಳೆ ಬಸಿಲಿನ ರಕ್ಷಣೆಗಾಗಿ,ಧ್ಯಾನ ಮತ್ತು  ಶುಭ ಕಾರ್ಯಗಳು ನಡೆಯುವುದಕ್ಕೆ ಸುತ್ತಲು ಮೇಲ್ಟಾವಣಿಗೆ ಅಗತ್ಯ ವಾಗಿದೆ ಅದರ ಯೋಜನೆಯನ್ನು ರೂಪಿಸಿ ಇರುವುದು ಅಗತ್ಯವಾಗಿತ್ತು ಈ ಮೂಲಕ ಕ್ಷೇತ್ರ ಇನ್ನಷ್ಟು ಸುಂದರಮಯವಾಗಲಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾದ ಎ ದಾಮೋದರ್  , ಸೇವ ಟ್ರಸ್ಟ್ ನ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ಸೇವಾ ಸಮಿತಿಯ ಅಧ್ಯಕ್ಷ ಕೆ. ಸುಂದರ ಕುಲಾಲ್ ಶಕ್ತಿನಗರ, ಮಹಿಳಾ ಮಂಡಳಿಯ ಅಧ್ಯಕ್ಷ  ಗೀತಾ ಮನೋಜ್ ಮರೋಳಿ,  ನ್ಯಾ. ರವೀಂದ್ರ ಮುನ್ನಿ ಪಾಡಿ, ಸುರೇಶ್ ಕುಲಾಲ್ ಮಂಗಳದೇವಿ ,ಗಿರಿಧರ್  ಜೆ ಮೂಲ್ಯ , ಕಸ್ತೂರಿ ಪಂಜ , ರೂಪ ಬಂಗೇರ,ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು  ಅಧ್ಯಕ್ಷ ನ್ಯಾ.ಭಾಸ್ಕರ್ ಪೆರುವಾಯಿ, ಎಂ .ಪಿ ಬಂಗೇರ,ಸದಾಶಿವ ಕುಲಾಲ್,  ನ್ಯಾ. ರಾಮ್ ಪ್ರಸಾದ್ ,ಪ್ರವೀಣ್ ಬಸ್ತಿ ,  ನ್ಯಾ. ಉದಯಾನಂದ  ,ದಿನೇಶ್ ಕುಲಾರ್ ಮುಂಬಯಿ, ಗಂಗಾಧರ್ ಬಂಜನ್, ಲl ಅನಿಲ್ ದಾಸ್. ನಾಗರಾಜ್ ಸುರತ್ಕಲ್, ಕಾರ್ಪೊರೇಟರ್ ಗಣೇಶ್ ಕುಲಾಲ್, ಆನಂದ ಉರ್ವ , ಮೋಹನ ದಾಸ್ ಅಲಪೆ, ಧೂಮಪ್ಪ ಮಂದಾರ ಬೈಲು, ವಿಶ್ವನಾಥ್ ಬಂಗೇರ,ನಾಗವೇಣಿ, ಚಂದ್ರಪ್ರಭ, 

ಸಿವಿಲ್ ಗುತ್ತಿಗೆದಾರ ಹೊನ್ನಪ್ಪ ಕುಲಾಲ್, ಸುರೇಶ್ ಕುಲಾಲ್ ಮುಂಬೈ, ವಿಶ್ವನಾಥ್ ವಾಮಂಜೂರು, ಸದಾಶಿವ ಬಿಜೈ, ವಿನಯ್ ಕುಮಾರ್.ಮತ್ತಿತರ ಗಣ್ಯರು ,ಭಕ್ತರು ಪಾಲ್ಗೊಂಡಿದ್ದರು,

Show quoted text



Related posts

ಶ್ರೀ ಮಣಿಕಂಠನ ಸನ್ನಿಧಾನಕ್ಕೆ ಉಪೇಂದ್ರ ಸ್ವಾಮಿಯರ 24ನೇ ವರ್ಷದ ಪಾದಯಾತ್ರೆ.

Mumbai News Desk

ಸಾಕ್ಷಿ ಆರ್ ಶೆಟ್ಟಿ ಶೇ.95.15 ಅಂಕ

Mumbai News Desk

ಪ್ರಸಾದ್ ಎನ್ ಮೂಲ್ಯ 89.33% ಅಂಕ 

Mumbai News Desk

ಯಕ್ಷ ಧ್ರುವ ಕೇಂದ್ರ ಮಹಿಳಾ ಘಟಕದ ವಾರ್ಷಿಕೋತ್ಸವ

Mumbai News Desk

ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ50,000 ರೂ. ದೇಣಿಗೆ ಘೋಷಣೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ಜಿಲ್ಲೆಯ ಅಧ್ಯಕ್ಷರಾಗಿ ಡಿ ಆರ್ ರಾಜು. ಕಾರ್ಯದರ್ಶಿಯಾಗಿ ಅರುಣ್ ಪ್ರಕಾಶ್ ಶೆಟ್ಟಿಯ ವರಿಗೆ ಅಧಿಕಾರ ಹಸ್ತಾಂತರ.

Mumbai News Desk