September 6, 2026
Mumbai News Kannada
ಪ್ರಕಟಣೆ

ಸಾಫಲ್ಯ ಸೇವಾ ಸಂಘ.ಮುಂಬಯಿ ಮಾ 9;ಸಾಫಲ್ಯ ಸ್ತ್ರೀ ಶಕ್ತಿ ಕಾರ್ಯಕ್ರಮ





ಮುಂಬಯಿ ಮಾ 6.ಸಾಫಲ್ಸಾಫಲ್ಯ ಸಮಾಜ ಬಾಂಧವರ ಅಭಿವೃದ್ಧಿಗಾಗಿ ಸಾಫಲ್ಯ ಸೇವಾ ಸಂಘವು  ಮುಂಬಯಿ ಮಹಾನಗರದಲ್ಲಿ  ನಿರಂತರ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದರ ಮಹಿಳಾ ವಿಭಾಗದ ವತಿಯಿಂದಮಹಿಳಾ ದಿನಾಚರಣೆಯ ಪ್ರಯುಕ್ತ ಸಾಫಲ್ಯ ಸ್ತ್ರೀ ಶಕ್ತಿ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

 ಮಾರ್ಚ್ 9 ರ ಶನಿವಾರ ಮಧ್ಯಾಹ್ನ   3.00 ರಿಂದ ಕುರ್ಲಾ  ಬಂಟರ ಭವನದ ಆನೆಕ್ಸ್ ಹಾಲ್ ನಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಪಲ್ಯರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಾಟ್ಯಗುರು ಕುಮಾರಿ ಲತಿಕಾ ಶ್ರೀಯಾನ್, ಸಮಾಜ ಸೇವಕಿ  ಶಕುಂತಲಾ ಪುತ್ರನ್, ಲೇಖಕಿ  ಸುಮಿತ್ರಾ ಬಿ ಗುಜರನ್, ಸಂಪಾದಕಿ, ಲೇಖಕಿ ಡಾ. ಜಿ ಪಿ ಕುಸುಮಾ, ಮತ್ತು ಸಮಾಜ ಸೇವಕಿ ಸುಮಿತ್ರ ವಿ ಕುಂಜರ್ ಅತಿಥಿಗಳಾಗಿ ಆಗಮಿಸಲಿದ್ದಾರೆ. 

  ಈ ಸಂದರ್ಭದಲ್ಲಿ ಸ  ಸಾಫಲ್ಯ ಸಮಾಜದ ಯಶಸ್ವಿ ಮಹಿಳೆಯರಾದ  ರತ್ನಾ ಕುಂದರ್, ಮಂಜುಳಾ ಅಮೀನ್, ಸುನೀತಾ ಬಂಗೇರ, ಉಷಾ  ವಿ. ಸಪಳಿಗ ಹಾಗೂ ದೀಪಾ ಸುವರ್ಣ ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ,

ಕಾರ್ಯಕ್ರಮವು ಲಲಿತಾ ಸಹಸ್ರನಾಮ , ಹಳದಿ ಕುಂಕುಮ, ದಿ ಆರ್ಟ್ ಆಫ್  ಲೀವಿಂಗ್  ವಿಶೇಷ  ಕಾರ್ಯಕ್ರಮ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ  ಮನೋರಂಜನೆಗಾಗಿ ಗೇಮ್ಸ್ ಗಳನ್ನೂ ಒಳಗೊಂಡಿದೆ.   

ಸಮಾಜ ಬಾಂಧವರೆಲ್ಲರೂ  ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಸಹಕರಿಸಬೇಕಾಗಿ  ಸಾಫಲ್ಯ ಸೇವಾ ಸಂಘದ  ಪದಾಧಿಕಾರಿಗಳು  ವಿನಂತಿಸಿದ್ದಾರೆ.,

ವಿ.ಸೂ: ಕಾರ್ಯಕ್ರಮ ಮುಗಿದ ಬಳಿಕ ಕುರ್ಲಾ ರೈಲ್ವೆ ಸ್ಟೇಷನ್ ಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

💫 Subscribe, Like, Share



Related posts

ಮೂಲ್ಕಿ: ಮಾರ್ಚ್ 10ರಂದು, ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ತುಳುನಾಡ್ಡ ತುಳು ಗಾದೆಲು’ ಕೃತಿ ಲೋಕಾರ್ಪಣೆ

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರಿಂದ ಎ. 25ರಂದು ಭಜನಾ ಮಂಡಳಿ ಉದ್ಘಾಟನೆ

Mumbai News Desk

ನವೆಂಬರ್ 23ರಿಂದ ಸತತ 17ನೇ ವರ್ಷದ ಮುಂಬಯಿ ಪ್ರವಾಸದಲ್ಲಿ ಕರಾವಳಿಯ ಪ್ರಸಿದ್ಧ ನಾಟಕ ತಂಡಕಿನ್ನಿಗೋಳಿ

Mumbai News Desk

ಅನಿತಾ ಪಿ. ತಾಕೊಡೆ ಅವರ ಕವನ ಸಂಕಲನದ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

Mumbai News Desk

ನ. 8-9, ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ66ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk