30 C
Mumbai
April 24, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ ಪಶ್ಚಿಮ – ಫೆ.10ರಂದು ಶ್ರೀ ಶನೀಶ್ವರ ದೇವರ ಮಹಾಪೂಜೆ.





ಥಾಣೆ ಪಶ್ಚಿಮದ ಓಧವ್ ಬಾಗ್ ಸಮೀಪದ ಕಿಸನ್ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಶನೀಶ್ವರ ದೇವರ ಆರಾಧನೆಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಶ್ರೀ ಶನೀಶ್ವರ ದೇವರ ಮಹಾಪೂಜೆಯು ಇದೆ ಫೆ.10ರ ಶನಿವಾರದಂದು, ಓಧವ್ ಬಾಗ್ ಹಾಲ್ ನ ಪಕ್ಕದಲಿರುವ ಓಧವ್ ಬಾಗ್ ಮೈದಾನದಲ್ಲಿ, ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಪೋರ್ಟ್ ಇವರ ಮಾರ್ಗದರ್ಶನದಲ್ಲಿ ಜರಗಲಿದೆ.


ಕಾರ್ಯಕ್ರಮದ ವಿವರ :
ಬೆಳ್ಳಿಗ್ಗೆ 7 ಗಂಟೆಗೆ – ಗಣಹೋಮ
ಬೆಳ್ಳಿಗೆ 10.30ಕ್ಕೆ – ಮೆರವಣಿಗೆ (ಶ್ರೀ ಅಯ್ಯಪ್ಪ ಶಿಬಿರದಿಂದ ಪೂಜಾ ಸ್ಥಳಕ್ಕೆ )
12.00ಗಂಟೆಗೆ ಕಲಶ ಪ್ರತಿಷ್ಠೆ.
ಮಧ್ಯಾಹ್ನ 1.30ರಿಂದ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಫೋರ್ಟ್ ಇವರ ಮಾರ್ಗದರ್ಶನದಲ್ಲಿ ಮುಂಬೈಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಲ್ಲಿ ತಾಳ ಮದ್ದಳೆ ರೂಪದಲ್ಲಿ ಗ್ರಂಥ ಪಾರಾಯಣ.
ಸಂಜೆ 7.30ಕ್ಕೆ – ಭಜನೆ
ಗಂಟೆ 8ಕ್ಕೆ ಮಹಾ ಆರತಿ
ರಾತ್ರಿ 8.30ರಿಂದ ತೀರ್ಥ ಪ್ರಸಾದ, ಅನ್ನ ಮಹಾಪ್ರಸಾದ ವಿತರಣೆ.
ವಿ. ಸೂ : (1) ಮಹಾಪೂಜೆಗೆ ಧನ,ಧಾನ್ಯ ಮತ್ತು ಹಸಿರು ವಾಣಿ ಸೇವೆಯನ್ನು ಸ್ವೀಕರಿಸಲಾಗುವುದು.
2) ಶ್ರೀ ಶನಿ ಪೂಜೆ ಮಾಡಲಿಚ್ಚಿಸುವವರು ರೂಪಾಯಿ 351/ ನ್ನು ಮುಂಗಢವಾಗಿ ಕೊಟ್ಟು ತಮ್ಮ ಹೆಸರನ್ನು ನೋಂದಾಯಿಸಿ ರಶೀದಿ.ಪಡೆಕೊಳ್ಳಬೇಕಾಗಿ ವಿನಂತಿ.

ಶ್ರೀ ಶನಿಶ್ವರ ದೇವರ ಮಹಾಪೂಜೆಯಲ್ಲಿ ತಾವೆಲ್ಲರೂ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಶನಿ ದೇವರ ಮತ್ತು ಶ್ರೀ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪರವಾಗಿ ಕಾರ್ಯಕಾರಿ ಸಮಿತಿ, ಉಪ ಸಮಿತಿ, ಪೂಜಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಣೆ ಮೂಲಕ ಕೇಳಿ ಕೊಂಡಿದ್ದಾರೆ.



Related posts

ನವೆಂಬರ್ 28 ರಿಂದ ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಅಖಿಲ ಭಾರತೀಯ ವೈದ್ಯರ ಕ್ರಿಕೆಟ್ ಟೂರ್ನಮೆಂಟ್ ಆರಂಭ

Mumbai News Desk

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ

Mumbai News Desk

ಅನಿತಾ ಪಿ. ತಾಕೊಡೆ ಅವರ ಕವನ ಸಂಕಲನದ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

Mumbai News Desk

ಫೆ. 22 ರಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ವಾರ್ಷಿಕ ಶನಿಗ್ರಂಥ ಪಾರಾಯಣ

Mumbai News Desk

ಪಲಾವಾ ಕನ್ನಡಿಗರ ಫೌಂಡೇಶನ್ ಪಲಾವಾ, ಡೊಂಬಿವಲಿ : ನ. 30ಕ್ಕೆ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ೨೦೨೫-೨೬ ರ ಸಾಫಲ್ಯ ಭಾಗ್ಯ ಹಾಗು ವಿದ್ಯಾರ್ಥಿಗಳಿಗೆ ಸಹಾಯ ನಿಧಿಗೆ ಅರ್ಜಿ ಸ್ವೀಕಾರ.

Mumbai News Desk