July 24, 2026
Mumbai News Kannada
ಕರಾವಳಿ

ಶ್ರೀ ದ್ವಾರಕಾಮಾಯಿ ಮಠ ಶಂಕರಪುರ : ಅರ್ಥಪೂರ್ಣವಾಗಿ ಜರಗಿದ ವಿಶ್ವ ಪ್ರಾಣಿ, ಪಕ್ಷಿಗಳ ಮೋಕ್ಷ ದಿನಾಚರಣೆ







ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶ್ರೀ ಕ್ಷೇತ್ರ ಶಂಕರಪುರ ಇದರ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ ಕಾರ್ಯಕ್ರಮ ಮಾರ್ಚ್ 16ರಂದು ದೇವಾಲಯದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೋಕ್ಷಕಟ್ಟೆಯಲ್ಲಿ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದ ಶ್ರೀ ಸಾಯಿ ಈಶ್ವರ ಗುರೂಜಿ ಮುಂದಿನ ದಿನಗಳಲ್ಲಿ ಪ್ರಾಣಿ-ಪಕ್ಷಿಗಳ ಮೋಕ್ಷ ದಿನಾಚರಣೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ದಿನಕ್ಕೆ ಮಾನ್ಯತೆ ದೊರೆಯುವಂತೆ ಸಂತ ಸಮಿತಿಯ ವತಿಯಿಂದ ಲೋಕಸಭಾ ಸದಸ್ಯರ ನೆರವಿನೊಂದಿಗೆ ಪ್ರಧಾನಿಗಳೊಂದಿಗೆ ಈ ಕುರಿತು ಚರ್ಚಿಸುವ ಉದ್ದೇಶವಿದೆ ಎಂದು ತಿಳಿಸಿದರು .
ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಕೂಡ ಆತ್ಮವಿದೆ ಈ ಆತ್ಮಕ್ಕೆ ಅವುಗಳು ಸತ್ತ ಬಳಿಕ ಮೋಕ್ಷ ದೊರಕುವ ನಿಟ್ಟಿನಲ್ಲಿ ಈ ರೀತಿಯ ವಿಭಿನ್ನವಾದ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಸ್ತೆ ಬದಿಯಲ್ಲಿ ಸತ್ತ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡುವ ಕಾಯಕವನ್ನು ಮಾಡುತ್ತಿರುವ ಅಜಯ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಸಾಮಾಜಿಕ ಮುಂದಾಳು ಸತೀಶ್ ವೇಣೂರು, ಮಹಿಳಾ ಸಂಚಾಲಕಿ ವಾರಿಜಾ ಕಲ್ಮಾಡಿ , ವಿಜಯ್ ಕುಂದರ್, ಸತೀಶ್ ದೇವಾಡಿಗ ,ವಿಘ್ನೇಶ್, ಸುಪ್ರೀತಾ, ಲಕ್ಷ್ಮಿ, ನೀಲೇಶ್ ಪ್ರದೀಪ್ ಮುಂತಾದವರಿದ್ದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು ಈ ಸಂದರ್ಭದಲ್ಲಿ ಮೋಕ್ಷ ಕಟ್ಟೆಯಲ್ಲಿ ಅಭಿಷೇಕ ನೆರವೇರಿಸಲಾಯಿತು.



Related posts

ಕುಲಶೇಖರ ಶ್ರೀ ವೀರನಾರಾಯಣ  ದೇವಸ್ಥಾನದ ಮೇಲ್ಟಾವಣಿಗೆ ಗುದ್ದಲಿ ಪೂಜೆ ,

Mumbai News Desk

ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ, . 22 ರಿಂದ 28ರ ತನಕ ಬ್ರಹ್ಮಕಳಸಾಭಿಷೇಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ದ್ವಿತೀಯ ಪಿಯುಸಿ ಫಲಿತಾಂಶ : ಶಶಾಂಕ್ ಗೆ ಶೇ.94 ಅಂಕ.

Mumbai News Desk

ಮಂಗಳೂರು : ಕರಾವಳಿ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನಕ್ಕೆ ಜನಪ್ರತಿನಿಧಿಗಳ ಆಗ್ರಹ

Mumbai News Desk

ಪುರಭವನದಲ್ಲಿ  ‘ಬಣ್ಣಗಳ ಭಾವಲೋಕ’ ಶಿಷ್ಯೆ-ಪ್ರಶಿಷ್ಯೆಯರ ಸಾಧನೆಯ ಸಂಭ್ರಮ: ಡಾ.ವಸುಂಧರಾ ದೊರೆಸ್ವಾಮಿ

Mumbai News Desk

ನ.21ರಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ

Mumbai News Desk