30 C
Mumbai
April 24, 2026
Mumbai News Kannada
ಸುದ್ದಿ

ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ, ಮಲ್ಪೆ – ರಕ್ತದಾನ ಶಿಬಿರ





ಶ್ರೀ ಶಿವ ಪಂಚಾಕ್ಷರಿ ಟ್ರಸ್ಟ್ ‌ರಿ. ಕೊಳ _ ಮಲ್ಪೆ, ಡಾ‌ ಜಿ.ಶಂಕರ್ ‌ಪ್ಯಾಮಿಲಿ‌ ಟ್ರಸ್ಟ್ ‌ರಿ. ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ,ರಕ್ತನಿಧಿ ‌ವಿಭಾಗ ಕೆಎಂಸಿ‌ ಮಣಿಪಾಲ‌ ಇವರ ಸಹಕಾರದಲ್ಲಿ ದಿನಾಂಕ‌ 10/03/2024 ಆದಿತ್ಯವಾರ ಶ್ರೀ ಶಿವ ಪಂಚಾಕ್ಷರಿ ಭಜನ ಮಂದಿರ ಮಲ್ಪೆ ಕೊಳ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ಉಡುಪಿ ಕಡಲ ತೀರದಲ್ಲಿ ‌ಸುಮಾರು 100ಕ್ಕೂ ಅಧಿಕ ಭಜನ ಮಂದಿರಗಳಿದ್ದು ಈ ಭಜನ ಮಂದಿರಗಳು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವೆ ತೊಡಗಿಕೊಂಡರೆ ಶ್ರೀ ಶಿವ ಪಂಚಾಕ್ಷರಿ ‌ಟ್ರಸ್ಟ್ ಧಾರ್ಮಿಕ, ಸಾಂಸ್ಕೃತಿಕ, ಸಮಾಜಸೇವೆಯೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಸಿ ರೋಗಿಗಳ ಜೀವ ಉಳಿಸುವ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಇತರ ಭಜನ ಮಂದಿರಾಗಳಿಗೆ ಪ್ರೇರಣೆಯಾಗಿದೆ. ಟ್ರಸ್ಟ್ ಮೂಲಕ ಇನ್ನಷ್ಟು ಶೈಕ್ಷಣಿಕ ಆರೋಗ್ಯ ಸೇವೆಗಳು ಮುಂದಿನ ದಿನಗಳಲ್ಲಿ ನಡೆಯಲಿ ಎಂದು ಹಾರೈಸಿದರು.


ಶ್ರೀ ನಾರಾಯಣ ಸಾಲ್ಯಾನ್ ಅಧ್ಯಕ್ಷರು, ಶ್ರೀ ಶಿವ ಪಂಚಾಕ್ಷರಿ ‌ಭಜನ ಮಂದಿರಾ ಮಲ್ಪೆ ಕೊಳ ಸಭೆಯ ಅಧ್ಯಕ್ಷತೆ ವಹಿಸಿದರು. ಶ್ರೀ ಮಂಜು ಕೊಳ ರಕ್ತದಾನ ಶಿಬಿರದ ಆಯೋಜನ‌ ಪ್ರಮುಖರು, ಡಾ . ಸುಮಾಂಕಿತ ವೈದ್ಯರು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಶ್ರೀ ವಿಕ್ರಮ್ ಶ್ರೀಯಾನ್, ಸದಸ್ಯರು, ಶ್ರೀ ಶಿವಪಂಚಾಕ್ಷರಿ ಟ್ರಸ್ಟ್ ರಿ. ಮಲ್ಪೆ ಕೊಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ರವಿರಾಜ್ ಸಾಲ್ಯಾನ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ‌ನಿರೂಪಿಸಿದರು, ಶ್ರೀ ರಾಕೇಶ್ ಅಮೀನ್ ಧನ್ಯವಾದ ಅರ್ಪಿಸಿದರು.ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ ‌86 ಯೂನಿಟ್ ರಕ್ತವನ್ನು ‌ಸಂಗ್ರಹಿಸಲಾಯಿತು

.



Related posts

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ‌ ಸ್ಥಳೀಯ ಕಚೇರಿಯ ಕಾರ್ಯಕರ್ತರಿಂದ ದಿ. ನಾಗೇಶ್ ಕೋಟ್ಯಾನ್ ರವರಿಗೆ ಶ್ರದ್ಧಾಂಜಲಿ.

Mumbai News Desk

ದೇಗುಲಗಳು ಸರಕಾರದ ವಶದಿಂದ ಮುಕ್ತಗೊಳ್ಳಲಿ : ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

Mumbai News Desk

ಖ್ಯಾತ ಸಾಹಿತಿ ಕಮಲ ಹಂಪನಾ ಇನ್ನಿಲ್ಲ

Mumbai News Desk

‘ನೆಲೆ ಫೌಂಡೇಶನ್ ‘ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿ 2025

Mumbai News Desk

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನ

Mumbai News Desk

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್

Mumbai News Desk