30.5 C
Mumbai
June 8, 2026
Mumbai News Kannada
ಕ್ರೀಡೆ

ದುಬೈಯಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನ್ಷಿಪ್ ನಲ್ಲಿ 2 ಬೆಳ್ಳಿ ,1 ಕಂಚಿನ ಪದಕ ಪಡೆದ ಜಯಂತಿ ದೇವಾಡಿಗ.





ಕಳೆದ ತಿಂಗಳು ದುಬೈಯಲ್ಲಿ 35 ಕ್ಕೂ ಅಧಿಕ ವರ್ಷದ ಮಹಿಳೆಯರಿಗಾಗಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ,ಭಾರತ ದೇಶವನ್ನು ಪ್ರತಿನಿಧಿಸಿದ , ಮುಂಬೈ ಯ ಕ್ರೀಡಾ ಪಟು ಜಯಂತಿ ದೇವಾಡಿಗ ಅವರು ಡಿಸ್ಕಸ್ ತ್ರೋ ಹಾಗೂ 4 x 100 ಮೀಟರ್ ನಲ್ಲಿ ಬೆಳ್ಳಿ ಪದಕ , ಹೈಜಂಪ್ ನಲ್ಲಿ ಕಂಚಿನ ಪದಕ ಗೆದ್ದು ವಿಷೇಶ ಸಾಧನೆ ಮಾಡಿದ್ದಾರೆ. ಕ್ರೀಡಾ ಕೂಟದಲ್ಲಿ ಹಲವು ರಾಷ್ಟ್ರದ ಕ್ರೀಡಾ ಪಟುಗಳು ಭಾಗಿಯಾಗಿದ್ದರು

ಸಣ್ಣ ಪ್ರಾಯದಲ್ಲೆ ಕ್ರೀಡಾ ಪಟುವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಜಯಂತಿ ಅವರು ,ತನ್ನ ಕ್ರೀಡಾ ಪ್ರತಿಭೆಗಾಗಿ ಹಲವಾರು ಬಹುಮಾನ, ಪದಕಗಳನ್ನು ಪಡೆದಿರುವರು. ಸದ್ಯ ಮೂರು ಮಕ್ಕಳ ತಾಯಿಯಾಗಿರುವ ಜಯಂತಿ ದೇವಾಡಿಗ , ಅದೇ ಹುರುಪು, ಉತ್ಸಾಹದಿಂದ ಮುಂಬೈ ಹಾಗೂ ಇತರ ರಾಜ್ಯ , ದೇಶದಲ್ಲಿ ನಡೆಯುವ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತ , ಪದಕಗಳನ್ನು ಗಳಿಸುತ್ತಾ ಸಾಧನೆ ಮಾಡುತಿರುವರು.
ದುಬೈಯಲ್ಲಿ ನಡೆದ ಕ್ರೀಡಾಕೂಟ ಜಯಂತಿ ಅವರು ಪಾಲ್ಗೊಂಡ 4ನೇ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟವಾಗಿದ್ದು, ಈ ಮೊದಲು ಆಸ್ಟ್ರೇಲಿಯಾ, ಥೈಲ್ಯಾಂಡ್, ಮಲೇಷ್ಯಾದಲ್ಲಿ ಜರಗಿದ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಜಯಂತಿ ದೇವಾಡಿಗ ಇವರು ಜೀಲ್ ಸ್ಪೋರ್ಟ್ಸ್(zeal sports ) ಹಾಗೂ ಜೀಲ್ ಫಿಟ್ನೆಸ್ ಟ್ರೈನಿಂಗ್ (zeal fitness training) ನ ಮಾಲೀಕರು.

ತನ್ನ ಸಾಧನೆಗೆ ಮೂವರು ಮಕ್ಕಳ ಪ್ರೋತ್ಸಾಹವೇ ಕಾರಣ ಎನ್ನುವ ಜಯಂತಿ ದೇವಾಡಿಗ ,ಅಂತಹ ಮಕ್ಕಳನ್ನು ಪಡೆಯಲು ನಾನು ನಿಜವಾಗಿಯೂ ಪುಣ್ಯ ಮಾಡಿದ್ದೇನೆ ಎಂದು ದನ್ಯತೆಯಿಂದ ನುಡಿಯುತ್ತಾರೆ.

ಸಮಾಜಿಕವಾಗಿಯೂ ಕ್ರಿಯಾಶೀಲಾರಾಗಿರುವ ಜಯಂತಿ , ದೇವಾಡಿಗ ಸಂಘ ಮುಂಬಯಿ ಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿಯೂ ,ಕಾರ್ಯ ನಿರ್ವಹಿಸುತ್ತಿರುವರು.
ಸಂಸಾರಿಕ , ಸಾಮಾಜಿಕ, ಬದುಕಿನೊಂದಿಗೆ ಉದ್ಯಮವನ್ನು ಮುನ್ನಡೆಸಿಕೊಂಡು, ಕ್ರೀಡೆಗಳಲ್ಲಿ ಭಾಗವಹಿಸಿ , ವಿಶಿಷ್ಟ ಸಾಧನೆ ಮಾಡುತ್ತಿರುವ ಜಯಂತಿ ದೇವಾಡಿಗರ ಬದುಕು , ಮಹಿಳೆಯರಿಗೆ ಮಾದರಿ.
ಜಯಂತಿ ದೇವಾಡಿಗ ಅವರ ಸಾಧನೆ ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ, ಇವರು ರಾಷ್ಟ್ರ ,ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಮತಷ್ಟು ಪದಕಗಳನ್ನು ಗಳಿಸಿ , ದೇಶಕ್ಕೆ ಕೀರ್ತಿ ತರಲಿ ಎಂದು ಮುಂಬಯಿ ನ್ಯೂಸ್ ಶುಭ ಹಾರೈಸುತದೆ.



Related posts

ಕರ್ನಾಟಕ ಸಂಘ ಪನ್ವೆಲ್ ನ 32ನೇ ವರುಷದ ವಾರ್ಷಿಕ ಕ್ರೀಡಾ ಕೂಟ.

Mumbai News Desk

ಸುರತ್ಕಲ್ :  ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, 

Mumbai News Desk

ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ: ಪಡುಬಿದ್ರಿ ಸಾಗರ ವಿದ್ಯಾ ಮಂದಿರದ ಧೃತಿ ರವಿ ಕುಮಾರ್ ವಿಭಾಗೀಯ ಮಟ್ಟಕ್ಕೆ ಆಯ್ಕೆ

Mumbai News Desk

ತುಳು ಸಂಘ ಬೊರಿವಲಿ ಯುವ ವಿಭಾಗದಿಂದ ಕ್ರಿಕೆಟ್ ಪಂದ್ಯಾಟ, – ಕ್ರೀಡೆಗಳು ಸಂಘದ ಅಭಿವೃದ್ದಿಗೆ ಪೂರಕವಾಗಲಿ – ಹರೀಶ್ ಮೈಂದನ್

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ವಾರ್ಷಿಕ ಮಹಾಸಭೆ : ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿ – ಲವ ಕರ್ಕೇರ.

Mumbai News Desk