September 6, 2026
Mumbai News Kannada
ಮುಂಬಯಿ

ಬೆಸ್ಟ್ ಡಾಕ್ಟರ್ ಅವಾರ್ಡ್ ವಿಜೇತ ಡಾ. ಸದಾನಂದ ಶೆಟ್ಟಿಯವರಿಗೆಕರ್ನಾಟಕ ಸಂಘ ಸಯನ್ ನ ವತಿಯಿಂದ ಆತ್ಮೀಯ ಸನ್ಮಾನ.





ಕರ್ನಾಟಕ ಸಂಘ, ಸಯನ್ ಇದರ ಮಹಾಪೋಷಕರಾಗಿರುವ, ಅಂತರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞ, ಡಾ.ಸದಾನಂದ ಶೆಟ್ಟಿ ಯವರು 2024 ನೇ ಸಾಲಿನ ಬೆಸ್ಟ್ ಡಾಕ್ಟರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.

ಇಂದು ಸಯನ್ ನಲ್ಲಿರುವ ಅವರ ಕ್ಲಿನಿಕ್ನಲ್ಲಿ ಸಂಘದ ವತಿಯಿಂದ ಅವರನ್ನು ಭೇಟಿಯಾಗಿ ಶಾಲು ಹೊದಿಸಿ, ಪುಷ್ಪ ಗುಚ್ಛವನ್ನಿತ್ತು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರುಗಳಾದ
ಶ್ರೀ ಸದಾಶಿವ ಶೆಟ್ಟಿ ಹಾಗೂ ಶ್ರೀ ಸದಾನಂದ ಶೆಟ್ಟಿ ಪೇಟ ತೊಡಿಸಿ, ಪುಷ್ಪ ಗುಚ್ಛವನ್ನಿತ್ತು ಗೌರವಿಸಿದರೆ, ಸಂಘದ ಸಂಸ್ಥಾಪಕ ಶ್ರೀ ಹ್ಯಾರಿ ಸಿಕ್ವೇರಾ ಶಾಲು ಹೊದಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ.ಶೆಟ್ಟಿಯವರು
ನಮ್ಮ ಸಂಘದ ಬೆಳವಣಿಗೆಗೆ ನಾವೆಲ್ಲರೂ ಸೇರಿ ದುಡಿಯಬೇಕು.
ಸಯನ್ ಪರಿಸರದಲ್ಲಿ ಕರ್ನಾಟಕ ಸಂಘವು ಕಳೆದ ವರ್ಷ ದಸರಾ ಸಮಯದಲ್ಲಿ ಹುಟ್ಟಿ ಕೊಂಡಾಗ ಬಹಳಷ್ಟು ಸಂತೋಷ ಅನುಭವಿಸಿದೆ.
ಕಳೆದ 60 ವರ್ಷಗಳಿಂದ ನಾನು ಇದೇ ಪರಿಸರದಲ್ಲಿ ಬದುಕು ಸಾಗಿಸಿದವ.
ಈ ಪರಿಸರದಲ್ಲಿ ಸಂಘ ಸಂಸ್ಥೆಗಳು ಇಲ್ಲದ ಒಂದು ಕೊರತೆ ನಮ್ಮನ್ನೆಲ್ಲ ಕಾಡುತ್ತಿತ್ತು. ಇದೀಗ ಆ ಕೊರತೆಯನ್ನು ತಾವೆಲ್ಲ ಸೇರಿ ನೀಗಿಸಿದ್ದೀರಿ.
ಇಂದು ಈ ಸಂಸ್ಥೆಯ ವತಿಯಿಂದ ದೊರೆತ ಸನ್ಮಾನ ಇದುವರೆಗೆ ನನ್ನ ಬದುಕಿನಲ್ಲಿ ದೊರೆತ ಸನ್ಮಾನಕ್ಕಿಂತ ಹೆಚ್ಚಿನ ಸಂತಸವನ್ನು ನೀಡಿದೆ ಎಂದು ನುಡಿದರು.

ಕಾರ್ಯದರ್ಶಿ ಡಾ.ಜಿ.ಕುಸುಮಾ, ಜೊತೆ ಕಾರ್ಯದರ್ಶಿ ಶ್ರೀ ದಯಾನಂದ ಮೂಲ್ಯ, ಸದಸ್ಯರುಗಳಾದ ವಾಣಿ ಪ್ರಸಾದ್ ಕರ್ಕೇರ,
ಶ್ರೀ ಚಂದ್ರ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.



Related posts

ಒಕ್ಕಲಿಗರ ಸಂಘ ಮಹಾರಾಷ್ಟ್ರದಿಂದ ಸಮಾಜದ ವಿದ್ಯಾರ್ಥಿಗಳಿಗೆ  ಶಿಕ್ಷಣ ಮಾಹಿತಿ ಶಿಬಿರ- ಪುಸ್ತಕ ವಿತರಣೆ,

Mumbai News Desk

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.

Mumbai News Desk

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಕಲಂಬೋಲಿ, ಆಟಿಡೋಂಜಿ ದಿನ

Mumbai News Desk

ಮುಂಬೈನ ದಹಿ ಹಂಡಿಗೆ ರೋಮಾಂಚನ ಮೂಡಿಸಿದ ದಾಖಲೆಯ 10 ಹಂತದ ಮಾನವ ಪಿರಮಿಡ್‌ಗಳು

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಭಾಂಡುಪ್ ಸ್ಥಳೀಯ ಕಚೇರಿಯ ಸಂಯೋಜನೆಯಲ್ಲಿ ಬಾಬು ಶಿವ ಪೂಜಾರಿ ಅವರ “ಬಿಲ್ಲವರ ಗುತ್ತು” ಗ್ರಂಥದ ಮುಂಬಯಿ ಅವೃತಿ ಬಿಡುಗಡೆ.

Mumbai News Desk

ಬಂಟ್ಸ್ ಫೋರಮ್ ಮೀರಾಭಾಯಂದರ್ ವತಿಯಿಂದ ಯಕ್ಷಗಾನ ತಾಳಮದ್ದಳೆ

Mumbai News Desk