September 6, 2026
Mumbai News Kannada
ಸುದ್ದಿ

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ – ಬಿಜೆಪಿಯ ಡಾ. ಧನಂಜಯ ಸರ್ಜಿ ಗೆ ಭಾರಿ ಗೆಲುವು ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆ ಸೋಲು.






ಎಲ್ಲರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಧನಂಜಯ್ ಸರ್ಜಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಆರಂಭವಾದ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ ತನಕ ನಡೆಯಿತು.


ಮತ ಏಣಿಕೆಯ ಆರಂಭದ ಸುತ್ತಿನಿಂದಲೇ ಧನಂಜಯ ಸರ್ಜಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಗೆ ಡಾ. ಸರ್ಜಿ ಅವರು ಕಾಂಗ್ರೇಸ್ ನ ಆಯನೂರು ಮಂಜುನಾಥ್ ಅವರನ್ನು 24,112 ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ಮೇಲ್ಮನೆ ಪ್ರವೇಶಿಸಿದರು. ಈ ಮೂಲಕ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿದ್ದ ಬಿ. ಜೆ. ಪಿ – ಜೆ. ಡಿ. ಎಸ್ ಕೂಟ ಮೂರು ಕ್ಷೇತಗಳಲ್ಲಿ ಗೆಲುವು ಸಾಧಿಸಿದೆ.


ಬಿ. ಜೆ. ಪಿ ಯಿಂದ ಬಂಡಾಯ ಸ್ಪರ್ಧೆ ಮಾಡಿದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಸೋತು ಮುಖಭಂಗವಾಗಿದೆ.
ಡಾ. ಧನಂಜಯ ಸರ್ಜಿ ಅವರಿಗೆ 37,627, ಕಾಂಗ್ರೇಸ್ ನ ಆಯನೂರು ಮಂಜುನಾಥ್ ಗೆ 13,516, ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಗೆ 7039, ಹಾಗೂ ಎಸ್. ಪಿ. ದಿನೇಶ್ 2518 ಮತಗಳನ್ನು ಪಡೆದರು.
ಚುನಾವಣೆಯಲ್ಲಿ ಸೋತಿರುವ ರಘುಪತಿ ಭಟ್ ಅವರನ್ನು ಪಕ್ಷ ಉಚ್ಚಾಟಿಸಿದ್ದು, ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎದುರಾಗಿದೆ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿ ಜೆ ಪಿ ಗೆ ಮರಳುವೆ ಎಂದು ಭಟ್ ಚುನಾವಣೆಗೂ ಮುನ್ನ ತಿಳಿಸಿದ್ದು, ಇದೀಗ ಬಿ. ಜೆ. ಪಿ. ಹೈಕಮಾಂಡ್ ಯಾವ ನಿರ್ದಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.



Related posts

ಅಯೋಧ್ಯೆಯಲ್ಲಿ ರಾಮಲಲ್ಲನ ಮೂರ್ತಿ ಪ್ರತಿಷ್ಠಾಪಿಸಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಮುಂಬೈ ಜನತೆಯ ಭವ್ಯ ಸ್ವಾಗತ,

Mumbai News Desk

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ,   ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಸರೋಜ ಶೆಟ್ಟಿ ಆಯ್ಕೆ.

Mumbai News Desk

ಮೂಳೂರು: ಬಿಕ್ರಿಗುತ್ತು ಶಕುಂತಳಾ ಡಿ ಹೆಗ್ಡೆ ನಿಧನ

Mumbai News Desk

ಬಗ್ವಾಡಿ, ಬಚ್ಚು ಸಿ ಕುಂದರ್ ನಿಧನ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ  ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಸೇವಾಲಯ ಸೇವಾ ಸಮಿತಿ ಟ್ರಸ್ಟ್ ಬೆಂಗಳೂರು ವತಿಯಿಂದ ಪಿ.ಶಿವ ಕುಮಾರ್ ಅವರಿಗೆ ಸನ್ಮಾನ.

Mumbai News Desk