32 C
Mumbai
March 7, 2026
Mumbai News Kannada
ಪ್ರಕಟಣೆ

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ





ಡೊಂಬಿವಲಿ ಯಕ್ಷಕಲಾ ಸಂಸ್ಥೆ ಸಂಚಲಕತ್ವದ ಶ್ರೀ ಜಗದಂಬ ಮಂದಿರದಲ್ಲಿ ವರ್ಷಂಪ್ರತಿ ಜರಗುವ
ನಾಗರ ಪಂಚಮಿ ಉತ್ಸವವು
ಇದೇ ಬರುವ ತಾ. 9/08/2024 ಶುಕ್ರವಾರ ಬೆಳ್ಳಿಗೆ 8.00ರಿಂದ ಶ್ರೀ ಜಗದಂಬ ಮಂದಿರದಲ್ಲಿ ಜರಗಲಿದೆ.

ಈ ಪ್ರಯುಕ್ತ ಬೆಳಿಗ್ಗೆ 8.00ಗಂಟೆಗೆ ನಿತ್ಯ ಪೂಜೆ ಪಂಚಾಮೃತ ಅಭಿಷೇಕ ಸೀಯಾಳ ಅಭಿಷೇಕ 9.00 ಗಂಟೆಗೆ ಪ್ರದಾನ ಹೋಮ 10.00ರಿಂದ ನಾಗತನು ಅಭಿಷೇಕ 11.00ಗಂಟೆಗೆ ಆಶ್ಲೇಷಾ ಬಲಿ 12.00 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಮದ್ಯಾಹ್ನ 1.00ಗಂಟೆಗೆ ಸರಿಯಾಗಿ ಅನ್ನಸಂತರ್ಪಣೆ ಜರಗಲಿದೆ.

ಈ ನಿಮಿತ್ತ ಭಕ್ತಾಭಿಮಾನಿಗಳು ಈ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಜಗದಂಬ ಅಮ್ಮನವರು, ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ನಾಗದೇವರು ಹಾಗೂ ನವಗ್ರಹ ದೇವರ ಅನುಗ್ರಹವನ್ನು ಪಡೆದು ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ಮಂದಿರದ ಪರವಾಗಿ ಗೌ. ಅಧ್ಯಕ್ಷರು, ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಮಹಿಳಾ ಸದಸ್ಯರು, ಯುವ ಸದಸ್ಯರು, ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.

ನಾಗತನು ಅಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆ ಮಾಡುವ ಭಕ್ತರು ಮಂದಿರದ ಸೇವಾ ಕಚೇರಿಯಲ್ಲಿ ಪಾವತಿ ಮಾಡತಕ್ಕದ್ದು.
ಸೀಯಾಳ ಹಾಗೂ ಹಾಲು ಮಂದಿರದಲ್ಲಿ ಲಭ್ಯವಿದೆ
ಹೆಚ್ಚಿನ ಮಾಹಿತಿ ಹಾಗೂ ಪೂಜಾ ಸೇವೆಗೆ ಕರೆಮಾಡಬಹುದು.
ರವೀಂದ್ರ ಭಟ್ಟ (ಅರ್ಚಕರು) – 9380359549
ರಾಜೇಶ್ ಸಿ ಕೋಟ್ಯಾನ್ (ಕಾರ್ಯದರ್ಶಿ), – 9930026134
ದಿವಾಕರ್ ಜಿ ರೈ – (ಅಧ್ಯಕ್ಷರು) – 8828680320
ಸಂತೋಷ್ ಶೆಟ್ಟಿ – (ಖಜಾಂಜಿ) – 9819757038

ಸೂಚನೆ: ನಾಗದೋಷ ನಿವಾರಣೆ ಪೂಜೆ ಮಾಡುವ ಭಕ್ತರು ಮುಂಚಿತವಾಗಿ ತಿಳಿಸಬೇಕೆಂದು ವಿನಂತಿ.



Related posts

ನ.21 ರಂದು ಬಿಲ್ಲವರ ಅಸೋಸಿಯೇಷನ್, ಮುಂಬಯಿ – ಕಲ್ವಾ ಸ್ಥಳೀಯ ಕಛೇರಿಯ ರಜತ ಮಹೋತ್ಸವದ ಸಂಭ್ರಮ

Mumbai News Desk

ಜ‌ 5, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ, 42 ವರ್ಷದ ಮಹಾಪೂಜೆ ಇರುಮುಡಿ ಸೇವೆ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ :ನಾಳೆ (ನ. 30) ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ಇಂದು ಕಾಪು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಅವರ ಸಂಸ್ಕರಣೆ

Mumbai News Desk

ಮಲಾಡ್: ಜ. 3ರಂದು ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಅಯ್ಯಪ್ಪ ಮಹಾಪೂಜೆ

Mumbai News Desk

ಜ. 22 ರಂದು ಡೊಂಬಿವಲಿಯ ಶ್ರೀ ಜಗದಂಬ ಮಂದಿರದಲ್ಲಿ ಅಯೋಧ್ಯ ಮೂರ್ತಿ ಪ್ರತಿಷ್ಠೆಯ ಅಂಗವಾಗಿ ವಿಶೇಷ ಪೂಜೆ

Mumbai News Desk