July 23, 2026
Mumbai News Kannada
ಸುದ್ದಿ

ತೀಯಾ ಫ್ಯಾಮಿಲಿ ಯು.ಎ.ಇ.ಯ  ವತಿಯಿಂದ ಭಕ್ತಿ ಸಡಗರದ ದುರ್ಗಾ ಪೂಜೆ 







ದುಬಾಯಿ : ತೀಯಾ ಫ್ಯಾಮಿಲಿ ಯು.ಎ.ಇ.ಯ ಇವರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ದುರ್ಗ ಪೂಜೆಯು ಪೂಜೆಯು ಭಕ್ತಿ ಸಡಗರದಿಂದ ಜರುಗಿತು.

      ನಗರದ ಬರ್ ದುಬೈಯ ಸಿಂಧೆ ಸೆರೊಮಣಿ ಸಭಾಂಗಣದಲ್ಲಿ ಅಕ್ಟೋಬರ್ 29 ರಂದು ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರುಗಿತು. ಯುಎಇಯ ಎಲ್ಲಾ ರಾಜ್ಯದ ನೂರಾರು ಭಕ್ತಾದಿಗಳು,ತೀಯಾ ಸಮಾಜ ಬಾಂಧವರು ಪೂಜೆಯಲ್ಲಿ ಪಾಲ್ಗೊಂಡು ಪುನಿತರಾದರು.

   ದುರ್ಗ ಪೂಜೆಯ  ಪ್ರತಿನಿದಿಯಾಗಿ  ಸಂಸ್ಥೆಯ ಕೋಶಾಧಿಕಾರಿ ಶ್ರೀನಿವಾಸ ಕೋಟ್ಯಾನ್ ಮತ್ತು ಶ್ರೀಮತಿ ಸರೀತ ಕೋಟ್ಯಾನ್ ದಂಪತಿಗಳು ಕುಳಿತುಕೊಂಡಿದ್ದರು.

     ರಾಜರಾಜೇಶ್ವರಿ ಭಜನಾ ಮಂಡಳಿ ದುಬೈಯ ವತಿಯಿಂದ ಭಜನೆ, ತೀಯಾ ಸಮಾಜದ ಮಹಿಳೆಯರಿಂದ ಕುಣಿತ ಭಜನೆ ಮತ್ತು ಮಹಾ ಮಂಗಳಾರತಿ ನಂತರ ಅನ್ನ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

      ತೀಯಾ ಸಮಾಜ ಯ.ಎ.ಇ.ಯ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆಯವರು ಪೂಜೆಯಲ್ಲಿ ಅತ್ಯುತ್ತಮ ಭಜನಾ ಕಾರ್ಯಕ್ರಮ ಏರ್ಪಡಿಸಿದ್ದ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರನ್ನು, ಪೂಜಾ ಮಂಟಪವನ್ನು ತಯರಿಸಿದ ದೀಪಕ್ ರಾಜ್ ,ಪುರಂದರ ಶೆಟ್ಟಿಗಾರ್  ಮತ್ತು ಮಾದ್ಯಮದ ಮಿತ್ರರನ್ನು ಅಭಿನಂದಿಸಿದ್ದರು.ಹಾಗೂ ಯು.ಎ.ಇ.ಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಮತ್ತು ಪೂಜೆಗೆ ಆಗಮಿಸಿದ ಭಕ್ತಾದಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು.



Related posts

GST 2.0 : ಸರಳೀಕರಣಗೊಂಡ ಹೊಸ ತೆರಿಗೆ ವ್ಯವಸ್ಥೆ – 5% ಮತ್ತು 18% ಶ್ಲಾಬ್,

Mumbai News Desk

ವಸಾಯಿ : ಹರಿಶ್ಚಂದ್ರ ಜಿ. ಕುಂದರ್ ಅವರ ಅಕಾಲಿಕ ಮರಣ

Mumbai News Desk

ಶ್ರೀನಿವಾಸ ಜೋಕಟ್ಟೆಯವರ ‘ಅದೆಲ್ಲಾ ಬಿಟ್ಟು’ ಕತಾಸಂಕಲನಕ್ಕೆಕನ್ನಡ ಸಾಹಿತ್ಯ ಪರಿಷತ್ ನ ಕೆ. ವಾಸುದೇವಾಚಾರ್ ದತ್ತಿ ಪ್ರಶಸ್ತಿ

Mumbai News Desk

ಶಾರದಾ ಎ.ಅಂಚನ್ ಇವರ ವೈದ್ಯಕೀಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

Mumbai News Desk

ಕಾಪು : ಲವ ಕರ್ಕೇರ ಅವರಿಗೆ “ಅತ್ಯುತ್ತಮ ಪೊಲೀಸ್ ಸಲಹೆಗಾರ” ಮತ್ತು “ಅತ್ಯುತ್ತಮ ಪೊಲೀಸ್ ಸ್ನೇಹಿತ” ಗೌರವಾರ್ಪಣೆ

Mumbai News Desk

ಬಜೆ ಮೊಗವೀರ ಸುವರ್ಣ ಆದಿ ಮೂಲಸ್ಥಾನ, ಮುಂಬಾಯಿ ಶಾಖೆಯ 100ನೇ ಮಹಾಸಭೆ

Mumbai News Desk